Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಬುದ್ಧ ಮಹಾಗುರು
Share:
Poems January 4, 2020 ಪದ್ಮಾಲಯ ನಾಗರಾಜ್

ನನ್ನ ಬುದ್ಧ ಮಹಾಗುರು

ನನ್ನ ಬುದ್ಧ ಮಹಾಗುರುವು…
ಧರ್ಮವಲ್ಲ ದೈವವಲ್ಲ
ನುಡಿಯಲ್ಲ ಪಡಿಯಲ್ಲ
ವಿಗ್ರಹವಲ್ಲ ಅನುಗ್ರಹವಲ್ಲ
ಸಂಭ್ರಮವಲ್ಲ ಉತ್ಸವವಲ್ಲ
ಸುಖವಲ್ಲ ದುಃಖವಲ್ಲ
ವಾದವಲ್ಲ ಬೇಧವಲ್ಲ
ಮಂತ್ರವಲ್ಲ ತಂತ್ರವಲ್ಲ
ಮಾನಾವಮಾನ ಅಲ್ಲವೇ ಅಲ್ಲ!

ನನ್ನ ಬುದ್ಧ ಮಹಾಗುರುವೆಂದರೆ
ಕಥೆಯಲ್ಲ ವ್ಯಥೆಯಲ್ಲ
ಜಾತಿಯಲ್ಲ ಜ್ಯೋತಿಯಲ್ಲ
ಬೆಡಗಲ್ಲ ಬೆರಗಲ್ಲ
ಜನುಮವಲ್ಲ ಜರೆಯಲ್ಲ
ಕೋಪವಲ್ಲ ತಾಪವಲ್ಲ
ರೂಪವಲ್ಲ ನೋಟವಲ್ಲ
ಅನ್ಯವಲ್ಲ ಅನನ್ಯವಲ್ಲ
ಧ್ಯಾನವಲ್ಲ ಧಾತನಲ್ಲ
ಅವ ಲೋಕಪರ ನಿರಂತರ…
ನನ್ನ ಬುದ್ಧಮಹಾಗುರುವು…

ಅಲ್ಲಮನ ಅಲ್ಲಗಳಲಿ
ಬಸವಣ್ಣನ ತಾಯ್ಗರುಳ ಸಂಬಂಧದಲಿ
ವೇಮನನ ವಿಮಲ ಪ್ರಜ್ಞೆಯಲಿ
ಸೂಫಿಗಳ ನಡೆಸಾರದಲಿ
ಕಬೀರನ ಕರೆಗಳಲಿ
ತಾವೋನ ತಾವಲ್ಲದ ತಾವಿನಲಿ
ಮಂಟೇದಯ್ಯನ ನೀಲಿ ಗ್ಯಾನದಲಿ
ಬಾಬಾಸಾಹೇಬರ ಮಹಾಕರುಣೆಯಲಿ
ಸದಾ ಎಚ್ಚರದಿ ಎಚ್ಚೆತ್ತುಕೊಂಡಿಹನು!!!

ಆದರೆ…
ತಪ್ಪು ನುಡಿವ ಕರ್ಮಿಯಾಗಿಹ
ಜಾತಿಬಿಡದ ನೀಚನಾಗಿಹ
ಸಂಗ್ರಹೇಚ್ಚೆಗೆ ಜಾರಿಕೊಂಡಿಹ
ನಾ ಮೇಲೆನುವ ಮದಾಂಧನಾಗಿಹ
ನನ್ನ ನಾ ಕಲ್ಪಿಸಿಕೊಳ್ಳುತ್ತಿರುವ
ನನ್ನ ನಾ ಸುಖಿಸುತ್ತಿರುವ
ನನ್ನೊಳು ನಾ ಚದುರಿಹೋಗಿರುವ
ನನ್ನೊಳು ಹುಡುಕಲು ಆತ ಎಲ್ಲಿಹನು?

Previous post ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
Next post ಗುರುಪಥ
ಗುರುಪಥ

Related Posts

ಮನವೇ ಮನವೇ…
Share:
Poems

ಮನವೇ ಮನವೇ…

May 6, 2020 Bayalu
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ// ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ ವಿಲವಿಲ ಎನ್ನುತ ನಲುಗಿದೆ ನೀನು...
ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...

Comments 6

  1. Mahantesh Mysuru
    Jan 6, 2020 Reply

    ಬುದ್ದ ಮಹಾಗುರು ಕವನ ತುಂಬಾ ಚನ್ನಾಗಿದೆ. ಮತ್ತೆ ಮತ್ತೆ ಮನನ ಮಾಡುವಂತಿದೆ. ರೂಪವಲ್ಲ ನೋಟವಲ್ಲ, ಅನ್ಯವಲ್ಲ ಅನನ್ಯವಲ್ಲ, ಧ್ಯಾನವಲ್ಲ ಧಾತನಲ್ಲ… ಸಾಲುಗಳು ಬಹಳ ಸೊಗಸಾಗಿವೆ.

  2. ಶಿವಕುಮಾರ್ ಸಾಲಿ
    Jan 8, 2020 Reply

    ಬುದ್ದನಂತಹ ಜ್ಞಾನಿಯನ್ನು ನಿಜಕ್ಕೂ ಎಲ್ಲೆಲ್ಲಿ ಕಾಣಬೇಕೆಂದು ಸೂಚಿಸಿದ ಶರಣ ನಾಗರಾಜವರಿಗೆ ವಂದನೆಗಳು

  3. Chetan M.P
    Jan 9, 2020 Reply

    ಕವನದ ಒಂದೊಂದು ಪದವೂ ಮನನಯೋಗ್ಯ

  4. Dinesh P
    Jan 14, 2020 Reply

    ಬುದ್ಧನನ್ನ ಬದುಕಿನಲ್ಲಿ ಕಾಣುವ ಸುಂದರ ಪರಿಕಲ್ಪನೆ.

  5. Jayaraj Bidar
    Jan 16, 2020 Reply

    ಬುದ್ದನನ್ನು ಎಲ್ಲಿ, ಹೇಗೆ ಹುಡುಕಿಕೊಳ್ಳಬೇಕೆಂದು ಗೊತ್ತಾಯಿತು. ಬುದ್ದನ ಜಾಗದಲ್ಲಿ ಬಸವನ ಹೆಸರು ಹಾಕಿದರೂ ಕವನಕ್ಕೆ ಚ್ಯುತಿ ಬರುವುದಿಲ್ಲ. ಮಹಾತ್ಮರನ್ನು ಹೀಗೇ ಹುಡುಕಿಕೊಳ್ಳಬೇಕು.

  6. Chinmayi
    May 15, 2021 Reply

    ಬುದ್ದ ಬುದ್ದನಿಗೇ ಸರಿ

Leave a Reply to Dinesh P Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಗುರುವಂದನೆ
ಗುರುವಂದನೆ
October 13, 2022
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
Copyright © 2025 Bayalu