Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಬುದ್ಧ ಮಹಾಗುರು
Share:
Poems January 4, 2020 ಪದ್ಮಾಲಯ ನಾಗರಾಜ್

ನನ್ನ ಬುದ್ಧ ಮಹಾಗುರು

ನನ್ನ ಬುದ್ಧ ಮಹಾಗುರುವು…
ಧರ್ಮವಲ್ಲ ದೈವವಲ್ಲ
ನುಡಿಯಲ್ಲ ಪಡಿಯಲ್ಲ
ವಿಗ್ರಹವಲ್ಲ ಅನುಗ್ರಹವಲ್ಲ
ಸಂಭ್ರಮವಲ್ಲ ಉತ್ಸವವಲ್ಲ
ಸುಖವಲ್ಲ ದುಃಖವಲ್ಲ
ವಾದವಲ್ಲ ಬೇಧವಲ್ಲ
ಮಂತ್ರವಲ್ಲ ತಂತ್ರವಲ್ಲ
ಮಾನಾವಮಾನ ಅಲ್ಲವೇ ಅಲ್ಲ!

ನನ್ನ ಬುದ್ಧ ಮಹಾಗುರುವೆಂದರೆ
ಕಥೆಯಲ್ಲ ವ್ಯಥೆಯಲ್ಲ
ಜಾತಿಯಲ್ಲ ಜ್ಯೋತಿಯಲ್ಲ
ಬೆಡಗಲ್ಲ ಬೆರಗಲ್ಲ
ಜನುಮವಲ್ಲ ಜರೆಯಲ್ಲ
ಕೋಪವಲ್ಲ ತಾಪವಲ್ಲ
ರೂಪವಲ್ಲ ನೋಟವಲ್ಲ
ಅನ್ಯವಲ್ಲ ಅನನ್ಯವಲ್ಲ
ಧ್ಯಾನವಲ್ಲ ಧಾತನಲ್ಲ
ಅವ ಲೋಕಪರ ನಿರಂತರ…
ನನ್ನ ಬುದ್ಧಮಹಾಗುರುವು…

ಅಲ್ಲಮನ ಅಲ್ಲಗಳಲಿ
ಬಸವಣ್ಣನ ತಾಯ್ಗರುಳ ಸಂಬಂಧದಲಿ
ವೇಮನನ ವಿಮಲ ಪ್ರಜ್ಞೆಯಲಿ
ಸೂಫಿಗಳ ನಡೆಸಾರದಲಿ
ಕಬೀರನ ಕರೆಗಳಲಿ
ತಾವೋನ ತಾವಲ್ಲದ ತಾವಿನಲಿ
ಮಂಟೇದಯ್ಯನ ನೀಲಿ ಗ್ಯಾನದಲಿ
ಬಾಬಾಸಾಹೇಬರ ಮಹಾಕರುಣೆಯಲಿ
ಸದಾ ಎಚ್ಚರದಿ ಎಚ್ಚೆತ್ತುಕೊಂಡಿಹನು!!!

ಆದರೆ…
ತಪ್ಪು ನುಡಿವ ಕರ್ಮಿಯಾಗಿಹ
ಜಾತಿಬಿಡದ ನೀಚನಾಗಿಹ
ಸಂಗ್ರಹೇಚ್ಚೆಗೆ ಜಾರಿಕೊಂಡಿಹ
ನಾ ಮೇಲೆನುವ ಮದಾಂಧನಾಗಿಹ
ನನ್ನ ನಾ ಕಲ್ಪಿಸಿಕೊಳ್ಳುತ್ತಿರುವ
ನನ್ನ ನಾ ಸುಖಿಸುತ್ತಿರುವ
ನನ್ನೊಳು ನಾ ಚದುರಿಹೋಗಿರುವ
ನನ್ನೊಳು ಹುಡುಕಲು ಆತ ಎಲ್ಲಿಹನು?

Previous post ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
Next post ಗುರುಪಥ
ಗುರುಪಥ

Related Posts

ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Comments 6

  1. Mahantesh Mysuru
    Jan 6, 2020 Reply

    ಬುದ್ದ ಮಹಾಗುರು ಕವನ ತುಂಬಾ ಚನ್ನಾಗಿದೆ. ಮತ್ತೆ ಮತ್ತೆ ಮನನ ಮಾಡುವಂತಿದೆ. ರೂಪವಲ್ಲ ನೋಟವಲ್ಲ, ಅನ್ಯವಲ್ಲ ಅನನ್ಯವಲ್ಲ, ಧ್ಯಾನವಲ್ಲ ಧಾತನಲ್ಲ… ಸಾಲುಗಳು ಬಹಳ ಸೊಗಸಾಗಿವೆ.

  2. ಶಿವಕುಮಾರ್ ಸಾಲಿ
    Jan 8, 2020 Reply

    ಬುದ್ದನಂತಹ ಜ್ಞಾನಿಯನ್ನು ನಿಜಕ್ಕೂ ಎಲ್ಲೆಲ್ಲಿ ಕಾಣಬೇಕೆಂದು ಸೂಚಿಸಿದ ಶರಣ ನಾಗರಾಜವರಿಗೆ ವಂದನೆಗಳು

  3. Chetan M.P
    Jan 9, 2020 Reply

    ಕವನದ ಒಂದೊಂದು ಪದವೂ ಮನನಯೋಗ್ಯ

  4. Dinesh P
    Jan 14, 2020 Reply

    ಬುದ್ಧನನ್ನ ಬದುಕಿನಲ್ಲಿ ಕಾಣುವ ಸುಂದರ ಪರಿಕಲ್ಪನೆ.

  5. Jayaraj Bidar
    Jan 16, 2020 Reply

    ಬುದ್ದನನ್ನು ಎಲ್ಲಿ, ಹೇಗೆ ಹುಡುಕಿಕೊಳ್ಳಬೇಕೆಂದು ಗೊತ್ತಾಯಿತು. ಬುದ್ದನ ಜಾಗದಲ್ಲಿ ಬಸವನ ಹೆಸರು ಹಾಕಿದರೂ ಕವನಕ್ಕೆ ಚ್ಯುತಿ ಬರುವುದಿಲ್ಲ. ಮಹಾತ್ಮರನ್ನು ಹೀಗೇ ಹುಡುಕಿಕೊಳ್ಳಬೇಕು.

  6. Chinmayi
    May 15, 2021 Reply

    ಬುದ್ದ ಬುದ್ದನಿಗೇ ಸರಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
Copyright © 2026 Bayalu