Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems January 15, 2026 ಜಬೀವುಲ್ಲಾ ಎಂ.ಅಸದ್

ಹುಡುಕಾಟ

ಭವದ ಒಡಲಿಗೆ ಬಿದ್ದ ಮೇಲೆ
ಇನ್ನೆಲ್ಲಿಯ ಬಿಡುಗಡೆ
ಇಹದ ಬಾಳು
ಬಯಕೆಗಳ ಸಂಕೋಲೆ ಜಡಿದ
ಬೇಗುದಿಯ ಕಡಲು
ಈಜಬೇಕಷ್ಟೆ

ಕಾಣದ ತೀರ
ಭೂಮಿ, ಬಾನು ಒಂದಾದಂತೆ
ಕಾಣುವ ದಿಗಂತ
ಕಣ್ಣಿಗೆ ದೂರ… ದೂರ… ದೂರ…
ದೂರು ನೀಡುವುದಾದರು
ಯಾರಿಗೆ?

ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ
ಅವ ಇರದಲ್ಲೆಲೆಡೆ
ಹುಡುಕುವ ಹುಕಿಗೆ ಬೀಳುವ ಮನುಷ್ಯ
ತನ್ನೊಳಗೆ ಇಣುಕಿ ಕಾಣಬಲ್ಲನೆ,
ನೋಡಬಲ್ಲನೆ
ಹೇಳುವುದಾದರು ಯಾರಿಲ್ಲಿ?

Previous post ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
Next post ಬಯಲಾದ ದೇವರು
ಬಯಲಾದ ದೇವರು

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 2

  1. ಸಿ. ಮೋಹನ್
    Jan 20, 2026 Reply

    ಹೊರಗಣ ಅಲೆದಾಟ ವ್ಯರ್ಥ, ಒಳಗಣ ಪಯಣಕೆ ಸಜ್ಜಾಗಲಿ ಮನ🤝

  2. ಸುನಂದಾ ಕುಣಿಗಲ್
    Feb 5, 2026 Reply

    ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ ಖಂಡಿತವಾಗಿಯೂ ದೇವರು ಕಾಣಲಾರ. ಒಳಗಿನ ತಿರುಳಲಿ ನಡೆಯಲಿ ಹುಡುಕಾಟ🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ನನ್ನೆದುರು ನಾ…
ನನ್ನೆದುರು ನಾ…
March 6, 2024
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಶರಣನಾಗುವುದು…
ಶರಣನಾಗುವುದು…
February 10, 2023
Copyright © 2026 Bayalu