Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರ್ಥ – ವ್ಯರ್ಥ
Share:
Poems April 5, 2026 ಜಬೀವುಲ್ಲಾ ಎಂ.ಅಸದ್

ಅರ್ಥ – ವ್ಯರ್ಥ

ಮುಗಿಲಿಗೆ ಜಿಗಿದ ಪಾದ
ಮಸ್ತಕದ ಕಂದಕದಲ್ಲಿ ಚಿಗುರಿ
ಶತಮಾನಗಳ ಮೊಳೆ ಹೊಡೆದ
ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು
ಕಾಲದ ಸಹಿಯಾಗಿ ಬದಲಾಗಿ
ಉಸಿರ ಗೊರಿಯೊಳಗೆ ಬೆರೆತು
ಹೆಜ್ಜೆ ಗುರುತುಗಳಲ್ಲಿ ಕಣ್ಣುಗಳು
ಬುಗುರಿಯಾಗಿ ಗರಗರ ತಿರುಗಿ
ಕುರುಡು ದಾರಿಯ ಅರಸಿ

ನೆರಳಿಗೆ ಬಿದ್ದ ಬೆಂಕಿ
ಯ ಆರಿಸುವ ಯತ್ನದಲಿ
ಆತ್ಮವೂ ಧಘಧಗಿಸಿ ಉರಿದು
ಆವಿಯಾಗಿ ಕರಗಿ
ಅನಂತತೆಯ ಶೂನ್ಯದಲಿ

ಹೊಕ್ಕುಳ ಬಳ್ಳಿ ಸುತ್ತಿದ ನಾಲಿಗೆ
ಚಡಪಡಿಸುತಿದೆ ಒಂದೇ ಸಮನೆ
ದಿಕ್ಕಿಲ್ಲದ ದೃಷ್ಟಿ ಗೋಡೆಗೆ ಬಡಿದು
ನೆಲಕೆ ಬಿದ್ದು ಹೊರಳಾಡಿ
ಅತ್ತು

ಕಂಬನಿಗಳ ಕನ್ನಡಿಯ ಯೋಮದಲ್ಲಿ
ಅಲೆಮಾರಿ ಒಂಟಿ ಹಕ್ಕಿಯ
ಅನಾಥ ಸದ್ದು ಮೊಳಗಿ
ರೆಕ್ಕೆ ಮುರಿದ ನೋವು ಹೂ ಮುಡಿದು
ಮಡಿದ ಹೃದಯದ ಮಣ್ಣಲ್ಲಿ ಹರಿದು
ಅಂತರಂಗದ ಕಣಿವೆಯಲಿ ನದಿಯಾಗಿ ಉಕ್ಕಿ
ಕಾಣದಾಯಿತು ಕಡಲು ಬಿಕ್ಕಿ

ಎಲ್ಲೊ ಬಿದ್ದಿದೆ ಆ ಮುರಿದ ಮರದ ಕಾಲು
ಸೂರ್ಯ ಸಾಯುವ ಈ ಸರಿಹೊತ್ತಲಿ
ಹೊತ್ತಿಸದ ದೀಪದ ನೆರಳನು
ಸುಮ್ಮನೆ ಹುಡುಕದಿರು ನೀನು

ಕತ್ತಲ ಬೀಜದ ಮೊಳಕೆಯ ಮಿಂಚು
ಹೊಂಚು ಹಾಕುತಿದೆ
ಕಟ್ಟಿದ ಅರಿವೆಯ ಬಿಡಿಸಿ
ಅರಿವಿನ ಕಂಗಳ ಮಿಡಿಸಿ
ಕಾಣು, ಕಾಣುವುದೇನು?
ಕಂಡರೆ, ಕಂಡಿಲ್ಲ ನೀನು
ಏನನ್ನೂ…

Previous post ಯುದ್ದವೋ… ಶಾಂತಿಯೋ…
ಯುದ್ದವೋ… ಶಾಂತಿಯೋ…
Next post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...

Comments 1

  1. ಸಿದ್ದು ಪಾಟೀಲ್, ಗೌರಿಬಿದನೂರು
    Apr 9, 2026 Reply

    ಕಾಣುತ್ತಿರುವುದು, ಕಂಡೂ ಕಾಣದಿರುವುದು- ಇವುಗಳ ತಾಕಲಾಟದಲ್ಲಿ ಅರ್ಥಗಳು ವ್ಯರ್ಥಗಳಾಗಿ, ವ್ಯರ್ಥವೆಂದವುಗಳು ಅರ್ಥವನ್ನು ಹುದುಗಿಸಿಕೊಂಡ ಪರಿ ಈ ಜಗ, ಈ ಜೀವನ. ಸೊಗಸಾದ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ವಚನ – ಚಿಂತನ
ವಚನ – ಚಿಂತನ
October 10, 2023
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಈ ಕನ್ನಡಿ
ಈ ಕನ್ನಡಿ
March 6, 2024
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
Copyright © 2026 Bayalu