Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರ್ಥ – ವ್ಯರ್ಥ
Share:
Poems April 5, 2026 ಜಬೀವುಲ್ಲಾ ಎಂ.ಅಸದ್

ಅರ್ಥ – ವ್ಯರ್ಥ

ಮುಗಿಲಿಗೆ ಜಿಗಿದ ಪಾದ
ಮಸ್ತಕದ ಕಂದಕದಲ್ಲಿ ಚಿಗುರಿ
ಶತಮಾನಗಳ ಮೊಳೆ ಹೊಡೆದ
ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು
ಕಾಲದ ಸಹಿಯಾಗಿ ಬದಲಾಗಿ
ಉಸಿರ ಗೊರಿಯೊಳಗೆ ಬೆರೆತು
ಹೆಜ್ಜೆ ಗುರುತುಗಳಲ್ಲಿ ಕಣ್ಣುಗಳು
ಬುಗುರಿಯಾಗಿ ಗರಗರ ತಿರುಗಿ
ಕುರುಡು ದಾರಿಯ ಅರಸಿ

ನೆರಳಿಗೆ ಬಿದ್ದ ಬೆಂಕಿ
ಯ ಆರಿಸುವ ಯತ್ನದಲಿ
ಆತ್ಮವೂ ಧಘಧಗಿಸಿ ಉರಿದು
ಆವಿಯಾಗಿ ಕರಗಿ
ಅನಂತತೆಯ ಶೂನ್ಯದಲಿ

ಹೊಕ್ಕುಳ ಬಳ್ಳಿ ಸುತ್ತಿದ ನಾಲಿಗೆ
ಚಡಪಡಿಸುತಿದೆ ಒಂದೇ ಸಮನೆ
ದಿಕ್ಕಿಲ್ಲದ ದೃಷ್ಟಿ ಗೋಡೆಗೆ ಬಡಿದು
ನೆಲಕೆ ಬಿದ್ದು ಹೊರಳಾಡಿ
ಅತ್ತು

ಕಂಬನಿಗಳ ಕನ್ನಡಿಯ ಯೋಮದಲ್ಲಿ
ಅಲೆಮಾರಿ ಒಂಟಿ ಹಕ್ಕಿಯ
ಅನಾಥ ಸದ್ದು ಮೊಳಗಿ
ರೆಕ್ಕೆ ಮುರಿದ ನೋವು ಹೂ ಮುಡಿದು
ಮಡಿದ ಹೃದಯದ ಮಣ್ಣಲ್ಲಿ ಹರಿದು
ಅಂತರಂಗದ ಕಣಿವೆಯಲಿ ನದಿಯಾಗಿ ಉಕ್ಕಿ
ಕಾಣದಾಯಿತು ಕಡಲು ಬಿಕ್ಕಿ

ಎಲ್ಲೊ ಬಿದ್ದಿದೆ ಆ ಮುರಿದ ಮರದ ಕಾಲು
ಸೂರ್ಯ ಸಾಯುವ ಈ ಸರಿಹೊತ್ತಲಿ
ಹೊತ್ತಿಸದ ದೀಪದ ನೆರಳನು
ಸುಮ್ಮನೆ ಹುಡುಕದಿರು ನೀನು

ಕತ್ತಲ ಬೀಜದ ಮೊಳಕೆಯ ಮಿಂಚು
ಹೊಂಚು ಹಾಕುತಿದೆ
ಕಟ್ಟಿದ ಅರಿವೆಯ ಬಿಡಿಸಿ
ಅರಿವಿನ ಕಂಗಳ ಮಿಡಿಸಿ
ಕಾಣು, ಕಾಣುವುದೇನು?
ಕಂಡರೆ, ಕಂಡಿಲ್ಲ ನೀನು
ಏನನ್ನೂ…

Previous post ಯುದ್ದವೋ… ಶಾಂತಿಯೋ…
ಯುದ್ದವೋ… ಶಾಂತಿಯೋ…
Next post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಮನಸ್ಸು
Share:
Poems

ಮನಸ್ಸು

September 7, 2020 ಕೆ.ಆರ್ ಮಂಗಳಾ
ಏನ ಹೇಳಲಿ ಗುರುವೇ ಮನಸಿನ ಬಗೆಗೆ? ಹಿಂದಕ್ಕೆ ಜಾರುತ್ತಾ ಮುಂದಕ್ಕೆ ತುಯ್ಯುತ್ತಾ ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ ಇದಾವ ಮರದ ಕೊಂಬೆಗೆ ನೇತು ಹಾಕಿಕೊಂಡಿದೆ… ಎಂದು ಕಟ್ಟಿದೆನೋ...
ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...

Comments 1

  1. ಸಿದ್ದು ಪಾಟೀಲ್, ಗೌರಿಬಿದನೂರು
    Apr 9, 2026 Reply

    ಕಾಣುತ್ತಿರುವುದು, ಕಂಡೂ ಕಾಣದಿರುವುದು- ಇವುಗಳ ತಾಕಲಾಟದಲ್ಲಿ ಅರ್ಥಗಳು ವ್ಯರ್ಥಗಳಾಗಿ, ವ್ಯರ್ಥವೆಂದವುಗಳು ಅರ್ಥವನ್ನು ಹುದುಗಿಸಿಕೊಂಡ ಪರಿ ಈ ಜಗ, ಈ ಜೀವನ. ಸೊಗಸಾದ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣನಾಗುವುದು…
ಶರಣನಾಗುವುದು…
February 10, 2023
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
WHO AM I?
WHO AM I?
June 17, 2020
Copyright © 2026 Bayalu