Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರ್ಥ – ವ್ಯರ್ಥ
Share:
Poems April 5, 2026 ಜಬೀವುಲ್ಲಾ ಎಂ.ಅಸದ್

ಅರ್ಥ – ವ್ಯರ್ಥ

ಮುಗಿಲಿಗೆ ಜಿಗಿದ ಪಾದ
ಮಸ್ತಕದ ಕಂದಕದಲ್ಲಿ ಚಿಗುರಿ
ಶತಮಾನಗಳ ಮೊಳೆ ಹೊಡೆದ
ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು
ಕಾಲದ ಸಹಿಯಾಗಿ ಬದಲಾಗಿ
ಉಸಿರ ಗೊರಿಯೊಳಗೆ ಬೆರೆತು
ಹೆಜ್ಜೆ ಗುರುತುಗಳಲ್ಲಿ ಕಣ್ಣುಗಳು
ಬುಗುರಿಯಾಗಿ ಗರಗರ ತಿರುಗಿ
ಕುರುಡು ದಾರಿಯ ಅರಸಿ

ನೆರಳಿಗೆ ಬಿದ್ದ ಬೆಂಕಿ
ಯ ಆರಿಸುವ ಯತ್ನದಲಿ
ಆತ್ಮವೂ ಧಘಧಗಿಸಿ ಉರಿದು
ಆವಿಯಾಗಿ ಕರಗಿ
ಅನಂತತೆಯ ಶೂನ್ಯದಲಿ

ಹೊಕ್ಕುಳ ಬಳ್ಳಿ ಸುತ್ತಿದ ನಾಲಿಗೆ
ಚಡಪಡಿಸುತಿದೆ ಒಂದೇ ಸಮನೆ
ದಿಕ್ಕಿಲ್ಲದ ದೃಷ್ಟಿ ಗೋಡೆಗೆ ಬಡಿದು
ನೆಲಕೆ ಬಿದ್ದು ಹೊರಳಾಡಿ
ಅತ್ತು

ಕಂಬನಿಗಳ ಕನ್ನಡಿಯ ಯೋಮದಲ್ಲಿ
ಅಲೆಮಾರಿ ಒಂಟಿ ಹಕ್ಕಿಯ
ಅನಾಥ ಸದ್ದು ಮೊಳಗಿ
ರೆಕ್ಕೆ ಮುರಿದ ನೋವು ಹೂ ಮುಡಿದು
ಮಡಿದ ಹೃದಯದ ಮಣ್ಣಲ್ಲಿ ಹರಿದು
ಅಂತರಂಗದ ಕಣಿವೆಯಲಿ ನದಿಯಾಗಿ ಉಕ್ಕಿ
ಕಾಣದಾಯಿತು ಕಡಲು ಬಿಕ್ಕಿ

ಎಲ್ಲೊ ಬಿದ್ದಿದೆ ಆ ಮುರಿದ ಮರದ ಕಾಲು
ಸೂರ್ಯ ಸಾಯುವ ಈ ಸರಿಹೊತ್ತಲಿ
ಹೊತ್ತಿಸದ ದೀಪದ ನೆರಳನು
ಸುಮ್ಮನೆ ಹುಡುಕದಿರು ನೀನು

ಕತ್ತಲ ಬೀಜದ ಮೊಳಕೆಯ ಮಿಂಚು
ಹೊಂಚು ಹಾಕುತಿದೆ
ಕಟ್ಟಿದ ಅರಿವೆಯ ಬಿಡಿಸಿ
ಅರಿವಿನ ಕಂಗಳ ಮಿಡಿಸಿ
ಕಾಣು, ಕಾಣುವುದೇನು?
ಕಂಡರೆ, ಕಂಡಿಲ್ಲ ನೀನು
ಏನನ್ನೂ…

Previous post ಯುದ್ದವೋ… ಶಾಂತಿಯೋ…
ಯುದ್ದವೋ… ಶಾಂತಿಯೋ…
Next post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಅನಿಶಾ…
Share:
Poems

ಅನಿಶಾ…

September 6, 2026 ಜ್ಯೋತಿಲಿಂಗಪ್ಪ
ನಾನು ನಡೆದಷ್ಟೇ ನನ್ನ ದಾರಿ ಹಾಕಿದ ಹೆಜ್ಜೆಗೆ ದೂರ ಅಂಜಿಕೆಯೇ ಗುರಿ ಇಲ್ಲದ ಪಯಣಕೆ ದಿಕ್ಕಿಲ್ಲ ದಿಕ್ಕು ನೋಡಿ ಹರಿದೀತೇ ಬೆಳಕು ಈ ದಿಕ್ಕಿಗೆ ಹೆಸರಿಟ್ಟವನು ನಾನಲ್ಲವೇ ಒಂದು...
ಸನ್ಯಾಸ ದೀಕ್ಷೆ
Share:
Poems

ಸನ್ಯಾಸ ದೀಕ್ಷೆ

June 12, 2025 ಜಬೀವುಲ್ಲಾ ಎಂ.ಅಸದ್
ತುಂಬಿದ ಅಹಂ- ಸ್ವಾರ್ಥದ ಚೀಲವನು ಬಯಲಿಗೊಯ್ದು ಸುರಿದು ಸ್ವತಃ ಖಾಲಿಯಾಗಿ ಸಂಭ್ರಮಿಸುವುದು – ಸನ್ಯಾಸ ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ ಬೇರು ಬಿಟ್ಟು ಬಿಸಿಲು...

Comments 1

  1. ಸಿದ್ದು ಪಾಟೀಲ್, ಗೌರಿಬಿದನೂರು
    Apr 9, 2026 Reply

    ಕಾಣುತ್ತಿರುವುದು, ಕಂಡೂ ಕಾಣದಿರುವುದು- ಇವುಗಳ ತಾಕಲಾಟದಲ್ಲಿ ಅರ್ಥಗಳು ವ್ಯರ್ಥಗಳಾಗಿ, ವ್ಯರ್ಥವೆಂದವುಗಳು ಅರ್ಥವನ್ನು ಹುದುಗಿಸಿಕೊಂಡ ಪರಿ ಈ ಜಗ, ಈ ಜೀವನ. ಸೊಗಸಾದ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಹಣತೆ ಸಾಕು
ಹಣತೆ ಸಾಕು
September 14, 2024
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಅಚಲ ಪರಂಪರಾ ಪ್ರಸ್ಥಾನ
ಅಚಲ ಪರಂಪರಾ ಪ್ರಸ್ಥಾನ
September 6, 2026
Copyright © 2026 Bayalu