Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನನ್ನು ಕ್ಷಮಿಸು
Share:
Poems April 5, 2026 ಜ್ಯೋತಿಲಿಂಗಪ್ಪ

ನನ್ನನ್ನು ಕ್ಷಮಿಸು

ಆಸೆಗಳಿರಲು ಆತಂಕ
ನಿಲ್ಲದು
ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ

ಹುಟ್ಟಿದರೆ ಸಾವು
ಹುಟ್ಟದಿರೆ ಸಾವಿಲ್ಲ
ಸಾವಿಗೇನು ಕೇಡೇ…

ಸಂತೆಯ ಸದ್ದಿನಲಿ
ಸಂತನಾಗುವೆಯಾದರೆ ಸಂತೆಗೂ ಸದ್ದಿಲ್ಲ

ಆಸೆ ಹುಟ್ಟಿದರೆ
ಆಸೆ ಸಾಯುವವರೆಗೂ ಹುಟ್ಟುತಲೇ ಇರುವೆ

ಸುಡದ ಬಯಕೆಗಳು
ಸುಡುತಲೇ ಇರುವವು

ನನ್ನನ್ನು ಕ್ಷಮಿಸು
ನಾನೇನು ಮಾಡುತ್ತಿದ್ದೇನೆಂದು
ನನಗೇ ಗೊತ್ತಿಲ್ಲ

ಈ
ಸರಿ ತಪ್ಪುಗಳೆಲ್ಲಾ ನನ್ನ
ಅಹಂಕಾರದ ಮುದ್ರೆಗಳು
ಸುಡಲೀ ಅಹಂ

ಸಿಟ್ಟು
ಸಂತಸದಲಿರುವಾಗ
ಮೌನ ಕ್ಷೇಮ

ಕ್ಷಮಿಸುವುದಾದರೆ
ನನ್ನ
ಅಹಂಕಾರವನ್ನ ಕ್ಷಮಿಸು
ಇಲ್ಲಾ
ಮರೆತು ಬಿಡು

ಹಾರಿದೆ
ಕ್ಷಿಪಣಿ; ಪರಿಣಾಮ
ಎದುರಿಸು

ಕಾದಾಟಗಳೆಲ್ಲಾ ಭ್ರಮೆ
ಭ್ರಮೆಗಳಿಗಾಗಿ ಕಾದಾಟ

ನನ್ನ
ರೂಹಿಂಗೆ ನಾನೇ ಮರುಳು
ಕನ್ನಡಿಯ ಹಂಗೇ…

Previous post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
Next post ನಡೆಯ ಎಡೆ…
ನಡೆಯ ಎಡೆ…

Related Posts

ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...
ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...

Comments 3

  1. ಎನ್.ಪಿ.ಮಂಜುನಾಥ್
    Apr 9, 2026 Reply

    ಸುಡಲು ಸಾಧ್ಯವಾಗದ ಬಯಕೆಗಳು ಸುಡುತ್ತಲೇ ಇರುತ್ತವೆ… ಕಾವ್ಯದ ಚುಟುಕು ಸಾಲುಗಳಲ್ಲಿ ಚಿಂತನೆಗೆ ಹಚ್ಚುವ ಆಳ ವಿಚಾರಗಳಿವೆ…. ನಿಮ್ಮ ಕವನಗಳನ್ನು ತಪ್ಪದೇ ಓದುವೆ🙏

    • GH JYOTILINGAPPA
      Apr 10, 2026 Reply

      ನಿಮ್ಮ ಅಭಿಮಾನ ಮತ್ತು ಓದಿಗೆ ಮನ ತುಂಬಿತು.

  2. ಡಾ.ಉಮೇಶ್ ಸೊರಬ
    Apr 10, 2026 Reply

    ಸಮಕಾಲೀನ ಜಾಗತಿಕ ವಿದ್ಯಮಾನಗಳಿಗೆ ಬೀಜವಾಗಿರುವ ಅಹಮ್ ಅನ್ನು ಮೀರಲಾರದ ಮನಸ್ಥಿತಿ ಇಲ್ಲಿ ಸಜೀವ ಚಿತ್ರವಾಗಿ ರೂಪುಗೊಂಡಿದೆ. ಆಸೆ ಮತ್ತು ಆಯುಷ್ಯಗಳ ನಡುವೆ ಚಾಚಿಕೊಂಡಿರುವ ಮನುಷ್ಯನ ಕ್ರೌರ್ಯವನ್ನು ಒರೆಗೆ ಹಚ್ಚುವ ಈ ಕವಿತೆ ತನ್ನ ಎಲ್ಲಾ ಸಾಲುಗಳಲ್ಲೂ ವಿಷಾದದ ಜೊತೆಗೆ ವಿವೇಕವನ್ನೂ , ವಿವೇಕದ ಜೊತೆಗೆ ವ್ಯಂಗ್ಯವನ್ನೂ , ವ್ಯಂಗ್ಯದ ಜೊತೆಗೆ ವ್ಯಕ್ತಿತ್ವದ ಅವನತಿಯನ್ನು ರೂಪಕಗೊಳಿಸುವ ಬಗೆ ಅಪೂರ್ವವಾಗಿ ಮೂಡಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಪೊರೆವ ದನಿ…
ಪೊರೆವ ದನಿ…
August 11, 2025
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಗ್ರಹಣ
ಗ್ರಹಣ
December 9, 2025
Copyright © 2026 Bayalu