Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನನ್ನು ಕ್ಷಮಿಸು
Share:
Poems April 5, 2026 ಜ್ಯೋತಿಲಿಂಗಪ್ಪ

ನನ್ನನ್ನು ಕ್ಷಮಿಸು

ಆಸೆಗಳಿರಲು ಆತಂಕ
ನಿಲ್ಲದು
ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ

ಹುಟ್ಟಿದರೆ ಸಾವು
ಹುಟ್ಟದಿರೆ ಸಾವಿಲ್ಲ
ಸಾವಿಗೇನು ಕೇಡೇ…

ಸಂತೆಯ ಸದ್ದಿನಲಿ
ಸಂತನಾಗುವೆಯಾದರೆ ಸಂತೆಗೂ ಸದ್ದಿಲ್ಲ

ಆಸೆ ಹುಟ್ಟಿದರೆ
ಆಸೆ ಸಾಯುವವರೆಗೂ ಹುಟ್ಟುತಲೇ ಇರುವೆ

ಸುಡದ ಬಯಕೆಗಳು
ಸುಡುತಲೇ ಇರುವವು

ನನ್ನನ್ನು ಕ್ಷಮಿಸು
ನಾನೇನು ಮಾಡುತ್ತಿದ್ದೇನೆಂದು
ನನಗೇ ಗೊತ್ತಿಲ್ಲ

ಈ
ಸರಿ ತಪ್ಪುಗಳೆಲ್ಲಾ ನನ್ನ
ಅಹಂಕಾರದ ಮುದ್ರೆಗಳು
ಸುಡಲೀ ಅಹಂ

ಸಿಟ್ಟು
ಸಂತಸದಲಿರುವಾಗ
ಮೌನ ಕ್ಷೇಮ

ಕ್ಷಮಿಸುವುದಾದರೆ
ನನ್ನ
ಅಹಂಕಾರವನ್ನ ಕ್ಷಮಿಸು
ಇಲ್ಲಾ
ಮರೆತು ಬಿಡು

ಹಾರಿದೆ
ಕ್ಷಿಪಣಿ; ಪರಿಣಾಮ
ಎದುರಿಸು

ಕಾದಾಟಗಳೆಲ್ಲಾ ಭ್ರಮೆ
ಭ್ರಮೆಗಳಿಗಾಗಿ ಕಾದಾಟ

ನನ್ನ
ರೂಹಿಂಗೆ ನಾನೇ ಮರುಳು
ಕನ್ನಡಿಯ ಹಂಗೇ…

Previous post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
Next post ನಡೆಯ ಎಡೆ…
ನಡೆಯ ಎಡೆ…

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...

Comments 3

  1. ಎನ್.ಪಿ.ಮಂಜುನಾಥ್
    Apr 9, 2026 Reply

    ಸುಡಲು ಸಾಧ್ಯವಾಗದ ಬಯಕೆಗಳು ಸುಡುತ್ತಲೇ ಇರುತ್ತವೆ… ಕಾವ್ಯದ ಚುಟುಕು ಸಾಲುಗಳಲ್ಲಿ ಚಿಂತನೆಗೆ ಹಚ್ಚುವ ಆಳ ವಿಚಾರಗಳಿವೆ…. ನಿಮ್ಮ ಕವನಗಳನ್ನು ತಪ್ಪದೇ ಓದುವೆ🙏

    • GH JYOTILINGAPPA
      Apr 10, 2026 Reply

      ನಿಮ್ಮ ಅಭಿಮಾನ ಮತ್ತು ಓದಿಗೆ ಮನ ತುಂಬಿತು.

  2. ಡಾ.ಉಮೇಶ್ ಸೊರಬ
    Apr 10, 2026 Reply

    ಸಮಕಾಲೀನ ಜಾಗತಿಕ ವಿದ್ಯಮಾನಗಳಿಗೆ ಬೀಜವಾಗಿರುವ ಅಹಮ್ ಅನ್ನು ಮೀರಲಾರದ ಮನಸ್ಥಿತಿ ಇಲ್ಲಿ ಸಜೀವ ಚಿತ್ರವಾಗಿ ರೂಪುಗೊಂಡಿದೆ. ಆಸೆ ಮತ್ತು ಆಯುಷ್ಯಗಳ ನಡುವೆ ಚಾಚಿಕೊಂಡಿರುವ ಮನುಷ್ಯನ ಕ್ರೌರ್ಯವನ್ನು ಒರೆಗೆ ಹಚ್ಚುವ ಈ ಕವಿತೆ ತನ್ನ ಎಲ್ಲಾ ಸಾಲುಗಳಲ್ಲೂ ವಿಷಾದದ ಜೊತೆಗೆ ವಿವೇಕವನ್ನೂ , ವಿವೇಕದ ಜೊತೆಗೆ ವ್ಯಂಗ್ಯವನ್ನೂ , ವ್ಯಂಗ್ಯದ ಜೊತೆಗೆ ವ್ಯಕ್ತಿತ್ವದ ಅವನತಿಯನ್ನು ರೂಪಕಗೊಳಿಸುವ ಬಗೆ ಅಪೂರ್ವವಾಗಿ ಮೂಡಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಮಾಯದ ಗಾಯ
ಮಾಯದ ಗಾಯ
October 19, 2025
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
Copyright © 2026 Bayalu