Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನನ್ನು ಕ್ಷಮಿಸು
Share:
Poems April 5, 2026 ಜ್ಯೋತಿಲಿಂಗಪ್ಪ

ನನ್ನನ್ನು ಕ್ಷಮಿಸು

ಆಸೆಗಳಿರಲು ಆತಂಕ
ನಿಲ್ಲದು
ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ

ಹುಟ್ಟಿದರೆ ಸಾವು
ಹುಟ್ಟದಿರೆ ಸಾವಿಲ್ಲ
ಸಾವಿಗೇನು ಕೇಡೇ…

ಸಂತೆಯ ಸದ್ದಿನಲಿ
ಸಂತನಾಗುವೆಯಾದರೆ ಸಂತೆಗೂ ಸದ್ದಿಲ್ಲ

ಆಸೆ ಹುಟ್ಟಿದರೆ
ಆಸೆ ಸಾಯುವವರೆಗೂ ಹುಟ್ಟುತಲೇ ಇರುವೆ

ಸುಡದ ಬಯಕೆಗಳು
ಸುಡುತಲೇ ಇರುವವು

ನನ್ನನ್ನು ಕ್ಷಮಿಸು
ನಾನೇನು ಮಾಡುತ್ತಿದ್ದೇನೆಂದು
ನನಗೇ ಗೊತ್ತಿಲ್ಲ

ಈ
ಸರಿ ತಪ್ಪುಗಳೆಲ್ಲಾ ನನ್ನ
ಅಹಂಕಾರದ ಮುದ್ರೆಗಳು
ಸುಡಲೀ ಅಹಂ

ಸಿಟ್ಟು
ಸಂತಸದಲಿರುವಾಗ
ಮೌನ ಕ್ಷೇಮ

ಕ್ಷಮಿಸುವುದಾದರೆ
ನನ್ನ
ಅಹಂಕಾರವನ್ನ ಕ್ಷಮಿಸು
ಇಲ್ಲಾ
ಮರೆತು ಬಿಡು

ಹಾರಿದೆ
ಕ್ಷಿಪಣಿ; ಪರಿಣಾಮ
ಎದುರಿಸು

ಕಾದಾಟಗಳೆಲ್ಲಾ ಭ್ರಮೆ
ಭ್ರಮೆಗಳಿಗಾಗಿ ಕಾದಾಟ

ನನ್ನ
ರೂಹಿಂಗೆ ನಾನೇ ಮರುಳು
ಕನ್ನಡಿಯ ಹಂಗೇ…

Previous post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
Next post ನಡೆಯ ಎಡೆ…
ನಡೆಯ ಎಡೆ…

Related Posts

ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Comments 3

  1. ಎನ್.ಪಿ.ಮಂಜುನಾಥ್
    Apr 9, 2026 Reply

    ಸುಡಲು ಸಾಧ್ಯವಾಗದ ಬಯಕೆಗಳು ಸುಡುತ್ತಲೇ ಇರುತ್ತವೆ… ಕಾವ್ಯದ ಚುಟುಕು ಸಾಲುಗಳಲ್ಲಿ ಚಿಂತನೆಗೆ ಹಚ್ಚುವ ಆಳ ವಿಚಾರಗಳಿವೆ…. ನಿಮ್ಮ ಕವನಗಳನ್ನು ತಪ್ಪದೇ ಓದುವೆ🙏

    • GH JYOTILINGAPPA
      Apr 10, 2026 Reply

      ನಿಮ್ಮ ಅಭಿಮಾನ ಮತ್ತು ಓದಿಗೆ ಮನ ತುಂಬಿತು.

  2. ಡಾ.ಉಮೇಶ್ ಸೊರಬ
    Apr 10, 2026 Reply

    ಸಮಕಾಲೀನ ಜಾಗತಿಕ ವಿದ್ಯಮಾನಗಳಿಗೆ ಬೀಜವಾಗಿರುವ ಅಹಮ್ ಅನ್ನು ಮೀರಲಾರದ ಮನಸ್ಥಿತಿ ಇಲ್ಲಿ ಸಜೀವ ಚಿತ್ರವಾಗಿ ರೂಪುಗೊಂಡಿದೆ. ಆಸೆ ಮತ್ತು ಆಯುಷ್ಯಗಳ ನಡುವೆ ಚಾಚಿಕೊಂಡಿರುವ ಮನುಷ್ಯನ ಕ್ರೌರ್ಯವನ್ನು ಒರೆಗೆ ಹಚ್ಚುವ ಈ ಕವಿತೆ ತನ್ನ ಎಲ್ಲಾ ಸಾಲುಗಳಲ್ಲೂ ವಿಷಾದದ ಜೊತೆಗೆ ವಿವೇಕವನ್ನೂ , ವಿವೇಕದ ಜೊತೆಗೆ ವ್ಯಂಗ್ಯವನ್ನೂ , ವ್ಯಂಗ್ಯದ ಜೊತೆಗೆ ವ್ಯಕ್ತಿತ್ವದ ಅವನತಿಯನ್ನು ರೂಪಕಗೊಳಿಸುವ ಬಗೆ ಅಪೂರ್ವವಾಗಿ ಮೂಡಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
Copyright © 2026 Bayalu