Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುರುಹೇ ಬಯಲು
Share:
Poems February 16, 2026 ಜ್ಯೋತಿಲಿಂಗಪ್ಪ

ಕುರುಹೇ ಬಯಲು

ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು

ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು

ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ
ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ

ಕೆರೆಯ ದಡದ ನೀರ ಅಂಚಿನಲಿ ಕಾಯುವ ಹಕ್ಕಿ
ಹಸಿವು ಇಲ್ಲದೆ ಹಾರೀತೇ…

ಕಂಬದ ಮೇಲೆ ಕುಳಿತಿದೆ ಹದ್ದು

ಕಣ್ಣ ಹಸಿವಿಗೆ ಕಂಡ ಕಂಡ ಕುರುಹುಗಳೆಲ್ಲಾ ದೇವರೇ
ತೀಡಬಲ್ಲೆನೇ ಈ ಕುರುಹುವಿನ ಡೊಂಕು

ಕಾಯದ ಹಸಿವಿಗೆ ಅನ್ನವೇ ಕುರುಹು
ಕಣ್ಣ ಹಸಿವಿಗೆ ಈ ದೇವರೇ ಅನ್ನ

ಈ ನೆಲಕಂಟದ ಬಯಲಿಗೆ ಕುರುಹೇ …
ಈ ಬಯಲಿಗಂಟಿರುವ ನೆಲಕೆ ಕುರುಹೇ ಬಯಲು.

Previous post ಗಜಲ್…
ಗಜಲ್…
Next post ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ

Related Posts

ಪೊರೆವ ದನಿ…
Share:
Poems

ಪೊರೆವ ದನಿ…

August 11, 2025 ಕೆ.ಆರ್ ಮಂಗಳಾ
ಮೈಯೆಲ್ಲಾ ಕಿವಿಯಾಗಿ ಮನವೆಲ್ಲಾ ಕಣ್ಣಾಗಿ ಕೇಳಿಸಿಕೊಂಡೆನಯ್ಯಾ ನೀನಾಡಿದ ಒಂದೊಂದು ನುಡಿಯ ಮರೆತು ಹೋಗದಂತೆ ನಾಲಿಗೆಗೆ ಮಂತ್ರವಾಗಿಸಿದೆ ಜಾರಿಹೋಗದಂತೆ ಜೋಪಾನದಿ...
ಗುರುವೆಂಬೋ ಬೆಳಗು…
Share:
Poems

ಗುರುವೆಂಬೋ ಬೆಳಗು…

February 6, 2025 ಕೆ.ಆರ್ ಮಂಗಳಾ
ಒಳಗಿರುವುದೆಲ್ಲವೂ ಕೂಡಿಸಿಟ್ಟುಕೊಂಡದ್ದೇ ಬುದ್ಧಿ ಬಲಿತಾಗಿನಿಂದ ಗೊತ್ತಿದ್ದೋ… ಇಲ್ಲದೆಯೋ ನನಗೆ ನೆನಪಿದೆ ಕಂಡದ್ದು ಉಂಡದ್ದು ಮುಟ್ಟಿದ್ದು ಮೂಸಿದ್ದು ತಟ್ಟಿದ್ದು ಸೆಳೆದದ್ದು...

Comments 3

  1. ಭಾಗ್ಯಾ ವಿಜಯ್
    Feb 19, 2026 Reply

    ಕವನದ ಒಂದೊಂದು ಸಾಲೂ ಒಂದೊಂದು quotes ಇದ್ದ ಹಾಗಿವೆ. ಓದಲು ಏನೋ ಸೊಗಸು, ಅರ್ಥ ಬಲು ಆಳ.

    • GH JYOTILINGAPPA
      Feb 24, 2026 Reply

      ನಿಮ್ಮ ಓದಿಗೆ ಧನ್ಯವಾದಗಳು

  2. ಸುರೇಶ್ ಬಾಬು
    Feb 24, 2026 Reply

    ಕುರುಹನ್ನು, ಅರುಹನ್ನು ಎರಡನ್ನೂ ಬಯಲಾಗಿಸಿದ ಶರಣರ ಸಾರ ಈ ಕವನದಲ್ಲಿದೆ.🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
Copyright © 2026 Bayalu