Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುರುಹೇ ಬಯಲು
Share:
Poems February 16, 2026 ಜ್ಯೋತಿಲಿಂಗಪ್ಪ

ಕುರುಹೇ ಬಯಲು

ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು

ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು

ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ
ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ

ಕೆರೆಯ ದಡದ ನೀರ ಅಂಚಿನಲಿ ಕಾಯುವ ಹಕ್ಕಿ
ಹಸಿವು ಇಲ್ಲದೆ ಹಾರೀತೇ…

ಕಂಬದ ಮೇಲೆ ಕುಳಿತಿದೆ ಹದ್ದು

ಕಣ್ಣ ಹಸಿವಿಗೆ ಕಂಡ ಕಂಡ ಕುರುಹುಗಳೆಲ್ಲಾ ದೇವರೇ
ತೀಡಬಲ್ಲೆನೇ ಈ ಕುರುಹುವಿನ ಡೊಂಕು

ಕಾಯದ ಹಸಿವಿಗೆ ಅನ್ನವೇ ಕುರುಹು
ಕಣ್ಣ ಹಸಿವಿಗೆ ಈ ದೇವರೇ ಅನ್ನ

ಈ ನೆಲಕಂಟದ ಬಯಲಿಗೆ ಕುರುಹೇ …
ಈ ಬಯಲಿಗಂಟಿರುವ ನೆಲಕೆ ಕುರುಹೇ ಬಯಲು.

Previous post ಗಜಲ್…
ಗಜಲ್…
Next post ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ

Related Posts

ನಿಲುಗಡೆಯಿಲ್ಲದ ಪಯಣ…
Share:
Poems

ನಿಲುಗಡೆಯಿಲ್ಲದ ಪಯಣ…

September 6, 2026 ಕೆ.ಆರ್ ಮಂಗಳಾ
ಕಡಲ ತೀರದ ಜೊತೆಗಲ್ಲುಗಳ ನಡುನಡುವೆ ಒಪ್ಪಾಗಿ ಒರಗಿದ್ದ ನಿನ್ನನೆತ್ತಿಕೊಂಡಾಗ ಕಂಡದ್ದು ನನ್ನದೇ ಬಿಂಬ… ನೆನಪಾದದ್ದು ಬ್ಲೇಕ್ ಹೇಳಿದ ಅನಂತದ ಪ್ರತಿಬಿಂಬ ಸಾಗರದ ಕತೆಗಳಿವೆ ನಿನ್ನ...
ಬಯಲಾದ ದೇವರು
Share:
Poems

ಬಯಲಾದ ದೇವರು

January 15, 2026 ಜ್ಯೋತಿಲಿಂಗಪ್ಪ
ಈ ದೇವರು ಒಂದು ಕನಸು ನಿಜವೂ ಅಹುದು ಸುಳ್ಳೂ ಅಹುದು ಕಲ್ಪನೆಯ ಹಾಗೆ ಕಾಣುವುದು ಕಾಣದು ನಂಬಿದರೆ ಕೇಡಿಲ್ಲ ನಂಬದಿರಲೂ ಕೇಡಿಲ್ಲ ಕೇಡೆಲ್ಲವೂ ನನ್ನವು ಈ ಸುಳ್ಳಿಗೊಂದು ಕಾಣಿಸಲಾರೆ...

Comments 3

  1. ಭಾಗ್ಯಾ ವಿಜಯ್
    Feb 19, 2026 Reply

    ಕವನದ ಒಂದೊಂದು ಸಾಲೂ ಒಂದೊಂದು quotes ಇದ್ದ ಹಾಗಿವೆ. ಓದಲು ಏನೋ ಸೊಗಸು, ಅರ್ಥ ಬಲು ಆಳ.

    • GH JYOTILINGAPPA
      Feb 24, 2026 Reply

      ನಿಮ್ಮ ಓದಿಗೆ ಧನ್ಯವಾದಗಳು

  2. ಸುರೇಶ್ ಬಾಬು
    Feb 24, 2026 Reply

    ಕುರುಹನ್ನು, ಅರುಹನ್ನು ಎರಡನ್ನೂ ಬಯಲಾಗಿಸಿದ ಶರಣರ ಸಾರ ಈ ಕವನದಲ್ಲಿದೆ.🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
Copyright © 2026 Bayalu