ಕುರುಹೇ ಬಯಲು
ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು
ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು
ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ
ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ
ಕೆರೆಯ ದಡದ ನೀರ ಅಂಚಿನಲಿ ಕಾಯುವ ಹಕ್ಕಿ
ಹಸಿವು ಇಲ್ಲದೆ ಹಾರೀತೇ…
ಕಂಬದ ಮೇಲೆ ಕುಳಿತಿದೆ ಹದ್ದು
ಕಣ್ಣ ಹಸಿವಿಗೆ ಕಂಡ ಕಂಡ ಕುರುಹುಗಳೆಲ್ಲಾ ದೇವರೇ
ತೀಡಬಲ್ಲೆನೇ ಈ ಕುರುಹುವಿನ ಡೊಂಕು
ಕಾಯದ ಹಸಿವಿಗೆ ಅನ್ನವೇ ಕುರುಹು
ಕಣ್ಣ ಹಸಿವಿಗೆ ಈ ದೇವರೇ ಅನ್ನ
ಈ ನೆಲಕಂಟದ ಬಯಲಿಗೆ ಕುರುಹೇ …
ಈ ಬಯಲಿಗಂಟಿರುವ ನೆಲಕೆ ಕುರುಹೇ ಬಯಲು.





Comments 3
ಭಾಗ್ಯಾ ವಿಜಯ್
Feb 19, 2026ಕವನದ ಒಂದೊಂದು ಸಾಲೂ ಒಂದೊಂದು quotes ಇದ್ದ ಹಾಗಿವೆ. ಓದಲು ಏನೋ ಸೊಗಸು, ಅರ್ಥ ಬಲು ಆಳ.
GH JYOTILINGAPPA
Feb 24, 2026ನಿಮ್ಮ ಓದಿಗೆ ಧನ್ಯವಾದಗಳು
ಸುರೇಶ್ ಬಾಬು
Feb 24, 2026ಕುರುಹನ್ನು, ಅರುಹನ್ನು ಎರಡನ್ನೂ ಬಯಲಾಗಿಸಿದ ಶರಣರ ಸಾರ ಈ ಕವನದಲ್ಲಿದೆ.🙏