Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಡೆಯ ಎಡೆ…
Share:
Poems April 5, 2026 ಕೆ.ಆರ್ ಮಂಗಳಾ

ನಡೆಯ ಎಡೆ…

ಅತ್ತಿದ್ದು ನಕ್ಕಿದ್ದು
ಒಳಗೊಳಗೇ ಬಿಕ್ಕಿದ್ದು
ಮತ್ತೆ ಜಂಜಡಕೆ ಬೀಳಲಾರೆ ಇನ್ನು
ಎಲ್ಲ ಕಲಿಸುವ ಬದುಕು
ಎಲ್ಲ ತಿಳಿಸುವ ಗುರುವು
ದಾಟಬಲ್ಲೆನು ಈಜಿ ನೂರು ಕಡಲು

ಸುಖ-ದುಃಖ ಬರಹವನು
ಬರೆವ ಕೈಗೆ ನಮಿಸಿ
ತಪ್ಪುಸರಿಗಳ ಲೆಕ್ಕ ಒಪ್ಪಿಸಿರುವೆ
ಸಂಚಯದ ಸಂಚಿಯನು
ಕೊಡವಿ ಖಾಲಿ ಮಾಡಿ
ಅಳಿದುಳಿದುದೆಲ್ಲಾ ಹುರಿದುಬಿಡುವೆ

ಹಿಂದಣದ ಹೊರೆಯಿಲ್ಲ
ಮುಂದಣದ ಹಂಗಿಲ್ಲ
ಸಮತೆಯ ಸಿರಿಯು ಕಂಗೊಳಿಸಲಿ
ಹೊಸ ಹಸಿರು ಹೊಸ ಉಸಿರು
ಹೊಸ ಕಂಪು ಹೊಸ ತಂಪು
ನಡೆಯ ಎಡೆಯಿರಲಿ ನಿತ್ಯಸತ್ಯತೆಗೆ

ಚಳಿಗಾಳಿ ಮಳೆ ಬಿಸಿಲು
ನರನರಗಳೊಳಗಿಳಿದು
ತೂಗಿ ತೊನೆದಿಹುದು ಜೀವತಾನ
ಹಗಲಿರುಳ ತೆರೆಗಳಲಿ
ಋತುಮಾಸ ಕವಲಿನಲಿ
ಹೊರಳಿ ಸಾಗಿಹುದು ಬಾಳಯಾನ

ಆ ಮುಗಿಲು ಬಿದ್ದಾಗ
ಹಸುರೆದ್ದು ಬಂದಾಗ
ಸುಂದರವು ಸೃಷ್ಟಿಯೆಲ್ಲಾ
ಅಂತರವು ಅಳಿದಾಗ
ನಾ ಕರಗಿ ಹೋದಾಗ
ಅಮೃತವು ಮರ್ತ್ಯವೆಲ್ಲಾ…

Previous post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಚಾರ
ಲಿಂಗಾಚಾರ
May 6, 2021
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಮನವೇ ಮನವೇ…
ಮನವೇ ಮನವೇ…
May 6, 2020
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಹಣತೆ ಸಾಕು
ಹಣತೆ ಸಾಕು
September 14, 2024
Copyright © 2026 Bayalu