Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆ ಸಾಕು
Share:
Poems September 14, 2024 ಜ್ಯೋತಿಲಿಂಗಪ್ಪ

ಹಣತೆ ಸಾಕು

ಬೆಳಕ ನೋಡಲಾಗದ ಕಣ್ಣು
ದೀಪ ಹಚ್ಚಿದರೆ ಕಣ್ಣು ಕತ್ತಲು
ಹಚ್ಚದಿರೆ ಹೃದಯ ಕತ್ತಲು

ದೀಪ ಬೆಳಗಿಸುವ ಕಷ್ಟ

ಕತ್ತಲೆಂಬುದು ಕತ್ತಲಾಗದು
ಬೆಳಕೆಂಬುದು ಬೆಳಕಾಗದು

ಏನೂ ಕೂಡಿಡದೆ
ಕಳೆಯುವುದು ಹೇಗೆ

ಈಗ
ಇರುವ ಸುಳ್ಳೇ ಅರಗಿಸಲಾಗಿಲ್ಲ
ಇನ್ನೇನು ಹೊಸಾ ಸುಳ್ಳು

ಬೆಟ್ಟದ
ತುದಿಯ ಬಂಡೆ
ಬಂಡೆಯ ಮೇಲೆ ನಿಂತಿರುವ
ಹೆಮ್ಮೆ
ಅಲುಗಾಡದೆ ಬಂಡೆ

ನಾನು ಸಾಯದೆ
ಕಾಣುವುದೇ ಬಯಲು

ಮತ್ತೇನೂ ಇಲ್ಲ ಸಾಯಲಿ

ಮುದ್ದಾದ ಮಿಥ್ಯ ಈ ದೇವರು

ಮನ ಮರೆತು
ಅಚಲವಾಗಿ ಹಾಯ್ಕು

ಮರೆತುದು ಏನು

ಈ ಕತ್ತಲು
ಬೆಳಗಿಸಲು ಒಂದು
ಹಣತೆ ಸಾಕು

ದೀಪ ಹಚ್ಚಲು ಗಾಳಿಗೆ
ಹೇಳಿರುವೆ.

Previous post ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
Next post ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!

Related Posts

ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...
ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...

Comments 4

  1. ಲಹರಿ ಬೆಂಗಳೂರು
    Sep 19, 2024 Reply

    ತಮಂಧ ಘನವ ಓಡಿಸಲು ಹಣತೆ ಸಾಕು. ಬಯಲ ಅರಿಯಲು ‘ನಾನು’ ಸಾಯಲೇ ಬೇಕು… ಕವನ ಅರ್ಥಗರ್ಭಿತ.💥💥

  2. ಸಂತೋಷ ಕುಮಾರ್, ಸಿ
    Sep 22, 2024 Reply

    ದೇವರು ಅದ್ಭುತ ಸುಳ್ಳು ಅಂತ ಹೇಳುತ್ತಿದ್ದೆ, ‘ಮುದ್ದಾದ ಮಿಥ್ಯ’ ಅನ್ನೋದು ಇನ್ನೂ ಮುದ್ದಾಗಿದೆ ಸರ್😀

  3. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Sep 27, 2024 Reply

    ನಿಮ್ಮ ಓದಿಗಾಗಿ ಧನ್ಯವಾದಗಳು

  4. ಶ್ರೀಶೈಲ ಹಾದಿಮನಿ, ಅಮೆರಿಕ
    Oct 3, 2024 Reply

    ತುಂಬಾ ಚೆನ್ನಾಗಿ ರಚಿತವಾದ ಕವನಗಳು. ತಮ್ಮ ನಿರಂತರ ಸೇವೆಗೆ ಧನ್ಯವಾದಗಳು 💐🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಹಣತೆಯ ಹಂಗು
ಹಣತೆಯ ಹಂಗು
October 19, 2025
ಅನುಭವ ಮಂಟಪ
ಅನುಭವ ಮಂಟಪ
April 11, 2025
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
Copyright © 2026 Bayalu