Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು  ಬಿಂಬ
Share:
Poems September 13, 2025 ಜ್ಯೋತಿಲಿಂಗಪ್ಪ

ನಾನು ಬಿಂಬ

ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು.
-ಅಲ್ಲಮ

ಈ
ಕನ್ನಡಿಯಲಿ
ಕಾಣುವ ನನ ಬಿಂಬವ
ಓಡಿಸುವುದು ಹೇಗೆ…??!!

ಕಣ್ಣ ಮುಚ್ಚಿದರೆ ಕನ್ನಡಿ ದೂರ
ಕಣ್ಣ ತೆರೆದರೆ ನಾನು ಅದೂರ

ನಾನು ಬಿಂಬ ಬಿಂಬ ನಾನು
ಎರಡರಲಿ ಒಂದ ಕೊಲಲಾಗದು

ನಾನು
ಇದ್ದಂತೆ ನನ್ನ ಬಿಂಬ
ಹಿಗ್ಗದು ಕುಗ್ಗದು
ಹಿಗ್ಗಿರುವೆ ಹಾಗೇ…
ಕಂಡುದ ಹೇಳದು ಹಾಗೆ..

ನಾನು ಮಾಸಿಯೂ ಮಾಸದು ಬಿಂಬ
ನಾನು ಮಾದರೂ ಮಾದುದೇ..ಬಿಂಬ

ಏಸು ಬಿಂಬಗಳೋ….
ಎನ್ನೊಳಗಿಲ್ಲ ಒಂದೂ ಒಂದು
ಬಂದವು ಹೋದವು ಸರಳ
ನನ್ನಲ್ಲಿಯೇ ಇಲ್ಲದುದು ಇನ್ನೆಲ್ಲಿ..

ನಿನ್ನೊಳಗೆ ನಾನೋ ..
ನನ್ನೊಳಗೆ ನೀನೋ…
ಈ ತರ್ಕವೆಲ್ಲಾ ಪಕ್ಕಕ್ಕೆ ಇಡು
ಬಿಂಬಕೆ ಮತಿ ಇಲ್ಲ ಗತಿ ಇಲ್ಲ
ಎಂದೆಂದಿಗೂ ಅಹಂಗೆ

ಆಡಿ ಪೊಳ್ಳಾದೆ ನಾನು
ಆಡದೆ ದಿವ್ಯ ಅದು

ನಡೆಯಲು ಇರುವ ದಾರಿ
ಒಂದೇ ಪುರಾತನರ ನಡೆ

ಕನ್ನಡಿಯ ಕುರುಡಾಗಿಸಲಾರೆ

ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ ಇದೇನೆಂದರಿಯೆ.
-ಅಲ್ಲಮ

Previous post ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
Next post ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…

Related Posts

ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...
ಬೆಂಕಿಯೊಳಗಣ ಬೆಳಕು
Share:
Poems

ಬೆಂಕಿಯೊಳಗಣ ಬೆಳಕು

June 12, 2025 ಜ್ಯೋತಿಲಿಂಗಪ್ಪ
ನಿಜದ ಮುಖವ ಬಲ್ಲೆಯಾ ಅವರ ಮುಖವ ಇವರು ನೋಡುವುದು ಇವರ ಮುಖವ ಅವರು ನೋಡುವುದು ಅವರವರ ಮುಖವ ಅವರರಿಯರು ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ ಹನಿ ಹನಿ ಹರಿದು ಹಳ್ಳ ಹಳ್ಳ ಹಳ್ಳ...

Comments 6

  1. ಮರಿಗೌಡ ಮಾಗಡಿ
    Sep 17, 2025 Reply

    ವಿಶೇಷ ವಿನ್ಯಾಸದ ಕವನ. ವಿವಿಧ ಶೈಲಿಯಲ್ಲಿ ನಡೆಸುತ್ತಿರುವ ನಿಮ್ಮ ಕಾವ್ಯ ಪ್ರಯೋಗ ನಿಜಕ್ಕೂ ಕುತೂಹಲ ಹುಟ್ಟಿಸುವಂತಿರುತ್ತವೆ ಸರ್.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 18, 2025 Reply

      ನಿಮ್ಮ ಓದಿಗೆ ಮನ ತುಂಬಿತು

  2. ನರೇಂದ್ರ ಚಿತ್ರದುರ್ಗ
    Sep 23, 2025 Reply

    ಅರಿವಿಗೆ ಬಾರದ ಅನುಭಾವವನ್ನು ನಿಮ್ಮಂತಹ ಕವಿಗಳ ಕವನಗಳಲ್ಲಿ ಹುಡುಕುವುದು ಎಂತಹ ವಿಪರ್ಯಾಸ ಎನ್ನುವಿರಾ? ವಚನಗಳಲ್ಲಿ ಅಡಗಿರುವ ಅಮೂಲ್ಯ ಅನುಭಾವವನ್ನು ಹೊರತೆಗೆದು ತೋರುವ ಪ್ರಯತ್ನ ಮತ್ತೆ ಅಲ್ಲೇ ಅಡಗಿಬಿಡುತ್ತದೆ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 25, 2025 Reply

      ಓದಿಗೆ ಸಂತಸ

      ದಾಟಲುಂಟೇ ಬಯಲ…??!!

  3. ಗಿರೀಶ್ ಜಾಗಿರದಾರ್
    Oct 2, 2025 Reply

    ಬಿಂಬ ತರ್ಕಗಳಾಚಿನದು. ‘ಬಿಂಬಕೆ ಮತಿ ಇಲ್ಲ ಗತಿ ಇಲ್ಲ’. ಇರುವುದೆಲ್ಲಾ ನನಗೆ, ಕೇವಲ ನನಗೆ!!!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Oct 9, 2025 Reply

      ಹೌದಲ್ವಾ ..ಓದಿಗೆ ಧನ್ಯವಾದಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
Copyright © 2026 Bayalu