Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಶರಣರು…
Share:
Poems April 9, 2021 ಕೆ.ಆರ್ ಮಂಗಳಾ

ನನ್ನ ಶರಣರು…

ನನ್ನ ಶರಣರು ಅವರು-
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.

ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು

ನನ್ನ ಶರಣರು ಅವರು-
ಶ್ರೇಷ್ಠ-ಕನಿಷ್ಠಗಳ ಹಿಡಿತಕ್ಕೆ ಸಿಗದವರು
ಸಂಗ್ರಹಣೆಯ ಮೋಹಕ್ಕೆ ಜಾರಿ ಬೀಳದವರು
ಅಹಮ್ಮಿನ ಆಟವನು ಅಡಗಿಸಬಲ್ಲವರು
ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು

ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನೆದೆಯಲುಳಿದವರು.

Previous post ನಾನರಿಯದ ಬಯಲು
ನಾನರಿಯದ ಬಯಲು
Next post ಲಿಂಗಾಚಾರ
ಲಿಂಗಾಚಾರ

Related Posts

ಹುಲಿ ಸವಾರಿ…
Share:
Poems

ಹುಲಿ ಸವಾರಿ…

June 10, 2023 ಜ್ಯೋತಿಲಿಂಗಪ್ಪ
ಖಾಲೀ… ಇರುವೆಯಲ್ಲಾ ಏನಾದರೂ ನೋಡು ಕಣ್ಣು ತುಂಬಿದೆ ನೋಡಲೇನುಂಟು ನೋಡದು ಏನಾದರೂ ಕೇಳು ಕಿವಿ ತುಂಬಿದೆ ಕೇಳಲೇನುಂಟು ಕೇಳದು ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ...
ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...

Comments 2

  1. Chandrika
    Apr 21, 2021 Reply

    very nice poem akka

  2. Sharan
    Apr 26, 2023 Reply

    ನನ್ನ ಶರಣರು ಎಂಬ ಅಭಿಮಾನದ ಸಾಲಿನೊಂದಿಗೆ ಶರಣ ದರ್ಶನ ಮಾಡಿಸಿದೆ ಈ ಕವಿತೆ ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತುತ್ತೂರಿ…
ತುತ್ತೂರಿ…
June 10, 2023
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
Copyright © 2026 Bayalu