Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಶರಣರು…
Share:
Poems April 9, 2021 ಕೆ.ಆರ್ ಮಂಗಳಾ

ನನ್ನ ಶರಣರು…

ನನ್ನ ಶರಣರು ಅವರು-
ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು
ಕಕ್ಕುಲತೆಯಿಂದ ಬದುಕ ಕಟ್ಟಿದವರು
ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು
ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು.

ನನ್ನ ಶರಣರು ಅವರು-
ಸತ್ಯದ ಕೂರಲಗ ಕಟ್ಟಿಕೊಂಡವರು
ಅನ್ಯಾಯ ಅಸಮತೆಗೆ ಸಿಡಿದೆದ್ದು ನಿಂತವರು
ಸ್ವರ್ಗ ನರಕಗಳನ್ನು ದೂರ ಅಟ್ಟಿದವರು
ಹೋಮ-ಹವನಗಳಿಗೆ ನೀರು ಬಿಟ್ಟವರು

ನನ್ನ ಶರಣರು ಅವರು-
ಶ್ರೇಷ್ಠ-ಕನಿಷ್ಠಗಳ ಹಿಡಿತಕ್ಕೆ ಸಿಗದವರು
ಸಂಗ್ರಹಣೆಯ ಮೋಹಕ್ಕೆ ಜಾರಿ ಬೀಳದವರು
ಅಹಮ್ಮಿನ ಆಟವನು ಅಡಗಿಸಬಲ್ಲವರು
ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು

ನನ್ನ ಶರಣರು ಅವರು-
ಸಾವ ಲೆಕ್ಕಿಸದೆ ಸಾಹಿತ್ಯ ಉಳಿಸಿದವರು
ನುಡಿಯಲ್ಲಿ ನಡೆ ನಿಲಿಸಿ ನಿರಾಳರಾದವರು
ಬಯಲ ಹೊಲಬಿನಲಿ ಕರಗಿ ಹೋದವರು
ನಿತ್ಯ ಪ್ರಜ್ಞೆಯಾಗಿ ನನ್ನೆದೆಯಲುಳಿದವರು.

Previous post ನಾನರಿಯದ ಬಯಲು
ನಾನರಿಯದ ಬಯಲು
Next post ಲಿಂಗಾಚಾರ
ಲಿಂಗಾಚಾರ

Related Posts

ಹಾಯ್ಕುಗಳು
Share:
Poems

ಹಾಯ್ಕುಗಳು

November 10, 2022 ಜ್ಯೋತಿಲಿಂಗಪ್ಪ
೦೧ ಖಾಲಿ ಮನೆಯ ಬಾಗಿಲು ಬಡಿದರೆ ಸದ್ದು ಕೇಳಿತು. ೦೨ ಹೆಂಡದ ಹುಳಿ ವಾಸನೆ ಮಡಿಕೆಯ ಖಾಲಿಗಂಟದು. ೦೩ ಏನು ಸೋಜಿಗ ಹೂವ ಪರಿಮಳವ ಗಾಳಿ ಹೊತ್ತುದು. ೦೪ ದೀಪ ಆರಿತು ಇದ್ದ ಬೆಳಕು...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Comments 2

  1. Chandrika
    Apr 21, 2021 Reply

    very nice poem akka

  2. Sharan
    Apr 26, 2023 Reply

    ನನ್ನ ಶರಣರು ಎಂಬ ಅಭಿಮಾನದ ಸಾಲಿನೊಂದಿಗೆ ಶರಣ ದರ್ಶನ ಮಾಡಿಸಿದೆ ಈ ಕವಿತೆ ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
Copyright © 2026 Bayalu