Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಸರಿಲ್ಲದಾ ಊರಿನ ಹಾಡು
Share:
Poems May 6, 2020 ಪದ್ಮಾಲಯ ನಾಗರಾಜ್

ಹೆಸರಿಲ್ಲದಾ ಊರಿನ ಹಾಡು

ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//

ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//

ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//

ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//

ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//

ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.

-ಪದ್ಮಾಲಯ ನಾಗರಾಜ್

Previous post ಮನವೇ ಮನವೇ…
ಮನವೇ ಮನವೇ…
Next post WHO AM I?
WHO AM I?

Related Posts

ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...
ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...

Comments 3

  1. Jyothilingappa
    May 7, 2020 Reply

    ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.

  2. Gangadhar navale
    May 14, 2020 Reply

    ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.

  3. Chandru pujar
    Aug 25, 2020 Reply

    Dhanyvad Sar Tumba chennagide

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ಮಾನವರ ವಿಘಟನೆಗೆ ಕಾರಣರಾರು?
ಮಾನವರ ವಿಘಟನೆಗೆ ಕಾರಣರಾರು?
September 6, 2026
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
Copyright © 2026 Bayalu