Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಸರಿಲ್ಲದಾ ಊರಿನ ಹಾಡು
Share:
Poems May 6, 2020 ಪದ್ಮಾಲಯ ನಾಗರಾಜ್

ಹೆಸರಿಲ್ಲದಾ ಊರಿನ ಹಾಡು

ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//

ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//

ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//

ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//

ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//

ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.

-ಪದ್ಮಾಲಯ ನಾಗರಾಜ್

Previous post ಮನವೇ ಮನವೇ…
ಮನವೇ ಮನವೇ…
Next post WHO AM I?
WHO AM I?

Related Posts

ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...
ಮುಖ- ಮುಖವಾಡ
Share:
Poems

ಮುಖ- ಮುಖವಾಡ

February 7, 2021 ಕೆ.ಆರ್ ಮಂಗಳಾ
ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು ಕೈಯಿಂದ ತಡವಿಕೊಳ್ಳುತ್ತೇನೆ ಇದು ಮುಖವಾಡವೋ ಇಲ್ಲಾ ನನ್ನ ಮುಖವೋ? ಕನ್ನಡಿ ನೋಡುವಾಗೆಲ್ಲಾ ದಿಗಿಲಾಗುತ್ತದೆ ನಾನು ಅಂದುಕೊಂಡಿರುವಂತೆ...

Comments 3

  1. Jyothilingappa
    May 7, 2020 Reply

    ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.

  2. Gangadhar navale
    May 14, 2020 Reply

    ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.

  3. Chandru pujar
    Aug 25, 2020 Reply

    Dhanyvad Sar Tumba chennagide

Leave a Reply to Gangadhar navale Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ನೆಲದ ನಿಧಾನ
ನೆಲದ ನಿಧಾನ
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಶರಣ- ಎಂದರೆ…
ಶರಣ- ಎಂದರೆ…
March 6, 2020
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
Copyright © 2025 Bayalu