Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗಣ ಮರ
Share:
Poems March 12, 2022 ಜ್ಯೋತಿಲಿಂಗಪ್ಪ

ಒಳಗಣ ಮರ

ಈ
ಪದ
ಏನು ನಿಜ ಹೇಳುತ್ತಾ
ನಿಜ ಹೇಳುವುದು ಅಲ್ಲಾ
ಕಾಣುವುದು ಅಲ್ಲಾ
ಕೇಳುವುದು ಅಲ್ಲಾ
ಅನುಭಾವಿಸುವುದು
ಭಾವದಲಿ ಆನು ನಿಜವಾಗುವುದು

ಈ
ಪದ ಅರ್ಥದಲಿ ಏನಿದೆಯೋ
ಅಕ್ಷರ ಬಲ್ಲವರು ಹೇಳಿ
ಓಂ ಹ್ರೀಂ….

ಈ
ಬೀಜದ
ಒಳಗೆ ಮರ ಅಡಗಿದೆ
ತೋರುವುದು ಹೇಗೆ

ನೆಲದಲಿ ಹುದುಗಿಸಬೇಕು
ನೀರು ಎರೆಯಬೇಕು
ಮೇಲಾಗಿ ಕಾಯಬೇಕು

ಆ
ಬೀಜದ ಒಳಗಣ ಮರ
ನಗುತಿದೆ ಈಗ ತೋರಿದರೂ ಕಾಣದು

ಈ
ತೊಗಲಿಗೆ ಹೊಳಪೇ
ರುದ್ರಾಕ್ಷಿ ಕೊಬ್ಬೆಲ್ಲಾ ಒಣಗಿದೆ
ಕನಸೊಳಗೂ ಕಾಡುತ್ತಿಲ್ಲ ಆ ದೇವತೆ.

Previous post ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
Next post ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ

Related Posts

ಮುಖ- ಮುಖವಾಡ
Share:
Poems

ಮುಖ- ಮುಖವಾಡ

February 7, 2021 ಕೆ.ಆರ್ ಮಂಗಳಾ
ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು ಕೈಯಿಂದ ತಡವಿಕೊಳ್ಳುತ್ತೇನೆ ಇದು ಮುಖವಾಡವೋ ಇಲ್ಲಾ ನನ್ನ ಮುಖವೋ? ಕನ್ನಡಿ ನೋಡುವಾಗೆಲ್ಲಾ ದಿಗಿಲಾಗುತ್ತದೆ ನಾನು ಅಂದುಕೊಂಡಿರುವಂತೆ...
ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...

Comments 1

  1. Malini Gowda
    Mar 23, 2022 Reply

    ಬದುಕಿನ ಹೂರಣ ಮರೆಯಾದಾಗ ಒಳಗಣ ಮರ ಒಣಗಿರುತ್ತದೋ ಅಥವಾ ಸರಿಯಾದ ಆರೈಕೆ ಸಿಗದೆ ಬೀಜವಿದ್ದಾಗ್ಯೂ ಮರ ಬೆಳೆಯದೇ ಹೋಗುತ್ತದೋ… ಕಾವ್ಯದ ಸ್ಫುರಣಗಳು ಅನಂತ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು… ನನ್ನದು
ನಾನು… ನನ್ನದು
July 4, 2021
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
ಬಯಲಾಟ
ಬಯಲಾಟ
March 17, 2021
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
Copyright © 2026 Bayalu