Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಸರಿಲ್ಲದಾ ಊರಿನ ಹಾಡು
Share:
Poems May 6, 2020 ಪದ್ಮಾಲಯ ನಾಗರಾಜ್

ಹೆಸರಿಲ್ಲದಾ ಊರಿನ ಹಾಡು

ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//

ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//

ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//

ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//

ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//

ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.

-ಪದ್ಮಾಲಯ ನಾಗರಾಜ್

Previous post ಮನವೇ ಮನವೇ…
ಮನವೇ ಮನವೇ…
Next post WHO AM I?
WHO AM I?

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 3

  1. Jyothilingappa
    May 7, 2020 Reply

    ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.

  2. Gangadhar navale
    May 14, 2020 Reply

    ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.

  3. Chandru pujar
    Aug 25, 2020 Reply

    Dhanyvad Sar Tumba chennagide

Leave a Reply to Chandru pujar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
Copyright © 2026 Bayalu