Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರು… ಬರಿ ನೀರೇ?
Share:
Poems December 13, 2024 ಜ್ಯೋತಿಲಿಂಗಪ್ಪ

ನೀರು… ಬರಿ ನೀರೇ?

ಕತ್ತಲೆಂಬುದು ಕಣ್ಣ ಮುಂದೋ
ಕಣ್ಣ ಹಿಂದೋ…

ಜ್ಞಾನ ಎಂಬುದು ಅರಿವಲ್ಲ
ಅರಿದರೆ ಅಜ್ಞಾನ…

ಕತ್ತಲ ಒಳಗಣ ಬೆಳಕ
ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ

ಜ್ಞಾನವೇನು ಮರವೆಯೇ…

ನದಿ ಯಾವುದು
ನೀರು ಯಾವುದು

ದೋಣಿ ಯಾವುದು
ಹುಟ್ಟು ಯಾವುದು

ನದಿ ದಾಟಿಸಿದುದು ದೋಣಿಯೋ ಹುಟ್ಟೋ…

ನೀರ ನಡುವಿನ ದಾರಿ
ಕೂಡಿ ಹರಿಯದೇ

ನೀರು ಹರಿದರೆ ಹಳ್ಳ
ನಿಂತರೆ ಕೊಳ್ಳ

ನೀರರಿದು ನಿಂತು ಅಬ್ಧಿ..

ಹಸಿವು ಇದ್ದಲ್ಲಿ ಉಣ್ಣುವುದೇ ಸೊಗಸು.

Previous post ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
Next post ನಾನುವಿನ ಉಪಟಳ
ನಾನುವಿನ ಉಪಟಳ

Related Posts

ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...
ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...

Comments 1

  1. ರವೀಶ್ ಜಗಲಿ
    Dec 18, 2024 Reply

    ಜ್ಞಾನಕ್ಕೆ ಅಜ್ಞಾನದ ಜಾಗ, ಕತ್ತಲಿಗೆ ಬೆಳಕಿನ ಒಡಲು… ಕವನ ಬೇರೆಲ್ಲಿಗೋ ದಾರಿ ತೋರುವಂತಿದೆ.👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಮರೆತೆ…
ಮರೆತೆ…
July 4, 2022
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನಡೆಯ ಎಡೆ…
ನಡೆಯ ಎಡೆ…
April 5, 2026
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
Copyright © 2026 Bayalu