Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರು… ಬರಿ ನೀರೇ?
Share:
Poems December 13, 2024 ಜ್ಯೋತಿಲಿಂಗಪ್ಪ

ನೀರು… ಬರಿ ನೀರೇ?

ಕತ್ತಲೆಂಬುದು ಕಣ್ಣ ಮುಂದೋ
ಕಣ್ಣ ಹಿಂದೋ…

ಜ್ಞಾನ ಎಂಬುದು ಅರಿವಲ್ಲ
ಅರಿದರೆ ಅಜ್ಞಾನ…

ಕತ್ತಲ ಒಳಗಣ ಬೆಳಕ
ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ

ಜ್ಞಾನವೇನು ಮರವೆಯೇ…

ನದಿ ಯಾವುದು
ನೀರು ಯಾವುದು

ದೋಣಿ ಯಾವುದು
ಹುಟ್ಟು ಯಾವುದು

ನದಿ ದಾಟಿಸಿದುದು ದೋಣಿಯೋ ಹುಟ್ಟೋ…

ನೀರ ನಡುವಿನ ದಾರಿ
ಕೂಡಿ ಹರಿಯದೇ

ನೀರು ಹರಿದರೆ ಹಳ್ಳ
ನಿಂತರೆ ಕೊಳ್ಳ

ನೀರರಿದು ನಿಂತು ಅಬ್ಧಿ..

ಹಸಿವು ಇದ್ದಲ್ಲಿ ಉಣ್ಣುವುದೇ ಸೊಗಸು.

Previous post ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
Next post ನಾನುವಿನ ಉಪಟಳ
ನಾನುವಿನ ಉಪಟಳ

Related Posts

ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...
ಮಣ್ಣು ಮೆಟ್ಟಿದ ದಾರಿ
Share:
Poems

ಮಣ್ಣು ಮೆಟ್ಟಿದ ದಾರಿ

October 5, 2021 ಜ್ಯೋತಿಲಿಂಗಪ್ಪ
ಈ ಸಿಟ್ಟು ದ್ವೇಷ ಪ್ರೇಮ ಕಾಮ ಮದ… ಎಲ್ಲಾ ನಾನು ಹೊತ್ತು ಹೋಗುವನೇ… ಈ ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ ಇದೆಲ್ಲಾ ಮಣ್ಣಾಗುವುದು ಇದ್ದೇ ಇದೆ ನಾನು ಮಣ್ಣಾಗುವ...

Comments 1

  1. ರವೀಶ್ ಜಗಲಿ
    Dec 18, 2024 Reply

    ಜ್ಞಾನಕ್ಕೆ ಅಜ್ಞಾನದ ಜಾಗ, ಕತ್ತಲಿಗೆ ಬೆಳಕಿನ ಒಡಲು… ಕವನ ಬೇರೆಲ್ಲಿಗೋ ದಾರಿ ತೋರುವಂತಿದೆ.👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
Copyright © 2026 Bayalu