Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು?
Share:
Poems December 8, 2021 Bayalu

ನಾನು ಯಾರು?

ಕನ್ನಡಿ ಪ್ರತಿಬಿಂಬದಲ್ಲಿ ಕಂಡ
ಕರಿಮೈಯ ಕವಚ ನೋಡಿ
ಊಹಿಸಿಕೊಂಡದ್ದು
ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ
ಹೋದವರನು ಕಂಡು
ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಿನ್ನ ನೀ ತಿಳಿಯೆಂದು ಹೊರಟು
ಗೀತೆ-ಭಾಷ್ಯಗಳಲಿ, ಗಾಹೆ-ದೋಹೆಗಳಲಿ
ಅಹಂಬ್ರಹ್ಮನೆಂದು ಏಕಾತ್ಮವಾಗಿ
ಅನಾತ್ಮವ ನೋಡಿ
ಪಾಂಡಿತ್ಯದ ಸೊಕ್ಕಿನಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಾನೆಂಬುದೇ ಅಹಂಕಾರ
ನೀನೆಂಬುದೇ ಮಾಯೆ!
ಮನಸಿಜನ ಮಾಯೆ ವಿಧಿ ವಿಳಸನದಲ್ಲಿ ನೆರಂಬಡೆ
ಕೊಂದು ಕೂಗದೇ ನರರುಂ!
ಮನಸಿಜನ ಮೋಸವನರಿತ ಅಮನಸ್ಕ ಕೇಳಿದ ನಾನು ಯಾರು?

ಮೇಲೆ ಮಂಟಪದಾ ವಸ್ತು
ಬ್ರಹ್ಮಾಂಡ ಪಿಂಡಾಂಡವಾಗಿರಲು
ಪಿಂಡವನಳಿಸಿ ಬ್ರಹ್ಮಾಂಡ ಬಯಲಾಗಿ
ಧಮ್ಮ ಪವತ್ತನವ ಹಿಡಿದಾತ ಕೇಳಿದ ನಾನು ಯಾರು?

ನಾನು ಯಾರು ಕೊಟ್ಟ ಕುದುರೆಯನು ಏರಲರಿಯದವನ
ಪ್ರಶ್ನೆ ಮತ್ತು ಉತ್ತರ
ನಾನು ಇಲ್ಲವೆಂದು ಹೊರಟ ವೆಂಕಟಗಿರಿಯಪ್ಪ
ಬುಟ್ಟಪ್ಪ ಹುಟ್ಲಪ್ಪ
ಕಾಯಕ ಕೇವಲಿಗಳು, ನಿಜಯೋಗಿಗಳು…

-ಕೇಶವಮೂರ್ತಿ ಹೆಚ್.ಎನ್
(‘ನಾನು ಯಾರು? ಎಂಬ ಆಳ-ನಿರಾಳ’ ಪುಸ್ತಕದ ಪ್ರೇರಣೆ)

Previous post ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
Next post ಬೆಳಕಲಿ ದೀಪ
ಬೆಳಕಲಿ ದೀಪ

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಅರ್ಥ – ವ್ಯರ್ಥ
Share:
Poems

ಅರ್ಥ – ವ್ಯರ್ಥ

April 5, 2026 ಜಬೀವುಲ್ಲಾ ಎಂ.ಅಸದ್
ಮುಗಿಲಿಗೆ ಜಿಗಿದ ಪಾದ ಮಸ್ತಕದ ಕಂದಕದಲ್ಲಿ ಚಿಗುರಿ ಶತಮಾನಗಳ ಮೊಳೆ ಹೊಡೆದ ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು ಕಾಲದ ಸಹಿಯಾಗಿ ಬದಲಾಗಿ ಉಸಿರ ಗೊರಿಯೊಳಗೆ ಬೆರೆತು ಹೆಜ್ಜೆ...

Comments 3

  1. K.S. Shivashankar
    Dec 14, 2021 Reply

    ನಾನು ಯಾರು? ಪುಸ್ತಕವನ್ನು ನಾನೂ ಓದಿದೆ. ಇಲ್ಲಿನ ಕವಿಗಳು ಪುಸ್ತಕದ ಸದಾಶಯವನ್ನು ಕಾವ್ಯದಲ್ಲಿ ಸೊಗಸಾಗಿ ಮೂಡಿಸಿದ್ದಾರೆ.

  2. ಅಹ್ಮದ್
    Jul 21, 2022 Reply

    ಚೆನ್ನಾಗಿದೆ

  3. ವೀರೇಶ್
    Sep 15, 2024 Reply

    ನಾನೆಂಬುದೇ ಅಹಂಕಾರ ನೀನೆಂಬುದೇ ಮಾಯೆ! ✍🏻👌🏻

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಮನಸ್ಸು
ಮನಸ್ಸು
September 7, 2020
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
Copyright © 2026 Bayalu