Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು?
Share:
Poems December 8, 2021 Bayalu

ನಾನು ಯಾರು?

ಕನ್ನಡಿ ಪ್ರತಿಬಿಂಬದಲ್ಲಿ ಕಂಡ
ಕರಿಮೈಯ ಕವಚ ನೋಡಿ
ಊಹಿಸಿಕೊಂಡದ್ದು
ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ
ಹೋದವರನು ಕಂಡು
ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಿನ್ನ ನೀ ತಿಳಿಯೆಂದು ಹೊರಟು
ಗೀತೆ-ಭಾಷ್ಯಗಳಲಿ, ಗಾಹೆ-ದೋಹೆಗಳಲಿ
ಅಹಂಬ್ರಹ್ಮನೆಂದು ಏಕಾತ್ಮವಾಗಿ
ಅನಾತ್ಮವ ನೋಡಿ
ಪಾಂಡಿತ್ಯದ ಸೊಕ್ಕಿನಿಂದ ಹೊರಬಿದ್ದವನು ಕೇಳಿದ ನಾನು ಯಾರು?

ನಾನೆಂಬುದೇ ಅಹಂಕಾರ
ನೀನೆಂಬುದೇ ಮಾಯೆ!
ಮನಸಿಜನ ಮಾಯೆ ವಿಧಿ ವಿಳಸನದಲ್ಲಿ ನೆರಂಬಡೆ
ಕೊಂದು ಕೂಗದೇ ನರರುಂ!
ಮನಸಿಜನ ಮೋಸವನರಿತ ಅಮನಸ್ಕ ಕೇಳಿದ ನಾನು ಯಾರು?

ಮೇಲೆ ಮಂಟಪದಾ ವಸ್ತು
ಬ್ರಹ್ಮಾಂಡ ಪಿಂಡಾಂಡವಾಗಿರಲು
ಪಿಂಡವನಳಿಸಿ ಬ್ರಹ್ಮಾಂಡ ಬಯಲಾಗಿ
ಧಮ್ಮ ಪವತ್ತನವ ಹಿಡಿದಾತ ಕೇಳಿದ ನಾನು ಯಾರು?

ನಾನು ಯಾರು ಕೊಟ್ಟ ಕುದುರೆಯನು ಏರಲರಿಯದವನ
ಪ್ರಶ್ನೆ ಮತ್ತು ಉತ್ತರ
ನಾನು ಇಲ್ಲವೆಂದು ಹೊರಟ ವೆಂಕಟಗಿರಿಯಪ್ಪ
ಬುಟ್ಟಪ್ಪ ಹುಟ್ಲಪ್ಪ
ಕಾಯಕ ಕೇವಲಿಗಳು, ನಿಜಯೋಗಿಗಳು…

-ಕೇಶವಮೂರ್ತಿ ಹೆಚ್.ಎನ್
(‘ನಾನು ಯಾರು? ಎಂಬ ಆಳ-ನಿರಾಳ’ ಪುಸ್ತಕದ ಪ್ರೇರಣೆ)

Previous post ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
Next post ಬೆಳಕಲಿ ದೀಪ
ಬೆಳಕಲಿ ದೀಪ

Related Posts

ಅಪ್ಪನಿಲ್ಲದ ಮನೆ
Share:
Poems

ಅಪ್ಪನಿಲ್ಲದ ಮನೆ

January 10, 2021 ಕೆ.ಆರ್ ಮಂಗಳಾ
ಅಪ್ಪನಿಲ್ಲದ ಮನೆ ಎಲ್ಲ ಇದ್ದೂ ಭಣಗುಡುತ್ತಿದೆ. ಎದೆಯ ಬೆಳಕೇ ಆರಿ ಹೋದಂತೆ ಮನದಲ್ಲಿ ಗಾಢ ಕಾರ್ಗತ್ತಲೆ ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು ಅಪ್ಪ ಮೌನ ಹೊದ್ದು...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 3

  1. K.S. Shivashankar
    Dec 14, 2021 Reply

    ನಾನು ಯಾರು? ಪುಸ್ತಕವನ್ನು ನಾನೂ ಓದಿದೆ. ಇಲ್ಲಿನ ಕವಿಗಳು ಪುಸ್ತಕದ ಸದಾಶಯವನ್ನು ಕಾವ್ಯದಲ್ಲಿ ಸೊಗಸಾಗಿ ಮೂಡಿಸಿದ್ದಾರೆ.

  2. ಅಹ್ಮದ್
    Jul 21, 2022 Reply

    ಚೆನ್ನಾಗಿದೆ

  3. ವೀರೇಶ್
    Sep 15, 2024 Reply

    ನಾನೆಂಬುದೇ ಅಹಂಕಾರ ನೀನೆಂಬುದೇ ಮಾಯೆ! ✍🏻👌🏻

Leave a Reply to ಅಹ್ಮದ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಗುರುವಂದನೆ
ಗುರುವಂದನೆ
October 13, 2022
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
Copyright © 2025 Bayalu