Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕ ಬೆಂಬತ್ತಿ…
Share:
Poems November 9, 2021 ಕೆ.ಆರ್ ಮಂಗಳಾ

ಬೆಳಕ ಬೆಂಬತ್ತಿ…

ಸಾಲು ಸಾಲು ಹಣತೆಗಳ ಹಚ್ಚಿ
ನೋಡುತ್ತಲೇ ಇದೆ
ಆಸೆಯಿಂದ ಈ ಮನ
ಬೆಳಕ ಗೋರಲು… ಒಳಗ ಬೆಳಗಲು…

ಕತ್ತಲೆಯ ಭಯವೋ, ಬೆಳಕಿನ ಮೋಹವೋ..

ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ
ಅನಾದಿ ಕಾಲದ ಅಜ್ಞಾನದ ಕಮಟು
ಆ ದೂಳು, ಆ ಗದ್ದಲ
ಸಾವಿರ ಸಾವಿರ ಇರುಳು
ಬಸಿದು ಕುಳಿತಂತೆ ನನ್ನೊಳಗೆ
ದಟ್ಟಗತ್ತಲು, ಕಾರ್ಗತ್ತಲು, ಕಡುಗತ್ತಲು
ಭವದ ಈ ಗವಗತ್ತಲನಟ್ಟಲು
ಸಾವಿರ ಸೂರ್ಯರೂ ಸಾಲಲಿಕ್ಕಿಲ್ಲ!

ಅಷ್ಟಿಷ್ಟು ಬತ್ತಿಗೆ, ಇಷ್ಟಿಷ್ಟು ಎಣ್ಣೆ
ಉರಿಯು ದಾಟುತಲಿರುವ
ಮರ್ಮವ ಕಾಣಬಲ್ಲೆಯಾ?

ಕಾಯ- ಜೀವದ ಬೆಸುಗೆಯಲಿ
ಅನೂಹ್ಯ ಪ್ರಕೃತಿಯೊಳಿರುವ
ಜೀವಚೈತನ್ಯವ ನೋಡಬಲ್ಲೆಯಾ?

-ಗುರು ಹಚ್ಚಿದ ಕಿಡಿಯಲ್ಲಿ
ಕಪ್ಪಾದ ಕಣ್ಣಾಲೆಯೊಳಗೊಂದು ಮಿಂಚು!
ಕಂದೀಲು ಹಿಡಿದು
ಬೆಳಕ ಹುಡುಕಲು ಹೊರಟ
ಮನ ನಾಚಿತ್ತು… ನಾಚಿತ್ತು…

Previous post ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
Next post ನಾನು ಯಾರು?
ನಾನು ಯಾರು?

Related Posts

ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಸಂತೆಯ ಸಂತ
ಸಂತೆಯ ಸಂತ
September 7, 2020
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
Copyright © 2026 Bayalu