Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕ ಬೆಂಬತ್ತಿ…
Share:
Poems November 9, 2021 ಕೆ.ಆರ್ ಮಂಗಳಾ

ಬೆಳಕ ಬೆಂಬತ್ತಿ…

ಸಾಲು ಸಾಲು ಹಣತೆಗಳ ಹಚ್ಚಿ
ನೋಡುತ್ತಲೇ ಇದೆ
ಆಸೆಯಿಂದ ಈ ಮನ
ಬೆಳಕ ಗೋರಲು… ಒಳಗ ಬೆಳಗಲು…

ಕತ್ತಲೆಯ ಭಯವೋ, ಬೆಳಕಿನ ಮೋಹವೋ..

ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ
ಅನಾದಿ ಕಾಲದ ಅಜ್ಞಾನದ ಕಮಟು
ಆ ದೂಳು, ಆ ಗದ್ದಲ
ಸಾವಿರ ಸಾವಿರ ಇರುಳು
ಬಸಿದು ಕುಳಿತಂತೆ ನನ್ನೊಳಗೆ
ದಟ್ಟಗತ್ತಲು, ಕಾರ್ಗತ್ತಲು, ಕಡುಗತ್ತಲು
ಭವದ ಈ ಗವಗತ್ತಲನಟ್ಟಲು
ಸಾವಿರ ಸೂರ್ಯರೂ ಸಾಲಲಿಕ್ಕಿಲ್ಲ!

ಅಷ್ಟಿಷ್ಟು ಬತ್ತಿಗೆ, ಇಷ್ಟಿಷ್ಟು ಎಣ್ಣೆ
ಉರಿಯು ದಾಟುತಲಿರುವ
ಮರ್ಮವ ಕಾಣಬಲ್ಲೆಯಾ?

ಕಾಯ- ಜೀವದ ಬೆಸುಗೆಯಲಿ
ಅನೂಹ್ಯ ಪ್ರಕೃತಿಯೊಳಿರುವ
ಜೀವಚೈತನ್ಯವ ನೋಡಬಲ್ಲೆಯಾ?

-ಗುರು ಹಚ್ಚಿದ ಕಿಡಿಯಲ್ಲಿ
ಕಪ್ಪಾದ ಕಣ್ಣಾಲೆಯೊಳಗೊಂದು ಮಿಂಚು!
ಕಂದೀಲು ಹಿಡಿದು
ಬೆಳಕ ಹುಡುಕಲು ಹೊರಟ
ಮನ ನಾಚಿತ್ತು… ನಾಚಿತ್ತು…

Previous post ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
Next post ನಾನು ಯಾರು?
ನಾನು ಯಾರು?

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
Copyright © 2026 Bayalu