Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗ್ರಹಣ
Share:
Poems December 9, 2025 ಡಾ. ಪಂಚಾಕ್ಷರಿ ಹಳೇಬೀಡು

ಗ್ರಹಣ

ಗ್ರಹಣ ಹಿಡಿದದ್ದು ಯಾರಿಗೆ?
ರವಿಗೋ, ಶಶಿಗೋ, ಮೂರ್ಖನಿಗೋ?

ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ
ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು!
ಸ್ಪರ್ಷ ಮೊದಲಿಲ್ಲ ನುಂಗುವುದೆಲ್ಲಿ, ಬಿಡುವುದೆಲ್ಲಿ?
ಇಷ್ಟದಿಂ ತಾವ್ ಸುತ್ತುವುದ ಬಿಡಲಿಲ್ಲನವರತ!

ಸರಳ ರೇಖೆಯ ಸರಳ ಜ್ಞಾನವ
ಸರಳವಾಗಿ ಅರಿಯಲಿಲ್ಲ ಮಾನವ
ಮರುಳುಗೊಂಡು ಮರುಳಾಗಿ ಸೆರೆಯಾದನಲ್ಲ
ಸೂರ್ಯಚಂದ್ರರ ರಾಹು ನುಂಗಿತೆಂದ ಭ್ರಮೆಯಲಿ!

ವಿಜ್ಞಾನವ ಹಿಂಗಿ ಬೆಳೆದ ಅಜ್ಞಾನ
ಸುಜ್ಞಾನವ ಬಿತ್ತಿ ಬೆಳೆಯಲಿಲ್ಲ ಮನದಿ
ಅಜ್ಞಾನದಿ ಮುಚ್ಚಿ ಮನದ ಕಿಟಕಿ ಬಾಗಿಲು
ಪ್ರಜ್ಞಾಹೀನ ಹುಸಿಯಾಚಾರ ವಿಚಾರ ಸುಳಿಯಿತಲ್ಲ!

ಕತ್ತಲು ಕವಿದು ಚಿತ್ತ ಚಂಚಲಿಸಿ
ಮತ್ತೆ ತೊಳೆದ ದೇಗುಲ, ಮೂರ್ತಿ
ಅತ್ತ ತೊಳೆಯಲಿಲ್ಲ ಮನದ ಮಲಿನ
ನಿತ್ಯಸತ್ಯದ ಸೊಬಗನರಿಯಲಿಲ್ಲ ಮಾನವ!

-ಹವೀಪ

Previous post ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
Next post ಬೆಳಕಿನ ಹುಳು
ಬೆಳಕಿನ ಹುಳು

Related Posts

ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...
ನನ್ನ-ನಿನ್ನ ನಡುವೆ
Share:
Poems

ನನ್ನ-ನಿನ್ನ ನಡುವೆ

June 5, 2021 ಕೆ.ಆರ್ ಮಂಗಳಾ
ನನ್ನ-ನಿನ್ನ ನಡುವೆ ಗೋಡೆ ಎಬ್ಬಿಸಿದವರಾರು ಪರದೆ ಬಿಟ್ಟವರಾರು? ಕತ್ತಲು ತುಂಬಿದವರಾರು? ಮಂಜು ಕವಿಸಿದವರಾರು? ನಿನ್ನಿಂದ ನನ್ನ ದೂರ ಮಾಡಿದವರಾರು? ನನ್ನ-ನಿನ್ನ ನಡುವೆ ಕಂದ...

Comments 1

  1. ರಕ್ಷಿತಾ ಮಲ್ಲಪ್ಪಾ
    Dec 17, 2025 Reply

    ಬುದ್ದಿಗೆ ಹಿಡಿದ ಗ್ರಹಣವನ್ನು ಸೊಗಸಾಗಿ ಹೇಳಿದ್ದೀರಿ. ಯಾವತ್ತೂ ಬಿಡದೆ ಅಂಟಿದ ಈ ಗ್ರಹಣಕ್ಕೆ ಮೂಢನಂಬಿಕೆಗಳೂ ಅಂಟಿಕೊಂಡಿದ್ದು, ವಿಜ್ಞಾನ ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತಿದೆ😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಣಾಚಾರ
ಗಣಾಚಾರ
August 8, 2021
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಬಯಲಾದ ದೇವರು
ಬಯಲಾದ ದೇವರು
January 15, 2026
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
Copyright © 2026 Bayalu