Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯದೊಳಗಣ ಬಯಲು
Share:
Poems November 7, 2020 ಜ್ಯೋತಿಲಿಂಗಪ್ಪ

ಕಾಯದೊಳಗಣ ಬಯಲು

ಈ ಬಯಲು ಗುರುತಿಸಲಾರೆ
ನನ್ನ ಕಣ್ಣ ಎದುರು ನಾನು
ಬಯಸುವ ರೂಹು ಇಲ್ಲ

ಕಣ್ಣು ಹೇಳಿದುದು ಸುಳ್ಳೇ

ನೀ ಬಿಟ್ಟ ಉಸಿರಲೊಂದು
ದನಿ ಇದೆ ನಾ ಕೇಳಲಾರೆ

ಉಸಿರು ಒಳಗಣ ದನಿ
ಉಸಿರು ನುಂಗಿತು
ಕಣ್ಣ ಒಳಗಣ ಉಸಿರು
ನೋಟ ನುಂಗಿತು

ಈ ಗೆರೆ ಕೊರೆದು
ಹೋದವರು ಯಾರು ಯಾರು
ಅಳಿಸದಾ ಗೆರೆಯೇ…

ನಾನು ನಾನೇ ಕೊರೆದುದು ಅಳಿಸದುದು
ನಾ ಹೆತ್ತ ಕೂಸು
ತಾಯಿ ಆಗದಿರೆ ಗಂಡನಿಗೆ ಕಳಂಕ

ಕಾಯ ಉಸಿರು, ಉಸಿರು ಕಾಯ
ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ
ಉಸಿರ ಒಳಗಣ ಆ ಸದ್ದು
ಏನದು…

ಒಂದೊಂದು ಕಾಯದಲೂ
ಒಂದು ಚೈತನ್ಯ ಎಂಬರಿವು ಈಗ
ಈಗ ಈ ಐನಸ್ಟೈನ್ ಚೈತನ್ಯ
ಸೂತ್ರ ಬಯಲು

ಬಾಗಿಲಿಗೆ ಮೊಳೆ ಜಡಿದು
ಒಳಗೆ ಕಾಲಿಟ್ಟಿರುವೆ.

Previous post ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
Next post ಗಂಟಿನ ನಂಟು
ಗಂಟಿನ ನಂಟು

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...

Comments 2

  1. Umesh Patri
    Nov 11, 2020 Reply

    ಕಣ್ಣು ಹೇಳುವುದು ಸುಳ್ಳೋ, ಮನಸ್ಸು ಹೇಳುವುದು ಸುಳ್ಳೋ… ಕೊನೆಗೆ ಈ ಬದುಕೇ ಸುಳ್ಳೋ… ಕವಿಯ ಗೊಂದಲ ಬಿಡುಗಡೆಯಾದರೂ ಓದುಗನ ಗೊಂದಲ ಹಾಗೇ ಉಳಿಯುತ್ತದೆ.

  2. Manikanta Dogila
    Nov 11, 2020 Reply

    ಪ್ರಾಣ ಇರುವ ದೇಹ
    ದೇಹ ಇರುವ ಪ್ರಾಣ… ಕಾಡುವ ಸಾಲುಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ನನ್ನ ಶರಣರು…
ನನ್ನ ಶರಣರು…
April 9, 2021
Copyright © 2026 Bayalu