Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಂಟಿನ ನಂಟು
Share:
Poems November 7, 2020 ಕೆ.ಆರ್ ಮಂಗಳಾ

ಗಂಟಿನ ನಂಟು

ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ
ನೂಲುವಾಗ ಗೊತ್ತಾಗಲೇ ಇಲ್ಲ
ಎಂಥ ಸಿಕ್ಕುಗಳು ಅಂತೀರಿ!
ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು

ಅಹಮಿಕೆಗೆ ಆಕ್ರೋಶದ ಗಂಟು
ಆಕ್ರೋಶಕೆ ಮದದ ಗಂಟು
ಮದಕೆ ಸೊಕ್ಕಿನ ಗಂಟು
ಸೊಕ್ಕಿಗೆ ತಿರಸ್ಕಾರದ ಗಂಟು
ತಿರಸ್ಕಾರಕ್ಕೆ ಸೇಡಿನ ಗಂಟು
ಸೇಡಿಗೆ ಭಾವದ ಗಂಟು
ಭಾವಕೆ ನಿರೀಕ್ಷೆಯಾ ಗಂಟು
ನಿರೀಕ್ಷೆಗೆ ಪ್ರೇಮದ ಗಂಟು
ಪ್ರೇಮಕೆ ಕಾಮದ ಗಂಟು
ಕಾಮಕ್ಕೆ ಬಯಕೆಯ ಗಂಟು
ಬಯಕೆಗೆ ಆಸೆಯ ಗಂಟು…
ಎಡಕ್ಕೆ ಬಲದ ಗಂಟು
ದ್ವೈತಕ್ಕೆ ಅದ್ವೈತದ ಗಂಟು
ಅಸ್ತಿತ್ವಕೆ ನಾಸ್ತಿತ್ವದ ಗಂಟು
ಮಾತಿಗೆ ಪ್ರತಿಮಾತಿನ ಗಂಟು
ಭಾವಗಳಿಗೆ ನಂಬಿಕೆಯ ಗಂಟು
ನಂಬಿಕೆಗಳಿಗೆ ಅಹಮಿಕೆಯ ಗಂಟು
ನಾನೆಂಬುದಕೆ ನನ್ನದೆಂಬ ಗಂಟು
ಕಾರಣಕ್ಕೆ- ಪ್ರತಿಕಾರಣದ ಗಂಟು…
ಹೀಗೆ ಹಾಕುತ್ತಲೇ ಹೋಗಿದ್ದೇನೆ ಗಂಟಿಗೆ ಗಂಟು

ಈ ಗಂಟುಗಳೇ
ನಡೆವ ದಾರಿಯಲಿ ಮುಳ್ಳಾದವು
ಹೃದಯಗಳ ನಡುವೆ ಬೆಟ್ಟಗಳಾದವು
ಸಂಬಂಧಗಳಲ್ಲಿ ಕಣಿವೆ ಕೊರೆದವು
ಮಾತುಗಳಲ್ಲಿ ವಿಷ ಬಿತ್ತಿದವು
ಗೊಂದಲದಲ್ಲಿ ಮುಳುಗಿಸಿದವು
ಮನದ ತಿಳಿ ಕದಡಿ ಕೊಚ್ಚೆ ಎಬ್ಬಿಸಿದವು…
ಹುಬ್ಬುಗಳ ನಡುವೆ ತೂರಿಕೊಂಡು
ನಗುವ ನುಂಗಿ ಎದೆಯ ಒತ್ತುತ್ತಲೇ ಇದ್ದವು…

ಗುರು ತೋರಿದ ಉಪಾಯದಲಿ
ನೂಲು ಹರಿಯದಂತೆ
ಗಂಟು ಬಿಚ್ಚುವ ಕಲೆ
ಸಿಕ್ಕಾಗದಂತೆ ಎಳೆಯ ನೇಯುವ ಕಲೆ
ಒಂದೊಂದಾಗಿ ತಿಳಿಯತೊಡಗಿತ್ತು
ಕಾರ್ಯ-ಕಾರಣ-ಪರಿಣಾಮಗಳ
ಭವಯಾನದ ಕರ್ಮ ಅರಿವಿಗೆ ನಿಲುಕಿತ್ತು.

Previous post ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
Next post ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ

Related Posts

ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...
ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...

Comments 1

  1. Harsha m patil
    Nov 11, 2020 Reply

    ಗಂಟಿಗೆ ಗಂಟು ಹಾಕುತ್ತಿರುವ ನಮಗೆ ಬದುಕೇ ಗಂಟಾಗಿ ಹೋಗಿದೆ. ರಿಪೇರಿ ಮಾಡಲು ಸಾಧ್ಯವಿಲ್ಲದಂತೆ ಸಂಬಂಧಗಳನ್ನು ಹಾಳುಮಾಡಿಕೊಂಡಿದ್ದೇವೆ….. ಕಣ್ಣಿಗೆ ಕಟ್ಟುವ ಚಿತ್ರಣ ನೀಡುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ನೋಟದ ಕೂಟ…
ನೋಟದ ಕೂಟ…
May 10, 2023
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಬಯಲಾಟ
ಬಯಲಾಟ
March 17, 2021
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
Copyright © 2026 Bayalu