Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನಸ್ಸು
Share:
Poems September 7, 2020 ಕೆ.ಆರ್ ಮಂಗಳಾ

ಮನಸ್ಸು

ಏನ ಹೇಳಲಿ ಗುರುವೇ ಮನಸಿನ ಬಗೆಗೆ?
ಹಿಂದಕ್ಕೆ ಜಾರುತ್ತಾ
ಮುಂದಕ್ಕೆ ತುಯ್ಯುತ್ತಾ
ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ
ಇದಾವ ಮರದ ಕೊಂಬೆಗೆ
ನೇತು ಹಾಕಿಕೊಂಡಿದೆ…

ಎಂದು ಕಟ್ಟಿದೆನೋ
ಅದ್ಹೇಗೆ ಏರಿ ಕೊಂಡೆನೋ
ಹಿಗ್ಗುತ್ತಾ ಹತ್ತಿ ಕೂತವಳನು
ತೂಗಿದ ಮೊದಲ ಕೈ ಅದಾವುದೋ?
ಪರಂಪರೆಯ ಉದ್ದಕ್ಕೂ
ಮೂಲ ಹುಡುಕುವುದೆಲ್ಲಿ…

ಜೀಕುವ ಆಟಕ್ಕೆ ಜೋತು ಬಿದ್ದಾಗಿದೆ
ಇಷ್ಟಾನಿಷ್ಟಗಳ ಖಯಾಲಿ
ಗಾಳಿಯಲಿ ತೇಲುವ ಸುಖ
ನೆಲಕೆ ಕಾಲಿಡಲೊಲ್ಲದ ಮರೆವು
ತೂಗಿಸಿದ ಹಗ್ಗ ಬಂಧನದ ಪಾಶವಾದದ್ದು
ತಿಳಿಯಲೇ ಇಲ್ಲ ಈ ಜೀಕಾಟದಲ್ಲಿ!

ಅತ್ತಿಂದಿತ್ತ ಇತ್ತಿಂದತ್ತ
ಕಾಲ ಸವೆಸುವ ಆಟ
ಹುಟ್ಟುತ್ತಾ- ಹೊಂದುತ್ತಾ,
ಜೀವವನೊತ್ತೆ ಇಟ್ಟು
ಜೀಕಿಕೊಳ್ಳುತ್ತಲೇ ಇದ್ದೇನೆ
ಹಿಂದಕ್ಕೆ ಮುಂದಕ್ಕೆ ಮತ್ತೆ ಮತ್ತೆ…

Previous post ಸಂತೆಯ ಸಂತ
ಸಂತೆಯ ಸಂತ
Next post ನದಿಯನರಸುತ್ತಾ…
ನದಿಯನರಸುತ್ತಾ…

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಹೆಸರಿಲ್ಲದಾ ಊರಿನ ಹಾಡು
Share:
Poems

ಹೆಸರಿಲ್ಲದಾ ಊರಿನ ಹಾಡು

May 6, 2020 ಪದ್ಮಾಲಯ ನಾಗರಾಜ್
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ// ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ ಶೋಕಿ ದಾರಿಯು...

Comments 1

  1. Ganesh A.P
    Sep 13, 2020 Reply

    ಕವನದ ಜೋಲಿಯಲ್ಲಿ ನಾನೂ ತೂಗುತ್ತಿದ್ದೇನೆ. ಅರ್ಥಗರ್ಭಿತ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಈ ಬಳ್ಳಿ…
ಈ ಬಳ್ಳಿ…
October 21, 2024
ನೆಮ್ಮದಿ
ನೆಮ್ಮದಿ
April 6, 2020
ಹುಡುಕಾಟ
ಹುಡುಕಾಟ
January 15, 2026
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಶಾಂತಿ
ಶಾಂತಿ
April 11, 2025
ಶಿವಾಚಾರ
ಶಿವಾಚಾರ
April 9, 2021
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
Copyright © 2026 Bayalu