Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನದಿಯನರಸುತ್ತಾ…
Share:
Poems October 6, 2020 ಜ್ಯೋತಿಲಿಂಗಪ್ಪ

ನದಿಯನರಸುತ್ತಾ…

ಜ್ಞಾನವೆಂಬುದೇನು? ಮನೋ ಭೇದ.
-ಅಲ್ಲಮ
ನಾನು
ಹುಟ್ಟುವಾಗ
ಹೇಳಿ ಬಂದೆನೇ ಸಾಯುವಾಗಲೂ
ಅಷ್ಟೇ ಬದುಕು ಹೇಳದು ಏನೂ
ಈ
ಕಡಲಲಿ
ಕಳೆದಿರುವ ನದಿ ಹುಡುಕುತಿರುವೆ
ಹುಡುಕುತಿರುವ
ನದಿ
ಕಳೆದಿದೆ ಕಡಲು
ಕಡಲಲಿ ಕಳೆಯುವ
ನದಿ
ಹುಡುಕುವುದೇ
ಕಡಲಿನಲಿ ಕಳೆಯುವ ನದಿಯ
ಬೆನ್ನೇರಿದೆ ಉಪ್ಪು
ಅವಲಂಬಿತನ ಹಂಗು ಬಿತ್ತಿದೆ
ದ್ವೇಷದ ಬೀಜ
ಹೇಳು ಸಾಯಲು ಬಿತ್ತ ಬೇಕು
ಬಂಜೆ
ಬೀಜ ಬಿತ್ತಿ ನೆಲ
ಬಂಜೆ ನನ್ನ ಮನಸ್ಸಿಗೆ ನಾನೇ
ಸಾಕ್ಷಿ
ಸದಾ ಸುಳ್ಳು ಒಂದರ
ಪಡಿನೆಳಲು ಇನ್ನೊಂದು
ರೂಹು ಕಣ್ಣ ಚೆಲುವು
ನಾನೇ ಒಂದು ಹೊರೆ
ಈ
ನೆಲಕ್ಕೆ ನನ್ನ ತಲೆಯ ಮೇಲಿನ
ಹೊರೆ
ಯಾಕೆ ಹೊರಿಸಲಿ ನಾನೇ ಹೊರುವೆ
ನಕ್ಕಿತು ನೆಲ
ಕಣ್ಣೀರು ಸವಿದರೆ ಉಪ್ಪರಿಯದು.

Previous post ಮನಸ್ಸು
ಮನಸ್ಸು
Next post ಭಾರ
ಭಾರ

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 1

  1. Nirmala R
    Oct 10, 2020 Reply

    ಕಡಲಲ್ಲಿ ನದಿ ತನ್ನ ಹುಡುಕುವ ಇಮೇಜ್ ಸೊಗಸಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಬಯಲಾದ ದೇವರು
ಬಯಲಾದ ದೇವರು
January 15, 2026
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
Copyright © 2026 Bayalu