Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನದಿಯನರಸುತ್ತಾ…
Share:
Poems October 6, 2020 ಜ್ಯೋತಿಲಿಂಗಪ್ಪ

ನದಿಯನರಸುತ್ತಾ…

ಜ್ಞಾನವೆಂಬುದೇನು? ಮನೋ ಭೇದ.
-ಅಲ್ಲಮ
ನಾನು
ಹುಟ್ಟುವಾಗ
ಹೇಳಿ ಬಂದೆನೇ ಸಾಯುವಾಗಲೂ
ಅಷ್ಟೇ ಬದುಕು ಹೇಳದು ಏನೂ
ಈ
ಕಡಲಲಿ
ಕಳೆದಿರುವ ನದಿ ಹುಡುಕುತಿರುವೆ
ಹುಡುಕುತಿರುವ
ನದಿ
ಕಳೆದಿದೆ ಕಡಲು
ಕಡಲಲಿ ಕಳೆಯುವ
ನದಿ
ಹುಡುಕುವುದೇ
ಕಡಲಿನಲಿ ಕಳೆಯುವ ನದಿಯ
ಬೆನ್ನೇರಿದೆ ಉಪ್ಪು
ಅವಲಂಬಿತನ ಹಂಗು ಬಿತ್ತಿದೆ
ದ್ವೇಷದ ಬೀಜ
ಹೇಳು ಸಾಯಲು ಬಿತ್ತ ಬೇಕು
ಬಂಜೆ
ಬೀಜ ಬಿತ್ತಿ ನೆಲ
ಬಂಜೆ ನನ್ನ ಮನಸ್ಸಿಗೆ ನಾನೇ
ಸಾಕ್ಷಿ
ಸದಾ ಸುಳ್ಳು ಒಂದರ
ಪಡಿನೆಳಲು ಇನ್ನೊಂದು
ರೂಹು ಕಣ್ಣ ಚೆಲುವು
ನಾನೇ ಒಂದು ಹೊರೆ
ಈ
ನೆಲಕ್ಕೆ ನನ್ನ ತಲೆಯ ಮೇಲಿನ
ಹೊರೆ
ಯಾಕೆ ಹೊರಿಸಲಿ ನಾನೇ ಹೊರುವೆ
ನಕ್ಕಿತು ನೆಲ
ಕಣ್ಣೀರು ಸವಿದರೆ ಉಪ್ಪರಿಯದು.

Previous post ಮನಸ್ಸು
ಮನಸ್ಸು
Next post ಭಾರ
ಭಾರ

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...

Comments 1

  1. Nirmala R
    Oct 10, 2020 Reply

    ಕಡಲಲ್ಲಿ ನದಿ ತನ್ನ ಹುಡುಕುವ ಇಮೇಜ್ ಸೊಗಸಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಶಿವಯೋಗ
ಶಿವಯೋಗ
July 4, 2021
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ಮನಸ್ಸು
ಮನಸ್ಸು
September 7, 2020
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
Copyright © 2026 Bayalu