Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರಡು ಎಲ್ಲಿ?
Share:
Poems October 5, 2021 ಕೆ.ಆರ್ ಮಂಗಳಾ

ಎರಡು ಎಲ್ಲಿ?

ನಾನು ದ್ವೈತವೋ ಅದ್ವೈತವೋ
ಹೀಗೊಂದು ಪ್ರಶ್ನೆ ಎದ್ದದ್ದೇ ತಡ
ನಡೆದಿತ್ತು ಒಳಗೊಂದು ತಾಕಲಾಟ-

ಒಂದೆಡೆ-
ನೆನಪುಗಳಿಗೆ, ಕನಸುಗಳಿಗೆ
ಪ್ರೀತಿಯ ಕನವರಿಕೆಗಳಿಗೆ
ಎದೆಯ ಹಂಬಲಗಳಿಗೆಲ್ಲ
ನಾನೇ ಕರುಳಿನ ಸೆಲೆ
ಪೋಣಿಸುತಾ ಮಾತುಗಳ
ನಾನಿಲ್ಲದೆ ನೀನಿಲ್ಲ ಎಂದಿತು ಮನ.

ಇನ್ನೊಂದೆಡೆ-
ಪರವಸ್ತುವಿನ ಪ್ರತಿನಿಧಿ ನಾ
ಜಗತ್ಕರ್ತನ ಪ್ರತಿಬಿಂಬ
ಎಲ್ಲದರ ಸೂತ್ರಧಾರಿ
ನಾನೇ ಅಂತಿಮಸತ್ಯ
ಆತ್ಮದ ಪರ ನಡೆದಿತ್ತು
ಚಿತ್ತದ ವಕಾಲತ್ತು.

ಮನವು ಕಲ್ಪನೆಯಾಟ
ಆತ್ಮ ಜ್ಞಾನದ ನೋಟ
ಮನವು- ಆತ್ಮಗಳೆರಡೂ
ನಾನಲ್ಲ ಗುರುವೇ.
ಇಲ್ಲದ ಮನವೂ ಅಲ್ಲ
ಕಲ್ಪಿತ ಆತ್ಮನೂ ಅಲ್ಲ
ಎರಡರ ಹಂಗಳಿದಲ್ಲದೆ
ಆಳ-ನಿರಾಳವಿಲ್ಲ.

Previous post ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
Next post ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…

Related Posts

ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ಶಿವಯೋಗ
ಶಿವಯೋಗ
July 4, 2021
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
Copyright © 2026 Bayalu