Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನದಿಯನರಸುತ್ತಾ…
Share:
Poems October 6, 2020 ಜ್ಯೋತಿಲಿಂಗಪ್ಪ

ನದಿಯನರಸುತ್ತಾ…

ಜ್ಞಾನವೆಂಬುದೇನು? ಮನೋ ಭೇದ.
-ಅಲ್ಲಮ
ನಾನು
ಹುಟ್ಟುವಾಗ
ಹೇಳಿ ಬಂದೆನೇ ಸಾಯುವಾಗಲೂ
ಅಷ್ಟೇ ಬದುಕು ಹೇಳದು ಏನೂ
ಈ
ಕಡಲಲಿ
ಕಳೆದಿರುವ ನದಿ ಹುಡುಕುತಿರುವೆ
ಹುಡುಕುತಿರುವ
ನದಿ
ಕಳೆದಿದೆ ಕಡಲು
ಕಡಲಲಿ ಕಳೆಯುವ
ನದಿ
ಹುಡುಕುವುದೇ
ಕಡಲಿನಲಿ ಕಳೆಯುವ ನದಿಯ
ಬೆನ್ನೇರಿದೆ ಉಪ್ಪು
ಅವಲಂಬಿತನ ಹಂಗು ಬಿತ್ತಿದೆ
ದ್ವೇಷದ ಬೀಜ
ಹೇಳು ಸಾಯಲು ಬಿತ್ತ ಬೇಕು
ಬಂಜೆ
ಬೀಜ ಬಿತ್ತಿ ನೆಲ
ಬಂಜೆ ನನ್ನ ಮನಸ್ಸಿಗೆ ನಾನೇ
ಸಾಕ್ಷಿ
ಸದಾ ಸುಳ್ಳು ಒಂದರ
ಪಡಿನೆಳಲು ಇನ್ನೊಂದು
ರೂಹು ಕಣ್ಣ ಚೆಲುವು
ನಾನೇ ಒಂದು ಹೊರೆ
ಈ
ನೆಲಕ್ಕೆ ನನ್ನ ತಲೆಯ ಮೇಲಿನ
ಹೊರೆ
ಯಾಕೆ ಹೊರಿಸಲಿ ನಾನೇ ಹೊರುವೆ
ನಕ್ಕಿತು ನೆಲ
ಕಣ್ಣೀರು ಸವಿದರೆ ಉಪ್ಪರಿಯದು.

Previous post ಮನಸ್ಸು
ಮನಸ್ಸು
Next post ಭಾರ
ಭಾರ

Related Posts

ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...

Comments 1

  1. Nirmala R
    Oct 10, 2020 Reply

    ಕಡಲಲ್ಲಿ ನದಿ ತನ್ನ ಹುಡುಕುವ ಇಮೇಜ್ ಸೊಗಸಾಗಿದೆ.

Leave a Reply to Nirmala R Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಹಾಯ್ಕು
ಹಾಯ್ಕು
September 6, 2023
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಈ ಬಳ್ಳಿ…
ಈ ಬಳ್ಳಿ…
October 21, 2024
Copyright © 2025 Bayalu