Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯದೊಳಗಣ ಬಯಲು
Share:
Poems November 7, 2020 ಜ್ಯೋತಿಲಿಂಗಪ್ಪ

ಕಾಯದೊಳಗಣ ಬಯಲು

ಈ ಬಯಲು ಗುರುತಿಸಲಾರೆ
ನನ್ನ ಕಣ್ಣ ಎದುರು ನಾನು
ಬಯಸುವ ರೂಹು ಇಲ್ಲ

ಕಣ್ಣು ಹೇಳಿದುದು ಸುಳ್ಳೇ

ನೀ ಬಿಟ್ಟ ಉಸಿರಲೊಂದು
ದನಿ ಇದೆ ನಾ ಕೇಳಲಾರೆ

ಉಸಿರು ಒಳಗಣ ದನಿ
ಉಸಿರು ನುಂಗಿತು
ಕಣ್ಣ ಒಳಗಣ ಉಸಿರು
ನೋಟ ನುಂಗಿತು

ಈ ಗೆರೆ ಕೊರೆದು
ಹೋದವರು ಯಾರು ಯಾರು
ಅಳಿಸದಾ ಗೆರೆಯೇ…

ನಾನು ನಾನೇ ಕೊರೆದುದು ಅಳಿಸದುದು
ನಾ ಹೆತ್ತ ಕೂಸು
ತಾಯಿ ಆಗದಿರೆ ಗಂಡನಿಗೆ ಕಳಂಕ

ಕಾಯ ಉಸಿರು, ಉಸಿರು ಕಾಯ
ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ
ಉಸಿರ ಒಳಗಣ ಆ ಸದ್ದು
ಏನದು…

ಒಂದೊಂದು ಕಾಯದಲೂ
ಒಂದು ಚೈತನ್ಯ ಎಂಬರಿವು ಈಗ
ಈಗ ಈ ಐನಸ್ಟೈನ್ ಚೈತನ್ಯ
ಸೂತ್ರ ಬಯಲು

ಬಾಗಿಲಿಗೆ ಮೊಳೆ ಜಡಿದು
ಒಳಗೆ ಕಾಲಿಟ್ಟಿರುವೆ.

Previous post ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
Next post ಗಂಟಿನ ನಂಟು
ಗಂಟಿನ ನಂಟು

Related Posts

ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...
ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...

Comments 2

  1. Umesh Patri
    Nov 11, 2020 Reply

    ಕಣ್ಣು ಹೇಳುವುದು ಸುಳ್ಳೋ, ಮನಸ್ಸು ಹೇಳುವುದು ಸುಳ್ಳೋ… ಕೊನೆಗೆ ಈ ಬದುಕೇ ಸುಳ್ಳೋ… ಕವಿಯ ಗೊಂದಲ ಬಿಡುಗಡೆಯಾದರೂ ಓದುಗನ ಗೊಂದಲ ಹಾಗೇ ಉಳಿಯುತ್ತದೆ.

  2. Manikanta Dogila
    Nov 11, 2020 Reply

    ಪ್ರಾಣ ಇರುವ ದೇಹ
    ದೇಹ ಇರುವ ಪ್ರಾಣ… ಕಾಡುವ ಸಾಲುಗಳು.

Leave a Reply to Umesh Patri Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಅನುಭವ ಮಂಟಪ
ಅನುಭವ ಮಂಟಪ
April 11, 2025
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
December 9, 2025
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
Copyright © 2026 Bayalu