Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿಯಲ್ಲದ ದಾರಿ…
Share:
Poems October 10, 2023 ಕೆ.ಆರ್ ಮಂಗಳಾ

ದಾರಿಯಲ್ಲದ ದಾರಿ…

ಗುರು ತೋರಿದ ದಾರಿಯಲಿ
ಬಂಡೆಗಳ ಸಿಡಿಸಬೇಕು
ಗುಡ್ಡಗಳ ಒಡೆಯಬೇಕು
ಕಮರಿ, ಹೊಳ್ಳ ದಾಟಬೇಕು
ಮುಳ್ಳುಗಂಟಿ ಕಿತ್ತಬೇಕು

ಇಷ್ಟಪಟ್ಟು ನಡೆಯದಿದ್ದರೆ
ಇದು ಬಲು ಕಷ್ಟದ ದಾರಿ

ಧರ್ಮಗ್ರಂಥಗಳ ಹಿಡಿದರೆ
ಎದುರಿದ್ದೂ ಕಾಣದಾ ದಾರಿ

ಮಾತಿನಾಟಕೆ ಸಿಲುಕಿದರೆ
ಮರೆಯಾಗೋ ದಾರಿ

ಅರ್ಥಕ್ಕೆ ಆತುಕೊಂಡರೆ
ಪತ್ತೆಯಾಗದ ದಾರಿ

ಜ್ಞಾನದಾಹಕೆ ಬಾಯ್ತೆರೆದರೆ
ಮರೀಚಿಕೆಯಾಗೋ ದಾರಿ

ಯೋಗದ ಬೆನ್ನ ಬಿದ್ದರೆ
ದೂರ ಉಳಿಯುವ ದಾರಿ

ನಮ್ಮ ಕಗ್ಗಾಡನ್ನು
ನಾವೇ ತರಿಯಬೇಕು
ನಮ್ಮ ಕದಳಿಯ ಹೊಲಬ
ನಾವೇ ಅರಿಯಬೇಕು

ಕೆಚ್ಚಿರಬೇಕು ನಡೆಯುದಕೆ
ಹುಚ್ಚಿರಬೇಕು ಬಿಡೆ ಎನ್ನಲಿಕೆ
ಪಟ್ಟುಹಿಡಿಯಲೇ ಬೇಕು
ಬಾಗದ ಮನಸಿನ ಮುಂದೆ

ಸರಳಾತಿ ಸರಳವಾಗಿದ್ದರೂ
ಸುಲಭದಲಿ ಸಿಗದು
ಹಮ್ಮುಬಿಮ್ಮುಗಳಿಗಂತೂ
ಹತ್ತಿರವೇ ಸುಳಿಯದು
ಅಂತಿಂಥದಲ್ಲ ಈ ಮಹಾದಾರಿ
ಕರುಣೆಯಲಿ ಗುರು ಕೊಟ್ಟ
ಶಿವಪಥಕೊಯ್ಯುವ ಈ ರಹದಾರಿ.

Previous post ಕನ್ನಡಿ ನಂಟು
ಕನ್ನಡಿ ನಂಟು
Next post ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...

Comments 1

  1. Padmalaya
    Oct 11, 2023 Reply

    ಕಿತ್ತಬೇಕು ಅಲ್ಲಮ್ಮಕೀಳಬೇಕು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಸೂರ್ಯ
ಸೂರ್ಯ
January 8, 2023
ಎರವಲು ಮನೆ…
ಎರವಲು ಮನೆ…
August 10, 2023
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
Copyright © 2026 Bayalu