Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಣದ ಬೆಳಕ ಜಾಡನರಸಿ…
Share:
Poems December 13, 2024 ಜಬೀವುಲ್ಲಾ ಎಂ.ಅಸದ್

ಕಾಣದ ಬೆಳಕ ಜಾಡನರಸಿ…

ಮರೆತ ಇಳಿ ಸಂಜೆಯೊಂದು
ಮುಂಜಾನೆಗೆ ಕಾಡುವಾಗ
ಕಾಫಿ ಮುಗಿದ ಕಪ್ಪಿನಲಿ
ತುಂಬಿ ಚೆಲ್ಲಿದೆ ವೈರಾಗ್ಯ
ಶೂನ್ಯ ಹೀರಿದವನೆ ವಶ

ಕಾಲು ಮುರಿದ ಕುರ್ಚಿಯ ಮೇಲು
ಕಾಲಿನ ಮೇಲೆ ಕಾಲು ಹಾಕಿ ಕೂತು
ಕನಿಕರವಿಲ್ಲದೆ
ನೆನಪುಗಳು ಕೂಡಿ ನಗುವಾಗ
ನಿಂತಂತೆ ಶ್ವಾಸ

ಒಲೆಯ ಮೇಲೆ ಅನ್ನ ಕುದಿವ ಸದ್ದಿಗೆ
ಮನಸೆಲ್ಲಾ ಒದ್ದೆ ಮುದ್ದೆ
ಮಳೆಯಿಲ್ಲ ಹೊರಗೆ
ಕಡಲ ಮೊರೆತ ಒಳಗೆ
ನೋವಿನ ಹಿಡಿಯಲ್ಲಿ ನಲುಗಿದಂತೆ ಸಂತಸ

ಕತ್ತಲ ಕೋಣೆಯ ಹಾಡು
ಇಂಪಾಗಿ ಕೇಳುತಿದೆ ಏಕೋ?!
ಎದ್ದು ಹೊರಡಬೇಕು ಇಲ್ಲಿಂದ ಮೊದಲು
ಕಾಣದ ಬೆಳಕ ಜಾಡ ಅರಸಿ
ಬಯಲು ಕರೆದಂತೆ ಭಾಸ.

Previous post ಯಾಲಪದದ ಸೊಗಡು
ಯಾಲಪದದ ಸೊಗಡು
Next post ನೀರು… ಬರಿ ನೀರೇ?
ನೀರು… ಬರಿ ನೀರೇ?

Related Posts

ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 2

  1. Padmalaya
    Dec 13, 2024 Reply

    ಒಗಟು ಜಿಗಟಿನ ಕಾವ್ಯ ಪಿತಾಮಹ ಜೋತಿಲಿಂಗಪ್ಪನವರ ಕಾವ್ಯ ಒಂದು ಕಣ್ಕಟ್ಟು ವಿದ್ಯೆ ಯಂತೆ ತೋರಿ ಅಡಗುತ್ತದೆ

  2. ಸಂತೋಷ್ ಬಿರಾದಾರ
    Dec 18, 2024 Reply

    ಎದ್ದು ಹೊರಡಬೇಕು… ಕುದಿವ ಮನಕೆ ತಂಗಾಳಿ ಹರಿದುಬರುವಲ್ಲಿಗೆ, ಎರಡು-ಮೂರು ಸಲ ಓದಿಸಿಕೊಂಡ ಕವನದ ಅಂತರಾಳಕ್ಕೆ ಒಪ್ಪುವಂತಿದೆ ಚಿತ್ರ 🫡

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
Copyright © 2026 Bayalu