Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಣದ ಬೆಳಕ ಜಾಡನರಸಿ…
Share:
Poems December 13, 2024 ಜಬೀವುಲ್ಲಾ ಎಂ.ಅಸದ್

ಕಾಣದ ಬೆಳಕ ಜಾಡನರಸಿ…

ಮರೆತ ಇಳಿ ಸಂಜೆಯೊಂದು
ಮುಂಜಾನೆಗೆ ಕಾಡುವಾಗ
ಕಾಫಿ ಮುಗಿದ ಕಪ್ಪಿನಲಿ
ತುಂಬಿ ಚೆಲ್ಲಿದೆ ವೈರಾಗ್ಯ
ಶೂನ್ಯ ಹೀರಿದವನೆ ವಶ

ಕಾಲು ಮುರಿದ ಕುರ್ಚಿಯ ಮೇಲು
ಕಾಲಿನ ಮೇಲೆ ಕಾಲು ಹಾಕಿ ಕೂತು
ಕನಿಕರವಿಲ್ಲದೆ
ನೆನಪುಗಳು ಕೂಡಿ ನಗುವಾಗ
ನಿಂತಂತೆ ಶ್ವಾಸ

ಒಲೆಯ ಮೇಲೆ ಅನ್ನ ಕುದಿವ ಸದ್ದಿಗೆ
ಮನಸೆಲ್ಲಾ ಒದ್ದೆ ಮುದ್ದೆ
ಮಳೆಯಿಲ್ಲ ಹೊರಗೆ
ಕಡಲ ಮೊರೆತ ಒಳಗೆ
ನೋವಿನ ಹಿಡಿಯಲ್ಲಿ ನಲುಗಿದಂತೆ ಸಂತಸ

ಕತ್ತಲ ಕೋಣೆಯ ಹಾಡು
ಇಂಪಾಗಿ ಕೇಳುತಿದೆ ಏಕೋ?!
ಎದ್ದು ಹೊರಡಬೇಕು ಇಲ್ಲಿಂದ ಮೊದಲು
ಕಾಣದ ಬೆಳಕ ಜಾಡ ಅರಸಿ
ಬಯಲು ಕರೆದಂತೆ ಭಾಸ.

Previous post ಯಾಲಪದದ ಸೊಗಡು
ಯಾಲಪದದ ಸೊಗಡು
Next post ನೀರು… ಬರಿ ನೀರೇ?
ನೀರು… ಬರಿ ನೀರೇ?

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 2

  1. Padmalaya
    Dec 13, 2024 Reply

    ಒಗಟು ಜಿಗಟಿನ ಕಾವ್ಯ ಪಿತಾಮಹ ಜೋತಿಲಿಂಗಪ್ಪನವರ ಕಾವ್ಯ ಒಂದು ಕಣ್ಕಟ್ಟು ವಿದ್ಯೆ ಯಂತೆ ತೋರಿ ಅಡಗುತ್ತದೆ

  2. ಸಂತೋಷ್ ಬಿರಾದಾರ
    Dec 18, 2024 Reply

    ಎದ್ದು ಹೊರಡಬೇಕು… ಕುದಿವ ಮನಕೆ ತಂಗಾಳಿ ಹರಿದುಬರುವಲ್ಲಿಗೆ, ಎರಡು-ಮೂರು ಸಲ ಓದಿಸಿಕೊಂಡ ಕವನದ ಅಂತರಾಳಕ್ಕೆ ಒಪ್ಪುವಂತಿದೆ ಚಿತ್ರ 🫡

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಪೊರೆವ ದನಿ…
ಪೊರೆವ ದನಿ…
August 11, 2025
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
Copyright © 2026 Bayalu