Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮರೆತೆ…
Share:
Poems July 4, 2022 ಜ್ಯೋತಿಲಿಂಗಪ್ಪ

ಮರೆತೆ…

ಮಗುವಾಗಬೇಕು ನಿಜ
ಮರಳದು ಚೈತನ್ಯ ಮರೆತೆ

ಹೂಳಲಾಗದು ನೆಳಲು ನಿಜ
ನೆಳಲು ಹಿಂಬಾಲಿಸುವುದು ಮರೆತೆ

ನೆರಳು ಯಾವಾಗಲೂ ಇರದು ನಿಜ
ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ

ಸಮಯ ಕಳೆಯುವುದು ನಿಜ
ಕಳೆದ ಸಮಯ ಕಳೆದುದು ಮರೆತೆ

ಸಮಯಕೆ ಸಾವಿಲ್ಲ ನಿಜ
ಸಾಯುವ ಸಮಯ ಬರುವುದು ಮರೆತೆ

ಸುಖವೇನೂ ಸುಮ್ಮನೆ ಬರುವುದಿಲ್ಲ ನಿಜ
ದುಃಖವೂ ಜೊತೆಗೆ ಇರುವುದು ಮರೆತೆ

ಖಾಲೀ ಮಡಿಕೆ ಶಬ್ದ ಮಾಡುವುದು ನಿಜ
ಖಾಲಿಯಲಿ ಬಯಲು ತುಂಬುವುದು ಮರೆತೆ

ಏಕಾಂತ ಒಂಟಿತನವಲ್ಲ ನಿಜ
ಒಂಟಿತನವ ಏಕಾಂತವಾಗಿಸುವುದು ಮರೆತೆ

ಸತ್ಯದ ಮುಖವ ಕಾಣಿಸದು ಕತ್ತಲು ನಿಜ
ಕತ್ತಲೊಳಗೂ ಸತ್ಯ ಇರುವುದು ಮರೆತೆ

ಧ್ಯಾನವೇ ಸಾಧನೆಯಲ್ಲ ನಿಜ
ಸಾಧಿಸಿದುದೆಲ್ಲವೂ ಧ್ಯಾನ ಮರೆತೆ

ಬಯಲು ಓದಲು ಬಯಲಿಗಿಳಿದೆ ನಿಜ
ಬಯಲು ಬೆತ್ತಲಾಗಿಸಿ ಬಟ್ಟೆ ತೊಟ್ಟುದ ಮರೆತೆ.

ಬೇರಿಲ್ಲದೆ ಎಲೆಗಳಿರವು ನಿಜ
ಎಲೆಗಳಿರದೆ ಬೇರೂ ನಿಲ್ಲದು ಮರೆತೆ.

ಬೇರು ನೆಲದೊಳಗಿಳೀಯುವಾಗ ಎಲೆಗಳು ನಗುವವು ನಿಜ
ಎಲೆಗಳು ಒಣಗಿ ನೆಲಕುದುರುವಾಗ ಬೇರು ನಗುವುದು ಮರೆತೆ.

Previous post ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
Next post ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…

Related Posts

ಕಾಯದೊಳಗಣ ಬಯಲು
Share:
Poems

ಕಾಯದೊಳಗಣ ಬಯಲು

November 7, 2020 ಜ್ಯೋತಿಲಿಂಗಪ್ಪ
ಈ ಬಯಲು ಗುರುತಿಸಲಾರೆ ನನ್ನ ಕಣ್ಣ ಎದುರು ನಾನು ಬಯಸುವ ರೂಹು ಇಲ್ಲ ಕಣ್ಣು ಹೇಳಿದುದು ಸುಳ್ಳೇ ನೀ ಬಿಟ್ಟ ಉಸಿರಲೊಂದು ದನಿ ಇದೆ ನಾ ಕೇಳಲಾರೆ ಉಸಿರು ಒಳಗಣ ದನಿ ಉಸಿರು ನುಂಗಿತು...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Comments 2

  1. Praveen Kammar
    Jul 5, 2022 Reply

    ಮರೆತದ್ದೇನು, ಅರಿತದ್ದೇನು? ದ್ವಂದ್ವಗಳಲ್ಲಿ ಸಿಕ್ಕಿದ್ದೇನು? ಸುಂದರ ಕವನ.

  2. Channabasappa B
    Jul 7, 2022 Reply

    ಮರೆಯಬೇಕಾದವುಗಳನ್ನು ಮರೆತಾಗಲೇ ಅರಿವು ಕಣ್ಣುತೆರೆಯುವುದು, ಬಯಲು ಸಾಕ್ಷಾತ್ಕಾರವಾಗುವುದು!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ದಾಸೋಹ ತತ್ವ
ದಾಸೋಹ ತತ್ವ
January 10, 2021
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
Copyright © 2026 Bayalu