Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಚ್ಚು ಖೋಡಿ ಮನಸು
Share:
Poems August 6, 2022 ಕೆ.ಆರ್ ಮಂಗಳಾ

ಹುಚ್ಚು ಖೋಡಿ ಮನಸು

ಕಪ್ಪು ಕೌದಿಯ ಹೊದ್ದು
ತನ್ನ ಬಣ್ಣವನೇ ಮರೆತು
ಮಲಗಿಬಿಟ್ಟಿದೆ ನೀಲಿಯಾಗಸ
ಒಳ-ಹೊರಗು ಮಬ್ಬಾಯ್ತು…
ಕತ್ತಲೆಯ ನಂಜೇರಿ
ಕಣ್ಣು ಹರಿಸಿದುದ್ದಕ್ಕೂ
ಎಲ್ಲೆಲ್ಲೂ ಮಸುಕು
ನಿಂತಲ್ಲೇ ಯುಗಯುಗಕು ನಿಂತು
ಜೋಮುಗಟ್ಟಿತು ಕಾಲು
ನಡೆಯ ಮರೆತು…

ಮೇಘಗಳ ಆರ್ಭಟದಲಿ
ಆಗೀಗ ಸಿಡಿಯುತಿದೆ
ಮಿಂಚು-ಗುಡುಗು
ಕೊರೆವ ಚಳಿಯಲ್ಲೂ
ಬಿಟ್ಟ ನಿಟ್ಟುಸಿರ ಬಿಸಿ ಹಬೆಯು
ಸುರುಳಿಸುರುಳಿಯಾಗಿ
ಮೇಲೆ ಸರಿದು ಹೋಗುತಿದೆ…

ಎಡಬಿಡದೆ ಸುರಿಯುತಿಹ
ಮಳೆಯ ಹನಿಗಳಾ ಹಿಡಿದು
ಮುಗಿಲನೇರುವ ಕಿಚ್ಚು…
ಹಾಡುಹಗಲೇ ಕಾಣೆಯಾದ
ರವಿಯ ಹುಡುಕಿ ತರುವಾ ಹುಚ್ಚು
ಕಲ್ಪನೆಯ ಕುದುರೆಗೆ
ಎಣೆಯುಂಟೆ? ಕೊನೆವುಂಟೆ?
ನಿಜದತ್ತ ನಡೆಸುವ ಶಕ್ತಿಯುಂಟೆ?

ದೇಹ ಕಾವನು ಕಾಪಿಟ್ಟ ಜೀವಕೆ
ಎಲ್ಲಿಂದ ಬಂತಿದು
ಗಗನ ತಡಕುವ ಕನಸು!?
ನಿನ್ನೊಳಗೆ ನಿನ್ನಲ್ಲೇ
ಇಳಿದು ನೋಡೆಂದು
ತಲೆಗೆ ಮೊಟಕಿದ ಗುರು ಬೆನ್ನ ಬಳಿ ನಿಂತು

ಒಳಗಿದ್ದರೂ ಒಳಗ ನೋಡದೇ
ಹೊರಗೆ ಸುತ್ತುವ ಚಟ
ಭ್ರಮೆ ಬಿಡದ ಹಟ
ಮನಕಂಟಿ ಕಾಲಗಳೇ ಸರಿದವು…
ಗುರು ಕೊಟ್ಟ ಸುಳಿವುಗಳು
ಸಿಕ್ಕು ಕಣ್ಮರೆಯಾಗಿ ಕಾಡುತಿಹವು
ದೌರ್ಬಲ್ಯವೆನಲೇ, ಸೋಲೆನಲೆ
ಗೊಂದಲಗಳ ಬೀಡೆನಲೇ?
ಗೊತ್ತು ಗುರಿಯಿಲ್ಲದೆ ಅಲೆವ
ತುಂಡು ಮೋಡದ ತೆರದಿ
ತಳಮಳಿಸುತಿದೆ ಎದೆಯು
ಎಂದಿಗೋ ಎಂದಿಗೋ…
ನನ್ನಿರಿವಿನ ಅರಿವನರಿಯುವ ಗಳಿಗೆ
ಒದಗಿ ಬರುವುದೆಂದಿಗೋ…?

Previous post ಆಸರೆ
ಆಸರೆ
Next post ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

Related Posts

ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...
ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
Copyright © 2026 Bayalu