Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಪ್ಪನಿಲ್ಲದ ಮನೆ
Share:
Poems January 10, 2021 ಕೆ.ಆರ್ ಮಂಗಳಾ

ಅಪ್ಪನಿಲ್ಲದ ಮನೆ

ಅಪ್ಪನಿಲ್ಲದ ಮನೆ
ಎಲ್ಲ ಇದ್ದೂ ಭಣಗುಡುತ್ತಿದೆ.
ಎದೆಯ ಬೆಳಕೇ ಆರಿ ಹೋದಂತೆ
ಮನದಲ್ಲಿ ಗಾಢ ಕಾರ್ಗತ್ತಲೆ

ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು
ಅಪ್ಪ ಮೌನ ಹೊದ್ದು ನಿರ್ಲಿಪ್ತನಾಗುತ್ತಿದ್ದ
ಅವ್ವನ ಮಾತಿಗೆ ಕಿವಿಯಾದೆವು
ಅಪ್ಪನ ಮೌನಕ್ಕೆ ಕಣ್ಣಾದೆವು…

ಕೊನೆಗೆ ಮಾತು ಮರೆತ ಅಪ್ಪ
ನೆನಪುಗಳನ್ನೂ ತೂರಿಬಿಟ್ಟ
ಬಿಸಿ ರೊಟ್ಟಿಗೆ, ರಾಗಿ ಗಂಜಿಗೆ,
ಹಸಿವು- ಬಾಯಾರಿಕೆಗೆ,
ರಾತ್ರಿ- ಬೆಳಗುಗಳಿಗೆ ಸ್ಪಂದಿಸದೇ
ತನ್ನೊಳಗೆ ಇಳಿಯುತ್ತಾ
ಮೌನವಾಗಿ
ಕಣ್ಣು ತೆರೆಯುವುದನ್ನೇ ನಿಲ್ಲಿಸಿದ…
ಜೋಪಾನ ಮಾಡಿದ ಹೆಂಡತಿ,
ಒಡಲ ಮಕ್ಕಳು, ಮೊಮ್ಮಕ್ಕಳು,
ಜೀವದಂತಿದ್ದ ಗೆಳೆಯರು,
ಹತ್ತಿರದ ಬಸವ ಬಂಧುಗಳು,
ದೂರದ ಬಳಗಕ್ಕೆ ಕರೆ ಮಾಡಲು
ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದ ಮೊಬೈಲ್,
ಬಸವ ಟಿವಿ ನೋಡಲು
ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ ರಿಮೋಟ್,
ಕೊನೆಗೆ ಎದೆಯ ಮೇಲಿನ
ಲಿಂಗವನ್ನೂ ಮರೆತು ಬಿಟ್ಟ…

ಮುಂಜಾನೆಯ ಅಂಗಳ,
ನಡುಮನೆಯ ಕುರ್ಚಿ,
ಕೋಣೆಯ ಮಂಚ,
ಮೂಲೆಯಲ್ಲಿನ ಕೋಲು,
ಟೀಪಾಯಿ ಮೇಲಿನ ಕನ್ನಡಕ,
ಸಿಂಕ್ ಪಕ್ಕದಲ್ಲಿನ ಹಲ್ಲಿನ ಸೆಟ್,
ಕಾಯುತ್ತಿರುವಂತಿವೆ ಅಪ್ಪನಿಗಾಗಿ…

ಇದ್ದಾಗ ಅಪ್ಪನ ಜಗತ್ತಿನಲ್ಲಿ
ತೂರಿಕೊಳ್ಳದ ಸಂಕಟ,
ಮಸಣದ ಮಣ್ಣಲ್ಲಿ
ವಿಭೂತಿ ಬೂದಿಯ ಹಚ್ಚಿಸಿಕೊಳ್ಳುತ್ತಿದ್ದ
ಅಪ್ಪನ ಶಾಂತ ಮುಖ
ಮಿಸುಕಾಡುತ್ತಿದೆ ಮನದಲ್ಲಿ ಒಂದೆ ಸಮ
ಬಯಲಲ್ಲಿ ಬಯಲಾದ ಅಪ್ಪ
ಪದಾರ್ಥದಿಂದ ಪ್ರಸಾದಕ್ಕೆ
ಎಲ್ಲೆ ದಾಟಿದ ಜೀವ
ಮಾತನಾಡದೆಯೇ
ಕಲಕುತಿದೆ ಎದೆಯ ಭಾವ
ಅಪ್ಪನಿಲ್ಲದ ಮನೆ
ಹೇಗೆ ಮರೆಯುವುದು ನೋವ?

Previous post ಇದ್ದಷ್ಟೇ…
ಇದ್ದಷ್ಟೇ…
Next post ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

Related Posts

ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. ಪಂಕಜಾ
    Jan 14, 2021 Reply

    ಎರಡು ವರ್ಷಗಳ ಹಿಂದೆ ನಾನೂ ತಂದೆಯನ್ನು ಕಳೆದುಕೊಂಡೆ, ಇದೇ ನೋವನ್ನು ಅನುಭವಿಸಿದೆ, ಓದುತ್ತಾ ಕಣ್ಣು ಹನಿಯಾದವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಈ ಬಳ್ಳಿ…
ಈ ಬಳ್ಳಿ…
October 21, 2024
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
Copyright © 2026 Bayalu