Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವು-ಮರೆವಿನಾಟ
Share:
Poems August 8, 2021 ಕೆ.ಆರ್ ಮಂಗಳಾ

ಅರಿವು-ಮರೆವಿನಾಟ

ನೀನರಿಯೆ ನಾನಾರೆಂದು
ನಾಮರೆತೆ ನೀನಾರೆಂದು
ನನ್ನಲ್ಲೇ ನೀನಿದ್ದರೂ
ನಿನ್ನಿಂದಲೇ ನಾ ಬದುಕಿದ್ದರೂ…
ಇದೇ ಅಲ್ಲವೇ ವಿಸ್ಮಯ?

ನಾ-ನೀನೆಂಬ ಉಭಯವೇ ಇಲ್ಲ
ಭ್ರಮೆಗೆ ಬಲಿಯಾಗದೆ
ತಿಳಿದು ನೋಡೆಂದ ಗುರು-
ನೀನೇ ನಾನೋ, ನಾನೇ ನೀನೋ…
ಮತ್ತೇ ಶುರುವಾಯ್ತು ಗೊಂದಲ.

ನೀನು ನೀನೆಂದು
ಕನವರಿಸುತಿರುವುದೆಲ್ಲ ಬುದ್ಧಿಯ ಬೇಧ
ನಾನು ನಾನು ಎಂದು
ಬಡಬಡಿಸುತಿರುವುದೆಲ್ಲ ಮನದ ಕಸ

ಈ ತಿಪ್ಪೆಯ ಮೇಲೆ ಕೂತು
ಹಿಡಿಯಬಹುದೇ ಸತ್ಯದ ಕೈಯ?
ಅಂಟಿಸಿಕೊಂಡ ರೆಕ್ಕೆಗಳ ನೆಚ್ಚಿ
ಹಾರಲಾದೀತೆ ಬಯಲಿನತ್ತ?

ಬಣ್ಣಬಣ್ಣದ ಮಾತುಗಳೆಲ್ಲ
ಮೌನದಲಿ ಕರಗಿ
ಎಲ್ಲ ಖಾಲಿಯಾಗುವ ತನಕ
ಕೇಳಲಾದೀತೆ ಎದೆಯ ಗುಟ್ಟು?

Previous post ಹುಡುಕಾಟ…
ಹುಡುಕಾಟ…
Next post ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ

Related Posts

ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Comments 2

  1. Jyothilingappa
    Aug 9, 2021 Reply

    ಬುದ್ಧಿಯ ಬೇಧ
    ಮನದ ಕಸ… ಆಹಾ!

  2. ಪೇರೂರು ಜಾರು, ಮಂಗಳೂರು
    Aug 14, 2021 Reply

    ಅರಿವು ಮರೆವು
    ಅರಿತೇ ಮರೆಯುವುದು
    ಅರಿಯದೇ ಮರೆಯುವುದು
    ಕೆಲವ ಕುರಿತು ಮರೆಯುವುದು
    ಬಯಲಾಗು ಮರೆಯುವುದು
    ಎಲ್ಲ ಆಟಕ್ಕೂ ಕೊನೆ ತಿಳಿ
    ಅದೇ ಅರಿವು ತಿಳಿಯದೊಡೆ
    ಬಾಳ ಮರೆವು
    ಆಟ ಮುಗಿಯಲೇ ಬೇಕು
    ಮಂಗಳ ಹಾಡಲೇ ಬೇಕು
    (ಮಂಗಳಾ ಬರೆಯಲೂ ಬೇಕು)

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಭವ ರಾಟಾಳ
ಭವ ರಾಟಾಳ
September 10, 2022
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
WHO AM I?
WHO AM I?
June 17, 2020
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
Copyright © 2026 Bayalu