Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವು-ಮರೆವಿನಾಟ
Share:
Poems August 8, 2021 ಕೆ.ಆರ್ ಮಂಗಳಾ

ಅರಿವು-ಮರೆವಿನಾಟ

ನೀನರಿಯೆ ನಾನಾರೆಂದು
ನಾಮರೆತೆ ನೀನಾರೆಂದು
ನನ್ನಲ್ಲೇ ನೀನಿದ್ದರೂ
ನಿನ್ನಿಂದಲೇ ನಾ ಬದುಕಿದ್ದರೂ…
ಇದೇ ಅಲ್ಲವೇ ವಿಸ್ಮಯ?

ನಾ-ನೀನೆಂಬ ಉಭಯವೇ ಇಲ್ಲ
ಭ್ರಮೆಗೆ ಬಲಿಯಾಗದೆ
ತಿಳಿದು ನೋಡೆಂದ ಗುರು-
ನೀನೇ ನಾನೋ, ನಾನೇ ನೀನೋ…
ಮತ್ತೇ ಶುರುವಾಯ್ತು ಗೊಂದಲ.

ನೀನು ನೀನೆಂದು
ಕನವರಿಸುತಿರುವುದೆಲ್ಲ ಬುದ್ಧಿಯ ಬೇಧ
ನಾನು ನಾನು ಎಂದು
ಬಡಬಡಿಸುತಿರುವುದೆಲ್ಲ ಮನದ ಕಸ

ಈ ತಿಪ್ಪೆಯ ಮೇಲೆ ಕೂತು
ಹಿಡಿಯಬಹುದೇ ಸತ್ಯದ ಕೈಯ?
ಅಂಟಿಸಿಕೊಂಡ ರೆಕ್ಕೆಗಳ ನೆಚ್ಚಿ
ಹಾರಲಾದೀತೆ ಬಯಲಿನತ್ತ?

ಬಣ್ಣಬಣ್ಣದ ಮಾತುಗಳೆಲ್ಲ
ಮೌನದಲಿ ಕರಗಿ
ಎಲ್ಲ ಖಾಲಿಯಾಗುವ ತನಕ
ಕೇಳಲಾದೀತೆ ಎದೆಯ ಗುಟ್ಟು?

Previous post ಹುಡುಕಾಟ…
ಹುಡುಕಾಟ…
Next post ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ

Related Posts

ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...
ಮಣ್ಣು ಮೆಟ್ಟಿದ ದಾರಿ
Share:
Poems

ಮಣ್ಣು ಮೆಟ್ಟಿದ ದಾರಿ

October 5, 2021 ಜ್ಯೋತಿಲಿಂಗಪ್ಪ
ಈ ಸಿಟ್ಟು ದ್ವೇಷ ಪ್ರೇಮ ಕಾಮ ಮದ… ಎಲ್ಲಾ ನಾನು ಹೊತ್ತು ಹೋಗುವನೇ… ಈ ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ ಇದೆಲ್ಲಾ ಮಣ್ಣಾಗುವುದು ಇದ್ದೇ ಇದೆ ನಾನು ಮಣ್ಣಾಗುವ...

Comments 2

  1. Jyothilingappa
    Aug 9, 2021 Reply

    ಬುದ್ಧಿಯ ಬೇಧ
    ಮನದ ಕಸ… ಆಹಾ!

  2. ಪೇರೂರು ಜಾರು, ಮಂಗಳೂರು
    Aug 14, 2021 Reply

    ಅರಿವು ಮರೆವು
    ಅರಿತೇ ಮರೆಯುವುದು
    ಅರಿಯದೇ ಮರೆಯುವುದು
    ಕೆಲವ ಕುರಿತು ಮರೆಯುವುದು
    ಬಯಲಾಗು ಮರೆಯುವುದು
    ಎಲ್ಲ ಆಟಕ್ಕೂ ಕೊನೆ ತಿಳಿ
    ಅದೇ ಅರಿವು ತಿಳಿಯದೊಡೆ
    ಬಾಳ ಮರೆವು
    ಆಟ ಮುಗಿಯಲೇ ಬೇಕು
    ಮಂಗಳ ಹಾಡಲೇ ಬೇಕು
    (ಮಂಗಳಾ ಬರೆಯಲೂ ಬೇಕು)

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಗಣಾಚಾರ
ಗಣಾಚಾರ
August 8, 2021
ಮೀನಿನ ಬಯಕೆ
ಮೀನಿನ ಬಯಕೆ
June 10, 2023
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಅಲ್ಲೀ ಸಾಹೇಬರು
ಅಲ್ಲೀ ಸಾಹೇಬರು
February 16, 2026
ನೆಲದ ನಿಧಾನ
ನೆಲದ ನಿಧಾನ
April 29, 2018
Copyright © 2026 Bayalu