Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ…
Share:
Poems August 8, 2021 ಜ್ಯೋತಿಲಿಂಗಪ್ಪ

ಹುಡುಕಾಟ…

ಈ
ಮರವೆ
ಯಾವಾಗ ಬರುತ್ತೋ
ಕಾಯುತಾ ಕುಳಿತಿರುವೆ

ಅಲೆದಾಡಿ ಕಾಲು ಸೋತಿವೆ
ಹುಡುಕಾಡಿ ಕಣ್ಣು ಸೋತಿವೆ

ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ
ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ

ಕೊಟ್ಟಿಗೆಯಲಿ ಕಟ್ಟಿ ಹಾಕಿರುವ
ಎತ್ತಿನ ಹೆಗಲೊಳಗೆ ಸುಕ್ಕುಸುಕ್ಕು
ಪಕ್ಕದ ಹೆಂಡದಂಗಡಿಯ ಹುಳಿ
ವಾಸನೆ ಮರೆಯದೆ ಕಟ್ಟಿದೆ

ಕಾಣುತಿದೆ
ನೀರ ಒಳಗಣ ಚಂದಿರನ ಬಿರುಕು
ಈಗಲೂ…

ಹೋದವರು ಹೋದ ದಾರಿ
ತಿರುಗಿ ಬಾರದ ದಾರಿಯಲಿ
ಕುಳಿತಿರುವೆ

ಹೆಜ್ಜೆ ಗುರುತು ಮರೆಯುವ ಮೊದಲು
ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹೋರಿ
ಹುಡುಕಬೇಕು ಮರೆಯದೆ.

Previous post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
Next post ಅರಿವು-ಮರೆವಿನಾಟ
ಅರಿವು-ಮರೆವಿನಾಟ

Related Posts

ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...
ಸಂಭ್ರಮಿಸುವೆ ಬುದ್ದನಾಗಿ
Share:
Poems

ಸಂಭ್ರಮಿಸುವೆ ಬುದ್ದನಾಗಿ

August 11, 2025 ಜಬೀವುಲ್ಲಾ ಎಂ.ಅಸದ್
ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...

Comments 3

  1. Kavyashree
    Aug 9, 2021 Reply

    ಹೌದು ಸರ್, ನಮ್ಮ ಪಂಚೇಂದ್ರಿಯಗಳೆಲ್ಲಾ ಅರಗಿಸಿಕೊಳ್ಳಲಾಗದ ರುಚಿಯ ಕಂಡಿವೆ- ಕವನ ಬಹಳ ಸೊಗಸಾಗಿದೆ.

  2. Shambhulingaiah
    Aug 14, 2021 Reply

    ತಿರುಗಿ ಬಾರದ ದಾರಿಯಲಿ
    ಕುಳಿತಿರುವೆ- ಮತ್ತೇ ಬಾರದ ದಾರಿಯನ್ನು ಸವೆಸುತ್ತಿದ್ದೇವೆ- ಸುಂದರ, ಅರ್ಥಗರ್ಭಿತ ಕವನ.

  3. Padmalaya
    Aug 21, 2021 Reply

    ಜೋತಿಲಿಂಗಪ್ಪನವರ ಕಾವ್ಯ ಸಂಚಿಕೆಯಲ್ಲಿ ಈ ಕವನ ನನಗೆ ಆಕರ್ಷಣೀಯವಾದದ್ದು.ಏಕೆಂದರೆ..ಅವರ ಕವನ ವಿಧಾನದಲ್ಲಿ ರೂಪಕಗಳು ಕರುಳು ಕೊಯ್ಸಿಕೊಳ್ಳುತ್ತವೆ.ಈ ಕವನದಲ್ಲಿ ತುಂಬಾ ಫಲವತ್ತಾಗಿ ರೂಪಕದ ಬೆಳೆ ತೆಗಯುತ್ತಾರೆ.”ಪಕ್ಕದ ಹೆಂಡದಂಗಡಿಯ ಹುಳಿ ವಾಸನೆ.” “ಅರಗಿಸಲಾರದ ರುಚಿ ಕಂಡಿದೆ ನಾಲಿಗೆ”…ಇಂತಹ ರೂಪಕಗಳು ಅಂತರಂಗದ ಆಳದಲ್ಲಿ ಮಡುಗಟ್ಟಿರುವ ಗಬ್ಬು ಗಲೀಜನ್ನ ಹಂಗಿಲ್ಲದೇ ಪ್ರಶ್ನಿಸುತ್ತವೆ…ಅವರ ಕಾವ್ಯ ಝರಿಗಾಗಿ ಅವರಿಗೊಂದು ಸಲಾಂ…..!!!!!!!!!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
Copyright © 2026 Bayalu