Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ…
Share:
Poems August 8, 2021 ಜ್ಯೋತಿಲಿಂಗಪ್ಪ

ಹುಡುಕಾಟ…

ಈ
ಮರವೆ
ಯಾವಾಗ ಬರುತ್ತೋ
ಕಾಯುತಾ ಕುಳಿತಿರುವೆ

ಅಲೆದಾಡಿ ಕಾಲು ಸೋತಿವೆ
ಹುಡುಕಾಡಿ ಕಣ್ಣು ಸೋತಿವೆ

ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ
ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ

ಕೊಟ್ಟಿಗೆಯಲಿ ಕಟ್ಟಿ ಹಾಕಿರುವ
ಎತ್ತಿನ ಹೆಗಲೊಳಗೆ ಸುಕ್ಕುಸುಕ್ಕು
ಪಕ್ಕದ ಹೆಂಡದಂಗಡಿಯ ಹುಳಿ
ವಾಸನೆ ಮರೆಯದೆ ಕಟ್ಟಿದೆ

ಕಾಣುತಿದೆ
ನೀರ ಒಳಗಣ ಚಂದಿರನ ಬಿರುಕು
ಈಗಲೂ…

ಹೋದವರು ಹೋದ ದಾರಿ
ತಿರುಗಿ ಬಾರದ ದಾರಿಯಲಿ
ಕುಳಿತಿರುವೆ

ಹೆಜ್ಜೆ ಗುರುತು ಮರೆಯುವ ಮೊದಲು
ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹೋರಿ
ಹುಡುಕಬೇಕು ಮರೆಯದೆ.

Previous post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
Next post ಅರಿವು-ಮರೆವಿನಾಟ
ಅರಿವು-ಮರೆವಿನಾಟ

Related Posts

ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Comments 3

  1. Kavyashree
    Aug 9, 2021 Reply

    ಹೌದು ಸರ್, ನಮ್ಮ ಪಂಚೇಂದ್ರಿಯಗಳೆಲ್ಲಾ ಅರಗಿಸಿಕೊಳ್ಳಲಾಗದ ರುಚಿಯ ಕಂಡಿವೆ- ಕವನ ಬಹಳ ಸೊಗಸಾಗಿದೆ.

  2. Shambhulingaiah
    Aug 14, 2021 Reply

    ತಿರುಗಿ ಬಾರದ ದಾರಿಯಲಿ
    ಕುಳಿತಿರುವೆ- ಮತ್ತೇ ಬಾರದ ದಾರಿಯನ್ನು ಸವೆಸುತ್ತಿದ್ದೇವೆ- ಸುಂದರ, ಅರ್ಥಗರ್ಭಿತ ಕವನ.

  3. Padmalaya
    Aug 21, 2021 Reply

    ಜೋತಿಲಿಂಗಪ್ಪನವರ ಕಾವ್ಯ ಸಂಚಿಕೆಯಲ್ಲಿ ಈ ಕವನ ನನಗೆ ಆಕರ್ಷಣೀಯವಾದದ್ದು.ಏಕೆಂದರೆ..ಅವರ ಕವನ ವಿಧಾನದಲ್ಲಿ ರೂಪಕಗಳು ಕರುಳು ಕೊಯ್ಸಿಕೊಳ್ಳುತ್ತವೆ.ಈ ಕವನದಲ್ಲಿ ತುಂಬಾ ಫಲವತ್ತಾಗಿ ರೂಪಕದ ಬೆಳೆ ತೆಗಯುತ್ತಾರೆ.”ಪಕ್ಕದ ಹೆಂಡದಂಗಡಿಯ ಹುಳಿ ವಾಸನೆ.” “ಅರಗಿಸಲಾರದ ರುಚಿ ಕಂಡಿದೆ ನಾಲಿಗೆ”…ಇಂತಹ ರೂಪಕಗಳು ಅಂತರಂಗದ ಆಳದಲ್ಲಿ ಮಡುಗಟ್ಟಿರುವ ಗಬ್ಬು ಗಲೀಜನ್ನ ಹಂಗಿಲ್ಲದೇ ಪ್ರಶ್ನಿಸುತ್ತವೆ…ಅವರ ಕಾವ್ಯ ಝರಿಗಾಗಿ ಅವರಿಗೊಂದು ಸಲಾಂ…..!!!!!!!!!!!

Leave a Reply to Kavyashree Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಸನಾತನ ಧರ್ಮ
ಸನಾತನ ಧರ್ಮ
October 10, 2023
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
Copyright © 2026 Bayalu