Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಂದು-ಇಂದು
Share:
Poems December 8, 2021 ಕೆ.ಆರ್ ಮಂಗಳಾ

ಅಂದು-ಇಂದು

ಅಂದು-
ಹೇಗೋ ಎಂತೋ
ಸುರುಸುರುಳಿಯಾಗಿ
ಬಗೆಬಗೆಯಲಿ ಪರಿಪರಿಯಲಿ
ಸುತ್ತಿಕೊಂಡಿದ್ದು-
ಮೆತ್ತಿಕೊಂಡಿದ್ದು
ಬೆಳೆಯುತ್ತಾ-ಬಲಿಯುತ್ತಾ
ನಂಟಾಗಿ- ಗಂಟಾಗಿ
ಯಮಯಾತನೆಯ ಹೊರೆಯಾಗಿ
ಮುಡಿಯೇರಿ ಭವಭಾರ
ಉಸಿರ ಹಿಸುಕಿತ್ತು.

ಇಂದು-
ಹೊರೆಗಳನು ಇಳುಹುತ್ತಾ
ಗಂಟುಗಳ ಬಿಡಿಸುತ್ತಾ
ಪೊರೆಗಳನು ಕಳಚುತ್ತಾ
ಹಗುರಾಗಿ ನವಿರಾಗಿ
ಸಾಗುತಿದೆ ನಡಿಗೆ
ಕಾಲದೊಂದಿಗೆ ಚಲನೆ…

ಗುರು ಸಿಕ್ಕು ಬೆಳಕಾಗಿ
ಗಮ್ಯತೆಯ ಅರಿವಾಗಿ
ಕೇಳುವ- ಕೆದಕುವ
ಸಂಚಿ ಬರಿದಾಗಿತ್ತು…
ನಿನ್ನೆ ಕಳೆದ ಮೇಲೆ
ನಾಳೆ ಎಂಬುದೂ ಇಲ್ಲ…
ಮಾತು ಮರೆತಾ ‘ನಾನು’
ಮಾತಿಲ್ಲದಾ ನೀನು
ಸಂಧಿಸುವ ಆ ಗಳಿಗೆ
ಬರಬಾರದೇ ಇಂದೇ?

Previous post ಬೆಳಕಲಿ ದೀಪ
ಬೆಳಕಲಿ ದೀಪ
Next post ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ

Related Posts

ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...
ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಅಂದು-ಇಂದು
ಅಂದು-ಇಂದು
December 8, 2021
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಒಳಗಣ ಮರ
ಒಳಗಣ ಮರ
March 12, 2022
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ನಾನು… ನನ್ನದು
ನಾನು… ನನ್ನದು
July 4, 2021
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
Copyright © 2026 Bayalu