Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದಷ್ಟೇ…
Share:
Poems January 10, 2021 ಜ್ಯೋತಿಲಿಂಗಪ್ಪ

ಇದ್ದಷ್ಟೇ…

ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ
ಇರುವಷ್ಟು ಇರುವುದು ಇದ್ದ ಹಾಗೆ ಇರು

ಕನಸು ಇದ್ದಾಗಷ್ಟೇ ಕನಸು ಇರುವುದು
ಎಚ್ಚರಾದರೆ ಕನಸು ಕನವರಿಸುವುದು

ಎಚ್ಚರಾಗು ಉದಯದ ಮೊದಲ ಕಿರಣ ಕಣ್ಣ ತುಂಬಲಿ
ಈಗಷ್ಟೇ ಮುಂಝಾವದ ಕನಸು ಕಳೆದಿದೆ

ಕಳೆದಿರುಳಿನ ನಿರ್ಮೌನ ನಿನ್ನೆ ಕಳೆದಿದೆ
ನೆನಹುಗಳು ಒಂದೊಂದು ತೂರಿ ಬರುವದರಲಿ ತೂರಿ ಬಿಡು
ತೋರುವ ದಾರಿಯಲಿ ಕತ್ತಲೂ ಇದೆ ಬೆಳಕೂ ಇದೆ

ಮೆಟ್ಟಲುಗಳಿಲ್ಲದ ಬಾವಿ ಬಿಂಬ ಕಾಣದು
ಅಪ್ಪುವಿನಿಂದೆದ್ದ ಕೆಂಡದಲಿ ಜ್ಯೊತಿ ಇದೆ

ಬಯಲು ನುಡಿಯಲಾಗದು ಎಂದೇನಲ್ಲ
ಇದೇ ಎಂದು ನುಡಿಯಬಾರದು

ಅಳತೆ ಇಲ್ಲದೆ ಅಳೆಯುವ ಕಣ್ಣು ನನದಲ್ಲ.

Previous post ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
Next post ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ

Related Posts

ಪ್ರೇಮ ಮತ್ತು ದ್ವೇಷ
Share:
Poems

ಪ್ರೇಮ ಮತ್ತು ದ್ವೇಷ

July 10, 2025 ಜಬೀವುಲ್ಲಾ ಎಂ.ಅಸದ್
ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 1

  1. Karthik Mannur
    Jan 14, 2021 Reply

    ಯಾವುದು ಕನಸು, ಯಾವುದು ಎಚ್ಚರ? ಎರಡರಲ್ಲೂ ಜೀವ ಬಳಲುತ್ತದೆ! ಸುಂದರ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಭವ ರಾಟಾಳ
ಭವ ರಾಟಾಳ
September 10, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
Copyright © 2026 Bayalu