Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದಷ್ಟೇ…
Share:
Poems January 10, 2021 ಜ್ಯೋತಿಲಿಂಗಪ್ಪ

ಇದ್ದಷ್ಟೇ…

ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ
ಇರುವಷ್ಟು ಇರುವುದು ಇದ್ದ ಹಾಗೆ ಇರು

ಕನಸು ಇದ್ದಾಗಷ್ಟೇ ಕನಸು ಇರುವುದು
ಎಚ್ಚರಾದರೆ ಕನಸು ಕನವರಿಸುವುದು

ಎಚ್ಚರಾಗು ಉದಯದ ಮೊದಲ ಕಿರಣ ಕಣ್ಣ ತುಂಬಲಿ
ಈಗಷ್ಟೇ ಮುಂಝಾವದ ಕನಸು ಕಳೆದಿದೆ

ಕಳೆದಿರುಳಿನ ನಿರ್ಮೌನ ನಿನ್ನೆ ಕಳೆದಿದೆ
ನೆನಹುಗಳು ಒಂದೊಂದು ತೂರಿ ಬರುವದರಲಿ ತೂರಿ ಬಿಡು
ತೋರುವ ದಾರಿಯಲಿ ಕತ್ತಲೂ ಇದೆ ಬೆಳಕೂ ಇದೆ

ಮೆಟ್ಟಲುಗಳಿಲ್ಲದ ಬಾವಿ ಬಿಂಬ ಕಾಣದು
ಅಪ್ಪುವಿನಿಂದೆದ್ದ ಕೆಂಡದಲಿ ಜ್ಯೊತಿ ಇದೆ

ಬಯಲು ನುಡಿಯಲಾಗದು ಎಂದೇನಲ್ಲ
ಇದೇ ಎಂದು ನುಡಿಯಬಾರದು

ಅಳತೆ ಇಲ್ಲದೆ ಅಳೆಯುವ ಕಣ್ಣು ನನದಲ್ಲ.

Previous post ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
Next post ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಭಾರ
Share:
Poems

ಭಾರ

October 6, 2020 ಕೆ.ಆರ್ ಮಂಗಳಾ
ಕಳೆದು ಹೋದ ದಿನಗಳ ಭಾರ ಉಳಿಸಿಕೊಂಡ ನೆನಪಿನ ಭಾರ ಕಾಣದಿರುವ ಕ್ಷಣಗಳ ಭಾರ ಕಲ್ಪನೆಗಳ ಹೆಣಿಕೆಯ ಭಾರ… ಹೊರಲಾರೆ ತಂದೆ ಈ ತಲೆಭಾರ ಹೊತ್ತು ನಡೆಯಲಾರೆ ಮುಂದೆ… ಹಳಸಿಹೋದ ವಿಷಯದ ಭಾರ...

Comments 1

  1. Karthik Mannur
    Jan 14, 2021 Reply

    ಯಾವುದು ಕನಸು, ಯಾವುದು ಎಚ್ಚರ? ಎರಡರಲ್ಲೂ ಜೀವ ಬಳಲುತ್ತದೆ! ಸುಂದರ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಅನುಭವ ಮಂಟಪ
ಅನುಭವ ಮಂಟಪ
April 11, 2025
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಹಣತೆಯ ಹಂಗು
ಹಣತೆಯ ಹಂಗು
October 19, 2025
Copyright © 2026 Bayalu