Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಜಲ್…
Share:
Poems February 16, 2026 ಜಬೀವುಲ್ಲಾ ಎಂ.ಅಸದ್

ಗಜಲ್…

ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು
ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು

ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ
ನಿನ್ನಲ್ಲಿರುವ ಪ್ರೀತಿಯನೆ ಎಲ್ಲರಿಗೂ ಹಂಚುತ ನೀ ಸಾಗು

ನಿನ್ನದೆಂಬುದು ಏನೂ ಇಲ್ಲ ನೀನೆ ನಶ್ವರ ನೆನಪಿರಲಿ
ಮಮತೆ, ಮಾನವೀಯತೆಯ ಬೀಜ ಬಿತ್ತುತ ನೀ ಸಾಗು

ಜಗವೊಂದು ಬಯಕೆಗಳ ಕಾಡು ಕಳೆದು ಹೋಗದಿರು
ಇರುವುದೆಲ್ಲವ ಕಳೆದು ಖಾಲಿಯಾಗಿ ನಗುತ ನೀ ಸಾಗು

ಸತ್ಯದ ಆಯ್ಕೆ ನಿನ್ನದಾಗಿರಲಿ ಎಂದೆಂದಿಗೂ ಅಸದ್
ಕಣ್ಣಿಗೆ ಕಾಣದ ಸುಳ್ಳಿನ ಬೇಲಿಗಳ ದಾಟುತ ನೀ ಸಾಗು.

Previous post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
Next post ಕುರುಹೇ ಬಯಲು
ಕುರುಹೇ ಬಯಲು

Related Posts

ಬಯಲಾದ ದೇವರು
Share:
Poems

ಬಯಲಾದ ದೇವರು

January 15, 2026 ಜ್ಯೋತಿಲಿಂಗಪ್ಪ
ಈ ದೇವರು ಒಂದು ಕನಸು ನಿಜವೂ ಅಹುದು ಸುಳ್ಳೂ ಅಹುದು ಕಲ್ಪನೆಯ ಹಾಗೆ ಕಾಣುವುದು ಕಾಣದು ನಂಬಿದರೆ ಕೇಡಿಲ್ಲ ನಂಬದಿರಲೂ ಕೇಡಿಲ್ಲ ಕೇಡೆಲ್ಲವೂ ನನ್ನವು ಈ ಸುಳ್ಳಿಗೊಂದು ಕಾಣಿಸಲಾರೆ...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 1

  1. ನಿರಂಜನ ಶಿರಗುಪ್ಪ
    Feb 22, 2026 Reply

    ನಮ್ಮೊಳಗೇ ನಾವು ಹೇಳಿಕೊಳ್ಳುವ ಇಂತಹ ಮಾತುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ನಿಮ್ಮ ಕವನಗಳ ಆಶಯ ಬಹಳ ವಿಸ್ತರವಾಗಿದ್ದು, ಮಾನವತೆಯ ಜೇನು ಜಿನುಗುತ್ತಿರುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ನಾನು  ಬಿಂಬ
ನಾನು ಬಿಂಬ
September 13, 2025
ದಾಸೋಹ ತತ್ವ
ದಾಸೋಹ ತತ್ವ
January 10, 2021
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಅಂದು-ಇಂದು
ಅಂದು-ಇಂದು
December 8, 2021
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
Copyright © 2026 Bayalu