Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುಪಥ
Share:
Poems January 4, 2020 ಕೆ.ಆರ್ ಮಂಗಳಾ

ಗುರುಪಥ

ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು
ಕಂಡಕಂಡವರನ್ನೆಲ್ಲ ಕೇಳಿ
ಓದುಬಲ್ಲವರನ್ನೆಲ್ಲ ಹುಡುಕಿ
ಸುಸ್ತಾದದ್ದೆ ಬಂತು,
ದಾರಿ ಸಿಗಲಿಲ್ಲ

ಹೇಳುವದನ್ನೆಲ್ಲ ಹಿಡಿದು
ಓದಿದುದನ್ನೆಲ್ಲ ನಂಬಿ
ಕೇಳಿ ಅರಿತದ್ದೆ ನಿಜವೆಂದು
ಇಲ್ಲೇನೋ ಇದೆ, ಅಲ್ಲೇನೋ ಇದೆ
ಎಂದು ಅಡಿಗಡಿಗೆ ಕನವರಿಸಿದ್ದೆ ಬಂತು,
ದಾರಿ ಸಿಗಲಿಲ್ಲ.

ಬೆಳಕಿನ ಭ್ರಮೆ ಹೊತ್ತು
ಯೋಗದ ಹಠ ಹಿಡಿದು
ಹಗಲು ರಾತ್ರಿಗಳ ಪರವೆಯಿಲ್ಲದೆ
ಎಚ್ಚರಾದಾಗೆಲ್ಲ ಎದ್ದು ಕುಳಿತು
ಕಣ್ಮುಚ್ಚಿ ಕಣ್ತೆರೆದು ಹುಡುಕಿದ್ದೆ ಬಂತು,
ದಾರಿ ಸಿಗಲಿಲ್ಲ.

ವಚನ ವ್ಯಾಖ್ಯಾನಗಳಲಿ
ಭಾವಾರ್ಥಗಳ ಬೆಂಬತ್ತಿ
ಹುಡುಕಿದ್ದೆ ತಡಕಿದ್ದೆ ದಣಿದಿದ್ದೆ
ಮಾತು ಮಾತು ಮಥಿಸಿ
ವಾದ ವಿವಾದಗಳ ದೂಳೆದ್ದಿತೇ ವಿನಃ,
ದಾರಿ ಸಿಗಲಿಲ್ಲ.

ನೀನೇನೇ ಬಯಸಿದೊಡೆ ಅದ ಸಾಧಿಸಲು
ಬ್ರಹ್ಮಾಂಡವೇ ನಿನಗೆ ನೆರವಾಗಲು ಸಂಚುಹೂಡುವುದೆಂಬ
ಪಾಲೊ ಕೊಯಿಲೊ ಮಾತು
ನಿಜವಾಗೋ ಕಾಲ ಈಗ ಬಂದಿತ್ತು
ಗೊತ್ತಿರದ ಮೂಲೆಯ ಮಂದಬೆಳಕಿನಲಿ
ಗುರುಪಥ ಕಂಡಿತ್ತು, ಎದೆ ಹಗುರವಾಗಿತ್ತು
ಮಹದಾರಿ ಸಿಕ್ಕಿತ್ತು.

Previous post ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
Next post ತನ್ನ ಪರಿ ಬೇರೆ…
ತನ್ನ ಪರಿ ಬೇರೆ…

Related Posts

ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...
ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...

Comments 2

  1. Jyothilingappa
    Jan 6, 2020 Reply

    ಕಂಡ
    ಗುರು ಪಥ
    ದಲಿ ದಾರಿ ಸಿಕ್ಕಿತೇ ಹೇಳಿ
    ನಿಜ
    ದಾರಿ ಆವುದು ‘ಬಯಲು’ವಿಗೆ.

  2. Madhukar Bannuru
    Jan 16, 2020 Reply

    ಅಕ್ಕಾ, ನಿಮಗೆ ಸಿಕ್ಕ ಗುರುಪಥ ಯಾವುದು? ನಮಗೂ ತೋರಿಸಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಗಜಲ್…
ಗಜಲ್…
February 16, 2026
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
Copyright © 2026 Bayalu