Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
…ಬಯಲನೆ ಬಿತ್ತಿ
Share:
Poems August 11, 2025 ಜ್ಯೋತಿಲಿಂಗಪ್ಪ

…ಬಯಲನೆ ಬಿತ್ತಿ

ಅಲ್ಲಿ
ನೇತಾಡುವ
ಪಟಗಳೆಲ್ಲಾ ನಿನ್ನೆಯವು
ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ

ಕಣ್ಣೊಳಗಣ ರೂಹು ಕಣ್ಣ ಕೊಲ್ಲದು
ಕಂಗಳ ಮರೆಯ ಕತ್ತಲಿಗೆ
ಕಂಗಳೇ ಪ್ರಮಾಣ

ಪದದ ಅರ್ಥ ಬಿಟ್ಟು
ಕೊಡದ ಗುಟ್ಟು

ನಿಂದರೆ ನೆಳಲಿಲ್ಲ
ನಡೆದರೆ ಹೆಜ್ಜೆಯಿಲ್ಲ

ಊರಿಂದ ಹೋದವರು
ದೂರದ ಸುದ್ದಿ ಹೇಳರು

ಮರವೇ ಬಿದ್ದು ಒಣಗಿತು
ನೆಳಲು
ಇನ್ನೇನು ಇಲ್ಲ

ನೆಲಕ್ಕೆ ಬಿದ್ದ ಹಣ್ಣು
ಮಣ್ಣಾಗುವುದ ಕಾಯುತ್ತಾ ಇದೆ ಬೀಜ.

Previous post ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
Next post ಪೊರೆವ ದನಿ…
ಪೊರೆವ ದನಿ…

Related Posts

ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...
ಗುಟುಕು ಆಸೆ…
Share:
Poems

ಗುಟುಕು ಆಸೆ…

May 8, 2024 ಜ್ಯೋತಿಲಿಂಗಪ್ಪ
ಕಣ್ಣ ಮುಂದಣ ಬೆಳಕು ಹಿಂದಣ ನೆರಳು ಕಂಡೂ ಕಾಣವು ಈ ಕಣ್ಣಿಗೆ ನಾಚಿಕೆಯೇ ಸದ್ದು ಕಾಣಲು ಹವಣಿಸುವುದು ಸದ್ದು ಕಾಣುವುದೇ..ಕೇಳಿಸಿಕೋ ಗಗನಕ್ಕೆ ಬಯಲುಂಟೇ ಬಯಲಿಗೆ ಗಗನ ಉಂಟೇ ರಗುತದ...

Comments 1

  1. ಡಾ.ಉಮೇಶ ಸೊರಬ
    Aug 13, 2025 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ” ಬಯಲನೆ ಬಿತ್ತಿ ” , ಕಾಲದ ಪರಿಧಿಯಾಚೆ ನಿಂತ ಜಾಗೃತ ಮನಸ್ಸೊಂದು ‘ ಬಯಲು ‘ ಜಿಜ್ಞಾಸೆ ಗೆ ಆತುಕೊಂಡು ಮನುಷ್ಯ ಸಂಬಂಧಗಳ ಅರ್ಥವನ್ನು ವ್ಯಾಖ್ಯಾನಿಸುವ ಅಪರೂಪದ ಕವಿತೆಯಾಗಿ ಮೂಡಿಬಂದಿದೆ.ಕವಿಯ ಅರಿವು ಮತ್ತು ಅನುಭವಗಳು ಕವಿತೆಯ ಆಶಯವನ್ನು ವಿಶೇಷ ರೂಪಕಗಳ ಮೂಲಕ ಹೃದ್ಯಗೊಳಿಸುವ ಕುಶಲಕಾರ್ಯ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.’ ಪದದ ಅರ್ಥವನ್ನು ಬಿಟ್ಟುಕೊಡದ ಗುಟ್ಟ’ ನು ಬಯಲುಮಾಡ ಹೊರಡುವ ಸಹೃದಯರಿಗೆ ಈ ಕವಿತೆ ಒಂದು ಕೌತುಕದ ಸವಾಲೇ ಆಗಿದೆ…..
    ಕವಿಗೆ ಅಭಿನಂದನೆಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
ದಾಸೋಹ ತತ್ವ
ದಾಸೋಹ ತತ್ವ
January 10, 2021
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
Copyright © 2026 Bayalu