Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವರದಿ ಕೊಡಬೇಕಿದೆ
Share:
Poems March 17, 2021 ಕೆ.ಆರ್ ಮಂಗಳಾ

ವರದಿ ಕೊಡಬೇಕಿದೆ

ತನುವ ಭೇದಿಸಿ, ಮನವ ಶೋಧಿಸಿ
ವರದಿ ಕೊಡಲು ಅಟ್ಟಿದ್ದಾನೆ ಗುರು
ನನ್ನೊಳಗೆ ನನ್ನ…

ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ
ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ
ಎಲ್ಲೋ ಓದಿದ್ದನ್ನು, ಯಾರೋ ಹೇಳಿದ್ದನ್ನು
ನಕಲು ಮಾಡಿ ಒಪ್ಪಿಸುವಂತೆಯೂ ಇಲ್ಲ…
ಆಸೆಗಳ ಮೊಗೆತ, ಭಾವಗಳ ರಭಸ
ಕಲ್ಪಿತಗಳ ನೆಗೆತ, ವಿಚಾರಗಳ ಓಟ
ಏನ ಹಿಡಿಯಲಿ, ಎಲ್ಲಿ ಕೆದಕಲಿ?
ಪಾಚಿ ಇದೆ, ಸೆಳೆತ ಇದೆ
ಮರೆವಿನ ಜಾಲಗಳಿವೆ, ಅಪರಿಚಿತ ಜಾಗಗಳಿವೆ
ದಾರಿ ತಪ್ಪಿಸುವ ಕತ್ತಲಿದೆ…

ಹೊರ ಸುದ್ದಿಗಳನು ವರದಿ ಮಾಡಿ
ಅಭ್ಯಾಸವಾದವಳಿಗೆ
ಮನವ ನೋಡುವುದು,
ಅಂತರಂಗದ ಸಮಾಚಾರ ಬರೆವುದು
ಇಷ್ಟು ಸವಾಲಿನದೆಂದು ತಿಳಿದಿರಲೇ ಇಲ್ಲ…
ಕಂಗಾಲಾಗಿ ಕೂರುವಂತಿಲ್ಲ
ಗಡುವು ಮೀರುವಂತಿಲ್ಲ
ಗುರು ಕೊಟ್ಟ ಕಂದೀಲು ಹಿಡಿದು
ಒಳಗಡಿ ಇಟ್ಟಾಗಿದೆ…
ಒಂದೊಂದನೆ ಎತ್ತಿ, ಬಗೆಬಗೆದು ನೋಡಿ
ಹಿಂದು-ಮುಂದಿನ ತಂತುಗಳ ಹುಡುಕಿ
ವರದಿ ಕೊಡಬೇಕಿದೆ ಗುರುವಿಗೆ ವರದಿ ಕೊಡಬೇಕಿದೆ…

Previous post ಬಯಲಾಟ
ಬಯಲಾಟ
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ನಾನೆಂಬ ನಿನಾದ…
Share:
Poems

ನಾನೆಂಬ ನಿನಾದ…

January 15, 2026 ಕೆ.ಆರ್ ಮಂಗಳಾ
ನಾ ಹುಟ್ಟುವ ಮುನ್ನ ಹೇಗಿದ್ದೆ ನೆನಪಿಲ್ಲಾ ಹುಟ್ಟಿನೊಡನೆ ಬಂದ ಬಳುವಳಿಯೇ ನಾನೆಂಬ ಎಳೆ ಈ ಅಹಮಿಕೆಗೆ ಪ್ರಾಣ ಒತ್ತೆಯಿಟ್ಟು ಎಷ್ಟು ಯುಗಗಳಾದವು? ಒಂದೆಳೆ ಇದ್ದುದು ಒತ್ತೊತ್ತಾಗಿ...
ಕಾಲ ಎಲ್ಲಿದೆ?
Share:
Poems

ಕಾಲ ಎಲ್ಲಿದೆ?

January 7, 2022 ಕೆ.ಆರ್ ಮಂಗಳಾ
ಎಲ್ಲವನೂ… ಎಲ್ಲರನೂ… ಮಣಿಸುತಾ, ಬಾಗಿಸುತಾ ಕಾಣಿಸುತಾ, ಕಣ್ಮರೆಯಾಗಿಸುತಾ ತಾನೇ ಅಂತಿಮವೆನುವ ಮಾಯಾವಿ ಕಾಲಕ್ಕೆ ಇದೆಯೇ ಅಸ್ತಿತ್ವ? ಉರುಳುರುಳಿ ಹೊರಳುತಿಹ ಭುವಿಯ ಚಲನೆಯಲಿ ನಮ್ಮ...

Comments 1

  1. Vinay Bengaluru
    Mar 20, 2021 Reply

    ಯಾವ ಗುರುವಿಗೆ ವರದಿ ಕೊಡಬೇಕು ಅಕ್ಕಾ? ಹಾಗೆ ವರದಿ ಕೇಳಿದ ಗುರು ಯಾರು?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಡೆಯ ಎಡೆ…
ನಡೆಯ ಎಡೆ…
April 5, 2026
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ಭವ ರಾಟಾಳ
ಭವ ರಾಟಾಳ
September 10, 2022
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
Copyright © 2026 Bayalu