Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವರದಿ ಕೊಡಬೇಕಿದೆ
Share:
Poems March 17, 2021 ಕೆ.ಆರ್ ಮಂಗಳಾ

ವರದಿ ಕೊಡಬೇಕಿದೆ

ತನುವ ಭೇದಿಸಿ, ಮನವ ಶೋಧಿಸಿ
ವರದಿ ಕೊಡಲು ಅಟ್ಟಿದ್ದಾನೆ ಗುರು
ನನ್ನೊಳಗೆ ನನ್ನ…

ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ
ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ
ಎಲ್ಲೋ ಓದಿದ್ದನ್ನು, ಯಾರೋ ಹೇಳಿದ್ದನ್ನು
ನಕಲು ಮಾಡಿ ಒಪ್ಪಿಸುವಂತೆಯೂ ಇಲ್ಲ…
ಆಸೆಗಳ ಮೊಗೆತ, ಭಾವಗಳ ರಭಸ
ಕಲ್ಪಿತಗಳ ನೆಗೆತ, ವಿಚಾರಗಳ ಓಟ
ಏನ ಹಿಡಿಯಲಿ, ಎಲ್ಲಿ ಕೆದಕಲಿ?
ಪಾಚಿ ಇದೆ, ಸೆಳೆತ ಇದೆ
ಮರೆವಿನ ಜಾಲಗಳಿವೆ, ಅಪರಿಚಿತ ಜಾಗಗಳಿವೆ
ದಾರಿ ತಪ್ಪಿಸುವ ಕತ್ತಲಿದೆ…

ಹೊರ ಸುದ್ದಿಗಳನು ವರದಿ ಮಾಡಿ
ಅಭ್ಯಾಸವಾದವಳಿಗೆ
ಮನವ ನೋಡುವುದು,
ಅಂತರಂಗದ ಸಮಾಚಾರ ಬರೆವುದು
ಇಷ್ಟು ಸವಾಲಿನದೆಂದು ತಿಳಿದಿರಲೇ ಇಲ್ಲ…
ಕಂಗಾಲಾಗಿ ಕೂರುವಂತಿಲ್ಲ
ಗಡುವು ಮೀರುವಂತಿಲ್ಲ
ಗುರು ಕೊಟ್ಟ ಕಂದೀಲು ಹಿಡಿದು
ಒಳಗಡಿ ಇಟ್ಟಾಗಿದೆ…
ಒಂದೊಂದನೆ ಎತ್ತಿ, ಬಗೆಬಗೆದು ನೋಡಿ
ಹಿಂದು-ಮುಂದಿನ ತಂತುಗಳ ಹುಡುಕಿ
ವರದಿ ಕೊಡಬೇಕಿದೆ ಗುರುವಿಗೆ ವರದಿ ಕೊಡಬೇಕಿದೆ…

Previous post ಬಯಲಾಟ
ಬಯಲಾಟ
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 1

  1. Vinay Bengaluru
    Mar 20, 2021 Reply

    ಯಾವ ಗುರುವಿಗೆ ವರದಿ ಕೊಡಬೇಕು ಅಕ್ಕಾ? ಹಾಗೆ ವರದಿ ಕೇಳಿದ ಗುರು ಯಾರು?

Leave a Reply to Vinay Bengaluru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
Copyright © 2025 Bayalu