Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೆರೆ ಎಳೆಯದೆ…
Share:
Poems October 13, 2022 ಜ್ಯೋತಿಲಿಂಗಪ್ಪ

ಗೆರೆ ಎಳೆಯದೆ…

ನೀನು
ಕೂಗುವ ತನಕ
ನನ್ನ
ಕಿವಿಯಲಿ ಸದ್ದಿರಲಿಲ್ಲ

ನನ್ನ
ಸದ್ದಲಿ ನಿನ್ನ ಕಿವಿಯು
ತೆರೆಯಲಿಲ್ಲ

ನನ್ನ ನಿನ್ನ ಪ್ರತಿಷ್ಠೆ
ಕಣ್ಣಲಿ ಬೆಳಕಾಗಲಿಲ್ಲ

ಈ
ಗಾಯಕೆ ಮುಲಾಮು
ನಿನ್ನಿಂದ ದೂರವಾಗುವುದು

ಬಿಸಿಲಿಗೆ ಮೋಡವೂ ಬೆವರುವುದು

ಕಣ್ಣಲಿ ನೋಡಿದು ಕಣ್ಣಲಿ ಕಾಣಲಿಲ್ಲ
ಕಣ್ಣಲಿ ಕಂಡುದು ಕಣ್ಣು ನೋಡಲಿಲ್ಲ

ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ

ಕೇಳಿದಷ್ಟು ಶಬ್ದದ ಉಲಿ
ನೋಡಿದಷ್ಟೂ ಕಣ್ಣ ಸುಳಿ

ಕಣ್ಣು ತುಂಬಿದೆ ನೋಡೆ
ಕಿವಿ ತುಂಬಿದೆ ಕೇಳೆ

ನಾನು ಓಡಿದಷ್ಟೂ ನೀನೂ ಓಡುವೆಯಾ…

ಗೆರೆ ಎಳೆಯದೆ ಆಚೆ ಈಚೆ ಎಂಬುದಿಲ್ಲ.

Previous post ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
Next post ಅರಿವಿನ ಬಾಗಿಲು…
ಅರಿವಿನ ಬಾಗಿಲು…

Related Posts

ಬೆಂಕಿಯೊಳಗಣ ಬೆಳಕು
Share:
Poems

ಬೆಂಕಿಯೊಳಗಣ ಬೆಳಕು

June 12, 2025 ಜ್ಯೋತಿಲಿಂಗಪ್ಪ
ನಿಜದ ಮುಖವ ಬಲ್ಲೆಯಾ ಅವರ ಮುಖವ ಇವರು ನೋಡುವುದು ಇವರ ಮುಖವ ಅವರು ನೋಡುವುದು ಅವರವರ ಮುಖವ ಅವರರಿಯರು ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ ಹನಿ ಹನಿ ಹರಿದು ಹಳ್ಳ ಹಳ್ಳ ಹಳ್ಳ...
ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...

Comments 2

  1. L.S. Patil
    Oct 18, 2022 Reply

    ಪರಿಚಿತ ಬೆಳಕಿಗೆ ಅಪರಿಚಿತ ನೆರಳು
    ನೆರಳೂ ಅದೇ ಬೆಳಕೂ ಅದೇ…
    ಜೋಡು ಸಾಲುಗಳ ಕವನದ ಆಂತರ್ಯ ಗೆರೆ ಎಳೆಯುತ್ತಿರುವ ಮನುಷ್ಯನ ಪ್ರವೃತ್ತಿಯನ್ನು ಅಣಕಿಸುವಂತಿದೆ.

  2. Chaitanya Indudhar
    Oct 18, 2022 Reply

    ಗೆರೆ ಎಳೆದು ವೈವಿಧ್ಯತೆಗೆ ತೆರೆದುಕೊಳ್ಳಬೇಕೋ, ಗೆರೆ ಅಳಿಸಿ ಸಾಮರಸ್ಯ ಸಾಧಿಸಬೇಕೋ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭವ ರಾಟಾಳ
ಭವ ರಾಟಾಳ
September 10, 2022
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಶರಣನಾಗುವುದು…
ಶರಣನಾಗುವುದು…
February 10, 2023
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
Copyright © 2026 Bayalu