Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೆರೆ ಎಳೆಯದೆ…
Share:
Poems October 13, 2022 ಜ್ಯೋತಿಲಿಂಗಪ್ಪ

ಗೆರೆ ಎಳೆಯದೆ…

ನೀನು
ಕೂಗುವ ತನಕ
ನನ್ನ
ಕಿವಿಯಲಿ ಸದ್ದಿರಲಿಲ್ಲ

ನನ್ನ
ಸದ್ದಲಿ ನಿನ್ನ ಕಿವಿಯು
ತೆರೆಯಲಿಲ್ಲ

ನನ್ನ ನಿನ್ನ ಪ್ರತಿಷ್ಠೆ
ಕಣ್ಣಲಿ ಬೆಳಕಾಗಲಿಲ್ಲ

ಈ
ಗಾಯಕೆ ಮುಲಾಮು
ನಿನ್ನಿಂದ ದೂರವಾಗುವುದು

ಬಿಸಿಲಿಗೆ ಮೋಡವೂ ಬೆವರುವುದು

ಕಣ್ಣಲಿ ನೋಡಿದು ಕಣ್ಣಲಿ ಕಾಣಲಿಲ್ಲ
ಕಣ್ಣಲಿ ಕಂಡುದು ಕಣ್ಣು ನೋಡಲಿಲ್ಲ

ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ

ಕೇಳಿದಷ್ಟು ಶಬ್ದದ ಉಲಿ
ನೋಡಿದಷ್ಟೂ ಕಣ್ಣ ಸುಳಿ

ಕಣ್ಣು ತುಂಬಿದೆ ನೋಡೆ
ಕಿವಿ ತುಂಬಿದೆ ಕೇಳೆ

ನಾನು ಓಡಿದಷ್ಟೂ ನೀನೂ ಓಡುವೆಯಾ…

ಗೆರೆ ಎಳೆಯದೆ ಆಚೆ ಈಚೆ ಎಂಬುದಿಲ್ಲ.

Previous post ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
Next post ಅರಿವಿನ ಬಾಗಿಲು…
ಅರಿವಿನ ಬಾಗಿಲು…

Related Posts

ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...
ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...

Comments 2

  1. L.S. Patil
    Oct 18, 2022 Reply

    ಪರಿಚಿತ ಬೆಳಕಿಗೆ ಅಪರಿಚಿತ ನೆರಳು
    ನೆರಳೂ ಅದೇ ಬೆಳಕೂ ಅದೇ…
    ಜೋಡು ಸಾಲುಗಳ ಕವನದ ಆಂತರ್ಯ ಗೆರೆ ಎಳೆಯುತ್ತಿರುವ ಮನುಷ್ಯನ ಪ್ರವೃತ್ತಿಯನ್ನು ಅಣಕಿಸುವಂತಿದೆ.

  2. Chaitanya Indudhar
    Oct 18, 2022 Reply

    ಗೆರೆ ಎಳೆದು ವೈವಿಧ್ಯತೆಗೆ ತೆರೆದುಕೊಳ್ಳಬೇಕೋ, ಗೆರೆ ಅಳಿಸಿ ಸಾಮರಸ್ಯ ಸಾಧಿಸಬೇಕೋ?

Leave a Reply to Chaitanya Indudhar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
Copyright © 2025 Bayalu