Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿನ ಬಾಗಿಲು…
Share:
Poems October 13, 2022 ಕೆ.ಆರ್ ಮಂಗಳಾ

ಅರಿವಿನ ಬಾಗಿಲು…

ಹುಚ್ಚು ಮನಸಿನ ಕುಣಿತ
ದಿಕ್ಕುದಿಕ್ಕಿಗೂ ಸೆಳೆತ
ಅಡಿಗಡಿಗು ಎಡತಾಕುವ
ವಿಷಯಗಳ ಡೈನಮೈಟು
ಕಾಲು ಎಚ್ಚರ ತಪ್ಪದಂತೆ
ಜಾಣ ನಡಿಗೆಯ ಹೇಳಿಕೊಡುತಾನೆ
ಹುಟ್ಟು-ಸಾವಿನ ಚಕ್ರದ ಮರ್ಮ ತೋರುತಾನೆ

ಭಾವ ಜಾಲಗಳ ಹೆಣಿಗೆ
ಚಿತ್ತ ಭ್ರಾಂತಿಯ ಮೆರವಣಿಗೆ
ಪಂಚೇಂದ್ರಿಯಗಳ ಉರವಣೆ
ಮುಗಿಯಲಾರದ ಬವಣೆ
ಉಸಿರುಸಿಕ್ಕು ಚಡಪಡಿಸುವಾಗ
ಬಲೆ ಕತ್ತರಿಸುವ ಕಲೆಯ ಕಲಿಸುತಾನೆ
ಮತ್ತೆ ಅದ ಕಟ್ಟದಾ ತಂತ್ರ ತಿಳಿಸುತಾನೆ

ಬಾಳ ಕದಳಿಯಲಿ
ಬಸವಳಿದು ಕುಸಿದಾಗ
ದಿಕ್ಕುಗಾಣದೆ ಕಂಗೆಟ್ಟು ಅಲೆವಾಗ
ಮಮ್ಮಲ ಮರುಗುತಾನೆ
ಮಮತೆಯಲಿ ಕೈಹಿಡಿದು
ಪಯಣದ ನಿಜವ ಅರುಹುತಾನೆ
ಮತ್ತೆ ದಾರಿತಪ್ಪದ ಗುಟ್ಟು ಕಲಿಸುತಾನೆ

ನಿನ್ನ ನೀತಿಳಿಯೆಂದು
ಅರಿವಿನ ಕಂದೀಲ ಕೈಗಿಕ್ಕಿ
ಅಂತರಂಗದ ಪಯಣಕೆ
ಮನವ ಸಿದ್ಧಗೊಳಿಸುತಾನೆ
ಭವದ ಬೆಂಗುಡಿಯ ಬಿಡಿಸಿ
ಭಕ್ತಿಯ ಮರ್ಮವನು ಅಂಗೈಗೆ ಇಡುತಾನೆ
ನಿಜಮುಕ್ತಿಯ ಮಾರ್ಗವನು ತೋರುತಾನೆ

ತಿದ್ದಿ ತೀಡಿ ಬೆಳೆಸುತಾನೆ
ಝುಂಕಿಸಿ ಮನವ ಚುಚ್ಚುತಾನೆ
ಕದ್ದು ನಡೆದರೆ ಗುದ್ದುತಾನೆ
ಸುಳ್ಳು ನುಡಿಯಲು ಕೆರಳುತಾನೆ
ಸೋಗು ಮುಖಗಳ ಕೆಡವುತಾನೆ
ಬೀಳದಂತೆ ಎಚ್ಚರಿಸುತಾನೆ
ಬಿದ್ದಾಗಲೆಲ್ಲಾ ಎತ್ತುತಾನೆ

ಬೈದು ಬುದ್ಧಿ ಹೇಳುತಾನೆ
ನನ್ನ ಮೋಸ ನನಗೆ ತೋರುತಾನೆ
ಕಂಗಳ ಕರುಳ ಕತ್ತರಿಸುತಾನೆ
ಮನದ ತಿರುಳ ಹುರಿಯುತಾನೆ
ಮಾತಿನ ಮೂಲಕೆ ಒಯ್ಯುತಾನೆ
ಅರಿವಿನ ನೆಲೆಯತ್ತ ನಡೆಸುತಾನೆ
ನನ್ನ ಒಳಗನು ನನಗೆ ಪರಿಚಯಿಸುತಾನೆ

ನನ್ನ ನನಗೊಪ್ಪಿಸಲು
ಗುರು ತೆರೆಯದ ಕಿಟಕಿಗಳಿಲ್ಲ…
ತೋರದ ದಾರಿಗಳಿಲ್ಲ…
ಹೇಳದ ಗುಟ್ಟುಗಳಿಲ್ಲ…
ಸತ್ಯದ ದಾರಿ ತೋರಿದ
ಎನ್ನ ಭಾಗ್ಯದ ಬಾಗಿಲು ನೀ
ಶರಣು ಗುರುವೇ ನಿನಗೆ ಶರಣು ಶರಣು.

Previous post ಗೆರೆ ಎಳೆಯದೆ…
ಗೆರೆ ಎಳೆಯದೆ…
Next post ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ನನ್ನೆದುರು ನಾ…
Share:
Poems

ನನ್ನೆದುರು ನಾ…

March 6, 2024 ಕೆ.ಆರ್ ಮಂಗಳಾ
ಅದೇಕೋ ಮೊನ್ನೆ ಮೊನ್ನೆ ಸಂತೆ ತೋರುವೆ, ಜಾತ್ರೆ ನೋಡುವೆ ನಡಿ ನನ್ನೊಡನೆ ಎಂದ ಗುರು ಹಿಗ್ಗಿನಲಿ, ಗೆಲುವಿನಲಿ ಚೆಂದದ ಸಿಂಗಾರದಲಿ ಹೊರಟಿತ್ತು ನನ್ನ ಮೆರವಣಿಗೆ ಸಂಭ್ರಮವೇನು,...

Comments 3

  1. ಶರಣ್ ಸ್ವಾಮಿ ಮಠಪತಿ
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  2. Sharan swami
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  3. ಪೆರೂರು ಜಾರು, ಉಡುಪಿ
    Oct 20, 2022 Reply

    ಗುರು ಅರಿವಿನ ಬಾಗಿಲಾದರೆ ಓಕೆ; ಗರುವದ ಬಾಗಿಲಾದರೆ ಜೋಕೆ; ಈಗಿನ ಗುರುಗಳನ್ನು ಕಾಣುವಾಗ ಹೊರಗೆ ಒಳಗೆ ಬರಿ ಬಯಕೆ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಗುರುವಂದನೆ
ಗುರುವಂದನೆ
October 13, 2022
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
Copyright © 2026 Bayalu