Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿನ ಬಾಗಿಲು…
Share:
Poems October 13, 2022 ಕೆ.ಆರ್ ಮಂಗಳಾ

ಅರಿವಿನ ಬಾಗಿಲು…

ಹುಚ್ಚು ಮನಸಿನ ಕುಣಿತ
ದಿಕ್ಕುದಿಕ್ಕಿಗೂ ಸೆಳೆತ
ಅಡಿಗಡಿಗು ಎಡತಾಕುವ
ವಿಷಯಗಳ ಡೈನಮೈಟು
ಕಾಲು ಎಚ್ಚರ ತಪ್ಪದಂತೆ
ಜಾಣ ನಡಿಗೆಯ ಹೇಳಿಕೊಡುತಾನೆ
ಹುಟ್ಟು-ಸಾವಿನ ಚಕ್ರದ ಮರ್ಮ ತೋರುತಾನೆ

ಭಾವ ಜಾಲಗಳ ಹೆಣಿಗೆ
ಚಿತ್ತ ಭ್ರಾಂತಿಯ ಮೆರವಣಿಗೆ
ಪಂಚೇಂದ್ರಿಯಗಳ ಉರವಣೆ
ಮುಗಿಯಲಾರದ ಬವಣೆ
ಉಸಿರುಸಿಕ್ಕು ಚಡಪಡಿಸುವಾಗ
ಬಲೆ ಕತ್ತರಿಸುವ ಕಲೆಯ ಕಲಿಸುತಾನೆ
ಮತ್ತೆ ಅದ ಕಟ್ಟದಾ ತಂತ್ರ ತಿಳಿಸುತಾನೆ

ಬಾಳ ಕದಳಿಯಲಿ
ಬಸವಳಿದು ಕುಸಿದಾಗ
ದಿಕ್ಕುಗಾಣದೆ ಕಂಗೆಟ್ಟು ಅಲೆವಾಗ
ಮಮ್ಮಲ ಮರುಗುತಾನೆ
ಮಮತೆಯಲಿ ಕೈಹಿಡಿದು
ಪಯಣದ ನಿಜವ ಅರುಹುತಾನೆ
ಮತ್ತೆ ದಾರಿತಪ್ಪದ ಗುಟ್ಟು ಕಲಿಸುತಾನೆ

ನಿನ್ನ ನೀತಿಳಿಯೆಂದು
ಅರಿವಿನ ಕಂದೀಲ ಕೈಗಿಕ್ಕಿ
ಅಂತರಂಗದ ಪಯಣಕೆ
ಮನವ ಸಿದ್ಧಗೊಳಿಸುತಾನೆ
ಭವದ ಬೆಂಗುಡಿಯ ಬಿಡಿಸಿ
ಭಕ್ತಿಯ ಮರ್ಮವನು ಅಂಗೈಗೆ ಇಡುತಾನೆ
ನಿಜಮುಕ್ತಿಯ ಮಾರ್ಗವನು ತೋರುತಾನೆ

ತಿದ್ದಿ ತೀಡಿ ಬೆಳೆಸುತಾನೆ
ಝುಂಕಿಸಿ ಮನವ ಚುಚ್ಚುತಾನೆ
ಕದ್ದು ನಡೆದರೆ ಗುದ್ದುತಾನೆ
ಸುಳ್ಳು ನುಡಿಯಲು ಕೆರಳುತಾನೆ
ಸೋಗು ಮುಖಗಳ ಕೆಡವುತಾನೆ
ಬೀಳದಂತೆ ಎಚ್ಚರಿಸುತಾನೆ
ಬಿದ್ದಾಗಲೆಲ್ಲಾ ಎತ್ತುತಾನೆ

ಬೈದು ಬುದ್ಧಿ ಹೇಳುತಾನೆ
ನನ್ನ ಮೋಸ ನನಗೆ ತೋರುತಾನೆ
ಕಂಗಳ ಕರುಳ ಕತ್ತರಿಸುತಾನೆ
ಮನದ ತಿರುಳ ಹುರಿಯುತಾನೆ
ಮಾತಿನ ಮೂಲಕೆ ಒಯ್ಯುತಾನೆ
ಅರಿವಿನ ನೆಲೆಯತ್ತ ನಡೆಸುತಾನೆ
ನನ್ನ ಒಳಗನು ನನಗೆ ಪರಿಚಯಿಸುತಾನೆ

ನನ್ನ ನನಗೊಪ್ಪಿಸಲು
ಗುರು ತೆರೆಯದ ಕಿಟಕಿಗಳಿಲ್ಲ…
ತೋರದ ದಾರಿಗಳಿಲ್ಲ…
ಹೇಳದ ಗುಟ್ಟುಗಳಿಲ್ಲ…
ಸತ್ಯದ ದಾರಿ ತೋರಿದ
ಎನ್ನ ಭಾಗ್ಯದ ಬಾಗಿಲು ನೀ
ಶರಣು ಗುರುವೇ ನಿನಗೆ ಶರಣು ಶರಣು.

Previous post ಗೆರೆ ಎಳೆಯದೆ…
ಗೆರೆ ಎಳೆಯದೆ…
Next post ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಎಲ್ಲಿದೆ ಈ ಕ್ಷಣ?
Share:
Poems

ಎಲ್ಲಿದೆ ಈ ಕ್ಷಣ?

October 21, 2024 ಕೆ.ಆರ್ ಮಂಗಳಾ
ವರ್ತಮಾನದಲ್ಲಿ ನಡೆಯಲರಿಯದೆ ನುಡಿಯಲರಿಯದೆ ಬಾಳಲರಿಯದೆ ಕಳದೇ ಹೋಗುವ ಬದುಕು ಕಾಣಲಾರದು ಯಾಕೆ- ‘ಈ ಕ್ಷಣ’? ರಾಗಾಲಾಪಗಳ ಬಣ್ಣಗಳಲಿ ಮಿಂದೇಳುತಿರುವಾಗ ಬಯಕೆ ಬೇಗುದಿಗಳಲಿ...

Comments 3

  1. ಶರಣ್ ಸ್ವಾಮಿ ಮಠಪತಿ
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  2. Sharan swami
    Oct 19, 2022 Reply

    ಜೀವಾತ್ಮನ ಮನದ ಇಂಗಿತವನ್ನ ಕವನ ಕುಂಚದಿಂದ ಚೆಂದ ಬಿಡುಸಿರವಿರಿ.
    ನದಿ ಸಾಗರ ಸೇರಲು ಹೊರಟ ಪರಿಯಂತೆ ಜೀವಾತ್ಮ ಸದಾ ಪರಮನನ್ನ ಸೇರಲು ಹವಣಿಸುವ ಪರಿ ಕಷ್ಟಕರವಾದದ್ದು ಅದನ್ನ ಭಾಷೆ ಮೂಲಕ ವ್ಯಕ್ತಪಡಿಸುವ ಶ್ರಮಕ್ಕೆ ಭಕ್ತಿಯ ಶರಣುಗಳು
    ಸಲಹೆ: ಕನ್ನಡ ಕವನದಲ್ಲಿ ಆಂಗ್ಲ ಭಾಷೆಯಾದ ಡೈನಮೈಟ್ ಪದ ಬಳಸದೆ ಇದ್ದಲ್ಲಿ ಇನ್ನು ಚೆಂದವಿತ್ತು.
    ಶರಣು ಶರಣಾರ್ಥಿ
    ಶರಣ್ ಸ್ವಾಮಿ

  3. ಪೆರೂರು ಜಾರು, ಉಡುಪಿ
    Oct 20, 2022 Reply

    ಗುರು ಅರಿವಿನ ಬಾಗಿಲಾದರೆ ಓಕೆ; ಗರುವದ ಬಾಗಿಲಾದರೆ ಜೋಕೆ; ಈಗಿನ ಗುರುಗಳನ್ನು ಕಾಣುವಾಗ ಹೊರಗೆ ಒಳಗೆ ಬರಿ ಬಯಕೆ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ
February 16, 2026
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
Copyright © 2026 Bayalu