Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶಾಂತಿ
Share:
Poems April 11, 2025 Bayalu

ಶಾಂತಿ

ಪಯಣದ ಉಬ್ಬುತಗ್ಗು ಹಾದಿಯಲಿ,
ಗಂಧದ ಕಣವಾಗು ಬಯಲಲಿ,
ಸುಮದ ದಳವಾಗು ವನದಲಿ,
ಓ ಮನವೇ,
ಕಂದನ ಮುಗ್ದ ನಗುವಾಗು.| ೧ |

ಹರುಷ ದುಗುಡಗಳ ಮೇಳದಲಿ,
ಮಧುರ ನೆನಪುಗಳ ಹೊಳೆಯಾಗು,
ಹಾಡಾಗು ಕಾಡುವ ನೋವಿಗೆ,
ಓ ಮನವೇ,
ಬಾನಲಿ ಹಾರುವ ಹಕ್ಕಿಯಾಗು. | ೨ |

ಕಷ್ಟಸುಖಗಳು ಬೆರೆತ ಬದುಕಿನಲಿ,
ಚಿಂತನೆಯ ಮುನಿಯಾಗು ಗದ್ದಲದಲಿ,
ಹರಿವ ನದಿಯಾಗು ಹರುಷದಲಿ
ಓ ಮನವೇ,
ಕರುಣೆ ಮಮತೆಗಳ ಸೆಲೆಯಾಗು. | ೩ |

ನೇಸರನ ದಿಗಂತದಂಚಿನ ಪಥದಲಿ,
ಮುಪ್ಪುದೇಹ ಕೊನೆ ಕೋರಿದಂದು,
ಮುಕ್ತನಾಗು ತುಂಬು ಹೃದಯದಲಿ,
ಓ ಮನವೇ,
ಪರಮ ಶಾಂತಿಯ ನೆಲೆಯಾಗು. | ೪ |

-ಅಂಬಳೆ ನಾಗ
(ರವೀಂದ್ರನಾಥ್ ಟಾಗೋರ್ ಅವರ ಕವಿತೆಯಿಂದ ಸ್ಫೂರ್ತಿ ಪಡೆದು)

Previous post ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
Next post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು

Related Posts

ಬರಿದಾಗುವ ಬೆರಗು
Share:
Poems

ಬರಿದಾಗುವ ಬೆರಗು

February 6, 2025 ಜಬೀವುಲ್ಲಾ ಎಂ.ಅಸದ್
ನಿಂತಲ್ಲೇ ಬಯಲು ಕೊನೆಗೊಳ್ಳದು ಗೆಳೆಯ ನಡೆಯಬೇಕು ನೀನೇ ಖುದ್ದು ಭವದ ಬೇಲಿಗಳ ದಾಟುತ್ತ ಸಾವಿರ ಹೆಜ್ಜೆಗಳ ಮಿಡಿದು ಈ ಸಮಯ ಜಗ ಹುಚ್ಚನೆಂದರೂ ಸರಿಯೇ ಹತ್ತು ಮುಳ್ಳುಗಳ ಮಧ್ಯೆ...
ಸುತ್ತಿ ಸುಳಿವ ಆಟ
Share:
Poems

ಸುತ್ತಿ ಸುಳಿವ ಆಟ

May 6, 2021 ಕೆ.ಆರ್ ಮಂಗಳಾ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ ಜೇನಿನಂಥ ಮಾತುಗಳ ನಂಬಿಬಿಟ್ಟೆ ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ ಗಿರಿಗಿಟ್ಲೆ ಆಟದಲ್ಲಿ...

Comments 3

  1. Raviraju A
    Apr 20, 2025 Reply

    ಮುಕ್ತವಾಗಲಿ ಮನವು ಎಲ್ಲಾ ಕ್ಲೀಷೆಗಳಿಂದ… ಶಾಂತ ಲಹರಿಯಂತಿದೆ ಭಾವನೆ.

  2. ಕೀರ್ತಿ ಎನ್, ಗುಂಡ್ಲುಪೇಟೆ
    Apr 28, 2025 Reply

    ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ- ಮಾರ್ಮಿಕವಾದ ಸಾಲುಗಳು. ಗಂಧದ ಕಣವಾಗುವುದು!

  3. ಉಮಾದೇವಿ ಶಂಕರಪ್ಪ
    May 1, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದುವಂತಿವೆ✌️

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಮನಸ್ಸು
ಮನಸ್ಸು
September 7, 2020
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಪೊರೆವ ದನಿ…
ಪೊರೆವ ದನಿ…
August 11, 2025
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
Copyright © 2026 Bayalu