Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
…ಬಯಲನೆ ಬಿತ್ತಿ
Share:
Poems August 11, 2025 ಜ್ಯೋತಿಲಿಂಗಪ್ಪ

…ಬಯಲನೆ ಬಿತ್ತಿ

ಅಲ್ಲಿ
ನೇತಾಡುವ
ಪಟಗಳೆಲ್ಲಾ ನಿನ್ನೆಯವು
ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ

ಕಣ್ಣೊಳಗಣ ರೂಹು ಕಣ್ಣ ಕೊಲ್ಲದು
ಕಂಗಳ ಮರೆಯ ಕತ್ತಲಿಗೆ
ಕಂಗಳೇ ಪ್ರಮಾಣ

ಪದದ ಅರ್ಥ ಬಿಟ್ಟು
ಕೊಡದ ಗುಟ್ಟು

ನಿಂದರೆ ನೆಳಲಿಲ್ಲ
ನಡೆದರೆ ಹೆಜ್ಜೆಯಿಲ್ಲ

ಊರಿಂದ ಹೋದವರು
ದೂರದ ಸುದ್ದಿ ಹೇಳರು

ಮರವೇ ಬಿದ್ದು ಒಣಗಿತು
ನೆಳಲು
ಇನ್ನೇನು ಇಲ್ಲ

ನೆಲಕ್ಕೆ ಬಿದ್ದ ಹಣ್ಣು
ಮಣ್ಣಾಗುವುದ ಕಾಯುತ್ತಾ ಇದೆ ಬೀಜ.

Previous post ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
Next post ಪೊರೆವ ದನಿ…
ಪೊರೆವ ದನಿ…

Related Posts

ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...
ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...

Comments 1

  1. ಡಾ.ಉಮೇಶ ಸೊರಬ
    Aug 13, 2025 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ” ಬಯಲನೆ ಬಿತ್ತಿ ” , ಕಾಲದ ಪರಿಧಿಯಾಚೆ ನಿಂತ ಜಾಗೃತ ಮನಸ್ಸೊಂದು ‘ ಬಯಲು ‘ ಜಿಜ್ಞಾಸೆ ಗೆ ಆತುಕೊಂಡು ಮನುಷ್ಯ ಸಂಬಂಧಗಳ ಅರ್ಥವನ್ನು ವ್ಯಾಖ್ಯಾನಿಸುವ ಅಪರೂಪದ ಕವಿತೆಯಾಗಿ ಮೂಡಿಬಂದಿದೆ.ಕವಿಯ ಅರಿವು ಮತ್ತು ಅನುಭವಗಳು ಕವಿತೆಯ ಆಶಯವನ್ನು ವಿಶೇಷ ರೂಪಕಗಳ ಮೂಲಕ ಹೃದ್ಯಗೊಳಿಸುವ ಕುಶಲಕಾರ್ಯ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.’ ಪದದ ಅರ್ಥವನ್ನು ಬಿಟ್ಟುಕೊಡದ ಗುಟ್ಟ’ ನು ಬಯಲುಮಾಡ ಹೊರಡುವ ಸಹೃದಯರಿಗೆ ಈ ಕವಿತೆ ಒಂದು ಕೌತುಕದ ಸವಾಲೇ ಆಗಿದೆ…..
    ಕವಿಗೆ ಅಭಿನಂದನೆಗಳು

Leave a Reply to ಡಾ.ಉಮೇಶ ಸೊರಬ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
Copyright © 2025 Bayalu