Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ನುಂಗಿದ ಕತ್ತಲು
Share:
Poems December 9, 2025 ಜಬೀವುಲ್ಲಾ ಎಂ.ಅಸದ್

ಬೆಳಕು ನುಂಗಿದ ಕತ್ತಲು

ಬೂದಿ ಮುಚ್ಚಿದ ಮುಗಿಲು
ಹರಿದ ಗಾಳಿ ಅಲೆಗಳಿಗೆ ನೆನೆದು
ನೆಲದ ಬಾಗಿಲು ತೆರೆದು
ತೋರಿ ಬಯಲು

ಮುರಿದ ಕೈ
ಕುಂಟುವ ಕಾಲು
ನಾಲಿಗೆ ಚಾಚಿದ ಬಯಕೆ ನೂರು
ನೋಡು… ನೋಡು… ನೋಡು…
ದಾಟುವುದಾದರೂ ಹೇಗೆ
ಈ ಆಲಯವನು?

ಏನನ್ನೂ ಕಾಣದ ಕಣ್ಣು
ಕಾಣದೇನನ್ನೋ ಅರಸುವುದು
ಉತ್ತರ ಸಿಗದ ಒಗಟಿನ ಪ್ರಶ್ನೆಗೆ
ತಲೆ ಸಿಡಿದು ಚೂರಾಗುವುದು ಸಾವಿರ

ಕಾಲಚಕ್ರದಿ ಸಿಲುಕಿದ ಬದುಕಿನ ಪುಟಗಳು
ಉಸಿರ ಬಿಗಿ ಹಿಡಿದು
ನಾಟುತ್ತಿವೆ ಬಿದಿರ ಕೊಲುಗಳನ್ನು
ಮನದ ಕೊಳದಲ್ಲಿ

ಹೇಳಿಕೊಳ್ಳಲಾಗದ ನೋವು
ನಗುವನ್ನು ಕೊಂದು ನಡೆದಿದೆ
ಕರಗಳ ಬಿರುಸಾಗಿ ಬೀಸುತ ಏಕಾಂಗಿಯಾಗಿ

ಉಳಿದಿದ್ದೇನೆ ಹೀಗೆ…
ಅಮೂರ್ತ ಸಂಕೋಲೆಗಳಲ್ಲಿ ಸಿಲುಕಿ
ಏಕಾಂತದ ಬಂಧನದಲ್ಲಿ

ಬೆಳಕು ನುಂಗಿದ ಕತ್ತಲು
ಭ್ರಮೆಯ ಕುಯಿಲು
ತೆರೆದ ಬಾಗಿಲು ಮತ್ತೆ ಮುಚ್ಚಿಹೋಗುವ ಹೊತ್ತು

ಎಲ್ಲಿದೆ ಬಿಡುಗಡೆ
ಗಮ್ಯ ಕಾಣದವನ ನಿಲುಗಡೆ.

Previous post ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
Next post ಗ್ರಹಣ
ಗ್ರಹಣ

Related Posts

ಅರ್ಥ – ವ್ಯರ್ಥ
Share:
Poems

ಅರ್ಥ – ವ್ಯರ್ಥ

April 5, 2026 ಜಬೀವುಲ್ಲಾ ಎಂ.ಅಸದ್
ಮುಗಿಲಿಗೆ ಜಿಗಿದ ಪಾದ ಮಸ್ತಕದ ಕಂದಕದಲ್ಲಿ ಚಿಗುರಿ ಶತಮಾನಗಳ ಮೊಳೆ ಹೊಡೆದ ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು ಕಾಲದ ಸಹಿಯಾಗಿ ಬದಲಾಗಿ ಉಸಿರ ಗೊರಿಯೊಳಗೆ ಬೆರೆತು ಹೆಜ್ಜೆ...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 1

  1. ಮಂದಾರಾ ವಿ ಚನ್ನಗಿ
    Dec 15, 2025 Reply

    ಮುಗಿಲು ಬಯಲಿಗೆ ಬಾಗಿಲು ತೋರುವುದೆನ್ನುವ ಕಲ್ಪನೆ👌🤌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಹುಡುಕಾಟ
ಹುಡುಕಾಟ
July 21, 2024
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
Copyright © 2026 Bayalu