Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ನುಂಗಿದ ಕತ್ತಲು
Share:
Poems December 9, 2025 ಜಬೀವುಲ್ಲಾ ಎಂ.ಅಸದ್

ಬೆಳಕು ನುಂಗಿದ ಕತ್ತಲು

ಬೂದಿ ಮುಚ್ಚಿದ ಮುಗಿಲು
ಹರಿದ ಗಾಳಿ ಅಲೆಗಳಿಗೆ ನೆನೆದು
ನೆಲದ ಬಾಗಿಲು ತೆರೆದು
ತೋರಿ ಬಯಲು

ಮುರಿದ ಕೈ
ಕುಂಟುವ ಕಾಲು
ನಾಲಿಗೆ ಚಾಚಿದ ಬಯಕೆ ನೂರು
ನೋಡು… ನೋಡು… ನೋಡು…
ದಾಟುವುದಾದರೂ ಹೇಗೆ
ಈ ಆಲಯವನು?

ಏನನ್ನೂ ಕಾಣದ ಕಣ್ಣು
ಕಾಣದೇನನ್ನೋ ಅರಸುವುದು
ಉತ್ತರ ಸಿಗದ ಒಗಟಿನ ಪ್ರಶ್ನೆಗೆ
ತಲೆ ಸಿಡಿದು ಚೂರಾಗುವುದು ಸಾವಿರ

ಕಾಲಚಕ್ರದಿ ಸಿಲುಕಿದ ಬದುಕಿನ ಪುಟಗಳು
ಉಸಿರ ಬಿಗಿ ಹಿಡಿದು
ನಾಟುತ್ತಿವೆ ಬಿದಿರ ಕೊಲುಗಳನ್ನು
ಮನದ ಕೊಳದಲ್ಲಿ

ಹೇಳಿಕೊಳ್ಳಲಾಗದ ನೋವು
ನಗುವನ್ನು ಕೊಂದು ನಡೆದಿದೆ
ಕರಗಳ ಬಿರುಸಾಗಿ ಬೀಸುತ ಏಕಾಂಗಿಯಾಗಿ

ಉಳಿದಿದ್ದೇನೆ ಹೀಗೆ…
ಅಮೂರ್ತ ಸಂಕೋಲೆಗಳಲ್ಲಿ ಸಿಲುಕಿ
ಏಕಾಂತದ ಬಂಧನದಲ್ಲಿ

ಬೆಳಕು ನುಂಗಿದ ಕತ್ತಲು
ಭ್ರಮೆಯ ಕುಯಿಲು
ತೆರೆದ ಬಾಗಿಲು ಮತ್ತೆ ಮುಚ್ಚಿಹೋಗುವ ಹೊತ್ತು

ಎಲ್ಲಿದೆ ಬಿಡುಗಡೆ
ಗಮ್ಯ ಕಾಣದವನ ನಿಲುಗಡೆ.

Previous post ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
Next post ಗ್ರಹಣ
ಗ್ರಹಣ

Related Posts

ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...
ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...

Comments 1

  1. ಮಂದಾರಾ ವಿ ಚನ್ನಗಿ
    Dec 15, 2025 Reply

    ಮುಗಿಲು ಬಯಲಿಗೆ ಬಾಗಿಲು ತೋರುವುದೆನ್ನುವ ಕಲ್ಪನೆ👌🤌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
Copyright © 2026 Bayalu