Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದ ಅಲ್ಲಮ ಇಲ್ಲದಂತೆ
Share:
Poems April 29, 2018 ಡಾ. ಶಶಿಕಾಂತ ಪಟ್ಟಣ

ಇದ್ದ ಅಲ್ಲಮ ಇಲ್ಲದಂತೆ

ಕಲ್ಯಾಣ ಹಣತೆ ಭಕ್ತಿ ರಸ ತೈಲ
ಅನುಭವ ಅಬ್ಬರ ಚಿಂತನೆ
ಹೊರಗೆ ದುಡಿ ಮದ್ದಳೆ ಸದ್ದು
ಒಳಗೊಳಗೆ ಮಿಡಿವ ತಂತಿ.

ಕಾಣಲಾಗದ ತೋರಬಾರದ
ಮಹಾ ಘನವ ತೋರಿ
ಅರಿವು ಮರೆಯ ಜಾಣ
ಅಂಧ ಮೌಢ್ಯಕೆ ಬಾಣ.

ಜಗದ ಭೂತಲದ ಕಾಲಜ್ಞಾನ
ಶಬ್ದದೊಳಗಿನ ಮಹಾ ನಿಶಬ್ದ
ಬೀಜದೊಳಗಿನ ಉಲಿವ ಮರ
ವ್ಯೋಮ ಕಾಯದ ಬಯಲು.

ಮಂತ್ರ ಗೌಪ್ಯದ ಮುನ್ನುಡಿ
ಅನುಭೂತಿಯ ಕನ್ನಡಿ
ಅಲ್ಲಾನ ಆಗಮನ ಲಾಮಾನ ನಿರ್ಗಮನ
ಮಧ್ಯ ಅಲ್ಲಮ ನಿನ್ನ ಜನನ.

ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ
ಕಲ್ಯಾಣದ ಕೀರುತಿ.
ಚರ್ಚೆ ಗೊಷ್ಠಿ ವಾದ, ಶೂನ್ಯ ಪೀಠದ ತೇಜ
ಇದ್ದ ಅಲ್ಲಮ ಇಲ್ಲದಂತೆ…

Previous post ನೆಲದ ನಿಧಾನ
ನೆಲದ ನಿಧಾನ
Next post ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಮನವೇ ಮನವೇ…
ಮನವೇ ಮನವೇ…
May 6, 2020
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಸುಮ್ಮನೆ ಇರು
ಸುಮ್ಮನೆ ಇರು
December 6, 2020
Copyright © 2026 Bayalu