Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದ ಅಲ್ಲಮ ಇಲ್ಲದಂತೆ
Share:
Poems April 29, 2018 ಡಾ. ಶಶಿಕಾಂತ ಪಟ್ಟಣ

ಇದ್ದ ಅಲ್ಲಮ ಇಲ್ಲದಂತೆ

ಕಲ್ಯಾಣ ಹಣತೆ ಭಕ್ತಿ ರಸ ತೈಲ
ಅನುಭವ ಅಬ್ಬರ ಚಿಂತನೆ
ಹೊರಗೆ ದುಡಿ ಮದ್ದಳೆ ಸದ್ದು
ಒಳಗೊಳಗೆ ಮಿಡಿವ ತಂತಿ.

ಕಾಣಲಾಗದ ತೋರಬಾರದ
ಮಹಾ ಘನವ ತೋರಿ
ಅರಿವು ಮರೆಯ ಜಾಣ
ಅಂಧ ಮೌಢ್ಯಕೆ ಬಾಣ.

ಜಗದ ಭೂತಲದ ಕಾಲಜ್ಞಾನ
ಶಬ್ದದೊಳಗಿನ ಮಹಾ ನಿಶಬ್ದ
ಬೀಜದೊಳಗಿನ ಉಲಿವ ಮರ
ವ್ಯೋಮ ಕಾಯದ ಬಯಲು.

ಮಂತ್ರ ಗೌಪ್ಯದ ಮುನ್ನುಡಿ
ಅನುಭೂತಿಯ ಕನ್ನಡಿ
ಅಲ್ಲಾನ ಆಗಮನ ಲಾಮಾನ ನಿರ್ಗಮನ
ಮಧ್ಯ ಅಲ್ಲಮ ನಿನ್ನ ಜನನ.

ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ
ಕಲ್ಯಾಣದ ಕೀರುತಿ.
ಚರ್ಚೆ ಗೊಷ್ಠಿ ವಾದ, ಶೂನ್ಯ ಪೀಠದ ತೇಜ
ಇದ್ದ ಅಲ್ಲಮ ಇಲ್ಲದಂತೆ…

Previous post ನೆಲದ ನಿಧಾನ
ನೆಲದ ನಿಧಾನ
Next post ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು

Related Posts

ಬರಿದಾಗುವ ಬೆರಗು
Share:
Poems

ಬರಿದಾಗುವ ಬೆರಗು

February 6, 2025 ಜಬೀವುಲ್ಲಾ ಎಂ.ಅಸದ್
ನಿಂತಲ್ಲೇ ಬಯಲು ಕೊನೆಗೊಳ್ಳದು ಗೆಳೆಯ ನಡೆಯಬೇಕು ನೀನೇ ಖುದ್ದು ಭವದ ಬೇಲಿಗಳ ದಾಟುತ್ತ ಸಾವಿರ ಹೆಜ್ಜೆಗಳ ಮಿಡಿದು ಈ ಸಮಯ ಜಗ ಹುಚ್ಚನೆಂದರೂ ಸರಿಯೇ ಹತ್ತು ಮುಳ್ಳುಗಳ ಮಧ್ಯೆ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
January 15, 2026
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಅಂದು-ಇಂದು
ಅಂದು-ಇಂದು
December 8, 2021
ಹಣತೆಯ ಹಂಗು
ಹಣತೆಯ ಹಂಗು
October 19, 2025
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
Copyright © 2026 Bayalu