Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಾದಿ ಕಾಲದ ಗಂಟು…
Share:
Poems November 10, 2022 ಕೆ.ಆರ್ ಮಂಗಳಾ

ಅನಾದಿ ಕಾಲದ ಗಂಟು…

ಹಗುರಾಗುತಿದೆ ಹೃದಯ
ಹೆಗಲ ಹೊರೆ ಇಳಿದು
ಭೂಮಿಗಿಂತಲೂ ವಜನ
ಹತ್ತಿಗಿಂತಲೂ ಹಗುರ
ಹೊರಲಾಗದ ಭಾರ ಹೊತ್ತಿದ್ದ
ಎದೆಗೆ, ಈಗ ಎಂಥದೋ ನಿರಾಳ…

ಕಣ್ಣುಬಿಟ್ಟಾಗಿನಿಂದ ಕಂಡದ್ದು
ಎಲ್ಲೆಲ್ಲೋ ಕೇಳಿದ್ದು
ಅವರಿವರು ಕಲಿಸಿದ್ದು
ಮೂಸಿದ್ದು ಹೊಸೆದದ್ದು
ಖಾಲಿಯಾಗದ ಗಂಟು
ಹೆಗಲೇರಿ ಕುಳಿತಿತ್ತು…

ಮುಟ್ಟಿದ್ದು ಮೂರಾಗಿ
ಇಟ್ಟಿದ್ದು ಆರಾಗಿ
ಬಗಲಚೀಲದಲಿದ್ದವು
ಚಿತ್ರವಿಭ್ರಮದ ಸರಕು
ಭವದ ಸಂತೆಯಲಿತ್ತು
ಅನಾದಿ ಕಾಲದ ಗಂಟು…

ಮಾಯೆಯೋ ಮರೆವೋ
ರೂಢಿಗೆ ಬಿದ್ದ ಚಾಳಿಯೋ
ಕಾರ್ಯ-ಕಾರಣದ ಚಕ್ರವೋ?
ಸ್ವಲಿಖಿತ ಹಣೆಬರಹವೋ
ಛಿದ್ರಚಿತ್ತದ ವ್ಯಾಧಿಯಲಿ
ನರಳುತಿದೆ ಲೋಕ…

ಬೆಳೆದಂತೆ ಭುಜವೇರುತ್ತಾ
ನರನಾಡಿಗಳ ಹಬ್ಬಿ
ನನ್ನ ನುಂಗಿ ಬಿಟ್ಟಿದ್ದು
ಈವರೆಗೂ ಅರಿವಾಗಲೇ ಇಲ್ಲ!!
ಗುರು ತೋರುವ ತನಕ
ಭಾರ ಹೊತ್ತುದೇ ತಿಳಿಯಲಿಲ್ಲ!!!

Previous post ಹಾಯ್ಕುಗಳು
ಹಾಯ್ಕುಗಳು
Next post ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?

Related Posts

ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...
ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ನೆಲದ ನಿಧಾನ
ನೆಲದ ನಿಧಾನ
April 29, 2018
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಈ ಬಳ್ಳಿ…
ಈ ಬಳ್ಳಿ…
October 21, 2024
Copyright © 2026 Bayalu